ಬೆಂಗಳೂರು : ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಕುರಿತು ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಚಿಕ್ಕಪೇಟೆ ಕಾಂಗ್ರೆಸ್ ಕಾರ್ಯದರ್ಶಿ ಪ್ರಕಾಶ್ ಎಂಬುವವರಿಂದ ಬಿಜೆಪಿ ಕಾರ್ಯಕರ್ತ ಜಯಕಾಂತ್ ಶೆಟ್ಟಿ ವಿರುದ್ದ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ನಮ್ಮ ಗ್ಯಾರಂಟಿ ಕದ್ದು ಅದಕ್ಕೆ ‘ಮೋದಿ ಗ್ಯಾರಂಟಿ’ ಅಂತ ಹೆಸರಿಟ್ಟಿದ್ದಾರೆ : ಸಿದ್ದರಾಮಯ್ಯ
ಬಿಜೆಪಿ ಕಾರ್ಯಕರ್ತ ಜಯಕಾಂತ್ ಶೆಟ್ಟಿ ಎಂಬುವವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ದ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ. ಸೋನಿಯಾಗಾಂಧಿಯಿಂದ ಶ್ರೀಲಂಕಾದಲ್ಲಿ ಎರಡು ಕೋಟಿ ಜನ ಸತ್ತಿದ್ದಾರೆ. ಮುಸಲ್ಮಾನ್ರು ಈ ದೇಶದವರಲ್ಲ ಎಂದು ಅವಹೇಳನಕಾರಿಯಾಗಿ ಅಪಪ್ರಚಾರ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುತ್ತಿದ್ದಾರೆ. ಎಂದು ಆರೋಪಸಿ ಕಾಂಗ್ರೆಸ್ ಮುಖಂಡ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.