ಮಂಡ್ಯ: ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಯನ್ನ ಸೋಲಿಸಿದ್ದು ಹೆಚ್.ಡಿ ಕುಮಾರಸ್ವಾಮಿ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಜೆಡಿಎಸ್ ಚುನಾವಣಾ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು,ಚುನಾವಣೆಯಲ್ಲಿ ನಿಖಿಲ್ ನನ್ನ ಸೋಲಿಸಿದ್ದು ಕಾಂಗ್ರೆಸ್ ನವರಲ್ಲ, ಜೆಡಿಎಸ್ ನವರಲ್ಲ ಕುಮಾರಸ್ವಾಮಿ.ಅಂಬರೀಶ್ ಅವರ ಶವ ಮಂಡ್ಯಕ್ಕೆ ತೆಗೆದುಕೊಂಡು ಹೋಗೋದು ಬೇಡ ಎಂದು ಕುಟುಂಬಸ್ಥರು ಹೇಳಿದ್ರು. ಆದ್ರೆ ಶವ ತೆಗೆದುಕೊಂಡು ಹೋಗಬೇಕು’ ಅಂದಿದ್ದು ಹೆಚ್.ಡಿ ಕುಮಾರಸ್ವಾಮಿ. ಅಂಬರೀಶ್ ಗೆ ಸದ್ಗತಿ ಕೊಟ್ಟಿದ್ದು ಅಂದಿನ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಂದು ಹೇಳಿದರು.
ಇಂದಿನ ಈ ಸಭೆ ಭಾರತ ದೇಶದ ಇತಿಹಾಸ ಸೃಷ್ಟಿಸುವ ಸಭೆಯಾಗಿದೆ.ಇಂಡಿಯಾಗೆ ಸಂದೇಶ ಕೊಡುವ ಸಭೆಯಾಗಿದೆ. ದೇವೇಗೌಡರ ಅನಾರೋಗ್ಯದ ನಡುವೆಯು ರೈತರ ಪರ ಧ್ವನಿ ಎತ್ತುತ್ತಿದ್ದಾರೆ.ಕುಮಾರಣ್ಣ ಏನು ಅನುಭವಿಸುತ್ತಾರೆ ನಿಮಗೆ ಗೊತ್ತಾ? ಎರಡು ಬಾರಿ ಸರ್ಜರಿ ಆದ್ರು ಕುಳಿತುಕೊಳ್ಳಲಿಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರ ಮನೆ ಮನೆಗೆ ಹೋಗಿ ಪರಿಹಾರ ಕೊಟ್ಟರು ಎಂದರು.