Tuesday, May 21, 2024

ಸಿದ್ರಾಮಣ್ಣ.. ನಿನ್ಗೆ ನಾಚಿಕೆ, ಮಾನ ಮರ್ಯಾದೆ ಇದ್ಯಾ? : ಆರ್. ಅಶೋಕ್

ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೈತಿಕತೆ ಪ್ರಶ್ನೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ವಿಪಕ್ಷ ನಾಯ ಆರ್. ಅಶೋಕ್ ತಿರುಗೇಟು ಕೊಟ್ಟರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ.. ನಿಮಗೆ ನಾಚಿಕೆ, ಮಾನ ಮರ್ಯಾದೆ ಇದ್ಯಾ..? ಎಂದು ಕಿಡಿಕಾರಿದರು.

ಅಮಿತ್ ಶಾಗೆ ನೈತಿಕತೆ ಇಲ್ಲ ಅಂತ ಕೇಳೋ ನಿಮಗೆ ಯಾವ ನೈತಿಕತೆ ಇದೆ? ನಿಮಗೆ ಮಾನ ಮರ್ಯಾದೆ ಇಲ್ಲ. ರೈತರಿಗೆ ಪರಿಹಾರ ಕೊಡಲು ನಿಮಗೆ ಯೋಗ್ಯತೆ ಇಲ್ಲ. ನೀವು ಯಾವ ನೈತಿಕ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳ್ತೀರಾ..? ಕರ್ನಾಟಕ ಹಾಳು ಮಾಡಿದವರು ಕಾಂಗ್ರೆಸ್​ನವರು. ನಿಮಗೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.

ಇಬ್ರೂ ಸಿಎಂ ಸೀಟ್ ಮೇಲೆ ಟವೆಲ್ ಹಾಕಿದ್ದಾರೆ

ಕಾಂಗ್ರೆಸ್​ನವರು ಎಲ್ಲರ ಕಾಲಿಗೆ ಬೀಳುವ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ ಗೋ ಬ್ಯಾಕ್ ಕೂಗು ಎಲ್ಲ ಕಡೆ ಕೇಳಿ ಬರುತ್ತಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಇಬ್ಬರೂ ಸಿಎಂ ಸೀಟ್ ಮೇಲೆ ಟವೆಲ್ ಹಾಕಿದ್ದಾರೆ. ಒಬ್ಬರು 60 ಸಾವಿರ ಲೀಡ್ ಬೇಕು ಅಂತಿದ್ದಾರೆ. ಇನ್ನೊಬ್ಬರು ಮಂಡ್ಯ ಲೋಕಸಭಾ ಕ್ಷೇತ್ರ ಗೆಲ್ಲಬೇಕು ಅಂತಿದ್ದಾರೆ. ಅವರ ಕಚ್ಚಾಟ ಹೆಚ್ಚಾಗಿದೆ, ಸೋಲ್ತೀವಿ ಅಂತ ಅವರಿಗೆ ಕನಸು ಬಿದ್ದಿದೆ. ಜನ ಕಾಂಗ್ರೆಸ್​ಗೆ ಬಾಯ್.. ಬಾಯ್.. ಹೇಳ್ತಾರೆ ಎಂದು ಲೇವಡಿ ಮಾಡಿದರು.

ನಮಗೆ ನರೇಂದ್ರ ಮೋದಿ ಅವರೇ ಅಭ್ಯರ್ಥಿ

ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿದ ಬಳಿಕ ನಮಗೆ ಮೋದಿ ಅವರೇ ಅಭ್ಯರ್ಥಿ. ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಲು ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳನ್ನು ನಾವು ಗೆಲ್ಲಲೇಬೇಕಿದೆ ಎಂದು ಆರ್. ಅಶೋಕ್ ಹೇಳಿದರು.

RELATED ARTICLES

Related Articles

TRENDING ARTICLES