Friday, September 20, 2024

ರೈತರನ್ನು ಸರ್ಕಾರ ಭಿಕ್ಷುಕರಂತೆ ಕಾಣುತ್ತಿದೆ: ಹೆಚ್​ಡಿ ಕುಮಾರಸ್ವಾಮಿ

ಹಾಸನ: ಕೊಬರಿಗೆ ಬೆಂಬಲ ಬೆಲೆ ನೀಡುವ ಮೂಲಕ ತೆಂಗು ಬೆಳೆಗಾರರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಬೆಳಗಾವಿ ಅಧಿವೇಶನ ಮುಗಿದ ಮೇಲೆ ಅರಸೀಕೆರೆಯಿಂದ ತುಮಕೂರುವರೆಗೆ ಪಾದಯಾತ್ರೆ ನಡೆಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಣೆ ಮಾಡಿದ್ದಾರೆ.

ಹಾಸನದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ರೈತರನ್ನು ಭಿಕ್ಷುಕರಂತೆ ನೋಡುತ್ತಿದೆ. ಕೊಬರಿಗೆ ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ಮೀನಾಮೇಷ ಎಣಿಸುವ ಮೂಲಕ ತನ್ನ ರೈತ ವಿರೋಧಿ ನೀತಿಯನ್ನು ಜಾಹೀರು ಮಾಡುತ್ತಿದೆ ಎಂದು ಗುಡುಗಿದರು.

ರಾಜ್ಯದಲ್ಲಿ ತೀವ್ರ ಬರಗಾಲವಿದೆ. ಹಾಸನ, ತುಮಕೂರು ಸೇರಿ ಹನ್ನೆರಡು, ಹದಿಮೂರು ಜಿಲ್ಲೆಗಳಲ್ಲಿ ಬೆಳೆಯುವ ಕೊಬರಿ ಬೆಲೆ ಶೇ.50ರಷ್ಟು ಕುಸಿದಿದೆ. ಕಳೆದ ಒಂದು ವರ್ಷದಿಂದ ಏಳೂವರೆ, ಎಂಟೂವರೆ ಸಾವಿರ ದರವನ್ನು ಮಾರುಕಟ್ಟೆಯಲ್ಲಿ ಕಾಣುತ್ತಿದ್ದೇವೆ. ಕಳೆದ ಒಂದು ವರ್ಷದಿಂದ ತೆಂಗು ಬೆಳೆಗಾರರು ಖರ್ಚು ವೆಚ್ಚ ಏನಿದೆ, ಅದಕ್ಕೆ ಸರಕಾರ ಮಧ್ಯಸ್ಥಿಕೆ ವಹಿಸಿ ಆರ್ಥಿಕ ನೆರವು ಕೊಡಲು ಒತ್ತಾಯ ಮಾಡಿದ್ದಾರೆ. ಹಲವಾರು ಹೋರಾಟಗಳಾಗಿವೆ, ವಿಧಾನಸಭಾ ಕಲಾಪದಲ್ಲಿ ಚರ್ಚೆಗಳು ನಡೆದಾಗ ಕಾಂಗ್ರೆಸ್‌ನ ಸದಸ್ಯರು ಕೇಂದ್ರ ಸರ್ಕಾರದ ಮೇಲೆ ವಿರೋಧ ಪಕ್ಷಗಳು ಒತ್ತಡ ತರಬೇಕು ಎಂದರು.

ಇದನ್ನೂ ಓದಿ: ನಾರಾಯಣಗುರುಗಳ ಅಧ್ಯಯನ ಪೀಠದ ಅನುಷ್ಠಾನದ ಬಗ್ಗೆ ಸರ್ಕಾರ ಗಮನ ಹರಿಸಲಿದೆ: ಸಿಎಂ

ಎನ್‌ಡಿಎ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ, ದೇವೇಗೌಡರ ಆದಿಯಾಗಿ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದಿದ್ದಾರೆ. ಹಾಸನ ಜಿಲ್ಲೆಯ ಶಾಸಕರೊಬ್ಬರ ರೈತರ ಪರವಾದ ಕಾಳಜಿ ಕಂಡಿದ್ದೇನೆ. ಕಾಂಗ್ರೆಸ್ ಜೆಡಿಎಸ್ ಶಾಸಕರ ನಡುವೆ ಸಂಘರ್ಷ, ಮಾತಿನ ಚಕಮಕಿ ನಡೆದಿದ್ದನ್ನು ಗಮನಿಸಿದ್ದೇನೆ. ನಾಫೆಡ್ ಅಧಿಕಾರಿಗಳು, ಸರಕಾರದ ಅಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ನಾಫೆಡ್‌ನಲ್ಲಿ ಪ್ರತಿವರ್ಷ ಜನವರಿಯಿಂದ ಆರು ತಿಂಗಳ ಕಾಲ ಕೇಂದ್ರದ ಎಂಎಸ್‌ಪಿ ದರದಲ್ಲಿ ಖರೀದಿ ಮಾಡುತ್ತಿದೆ. ಕೇಂದ್ರದ ಮಾರ್ಗಸೂಚಿ ಸ್ವಲ್ಪ ರೈತರಿಗೆ ಕಷ್ಟವಾಗುತ್ತದೆ. 50 ಸಾವಿರದ 180 ಟನ್ ಕೊಬ್ಬರಿ ಕೇಂದ್ರ ಖರೀದಿ ಮಾಡಿದ್ದಾರೆ.

12,00 ರೂ. ಬೆಂಬಲ ಬೆಲೆ ಕೊಟ್ಟು ಈ ಸರಕಾರ ರೈತರನ್ನು ಭಿಕ್ಷಕುರಂತೆ ನಡೆಸಿಕೊಂಡಿದೆ. 5000 ಕೋಟಿ ಕೆಜಿ ಕೊಬರಿಗೆ 11,5700 ಕೋಟಿ ರೂ. ನೀಡಿ ಕೇಂದ್ರ ಖರೀದಿ ಮಾಡಿದೆ. ಕೇಂದ್ರಕ್ಕೆ 590 ಕೋಟಿ ರೂ. ಬೆಂಬಲ ಬೆಲೆ ಕೇಂದ್ರ ಸರಕಾರಕ್ಕೆ ಹೊರೆಯಾಗುತ್ತದೆಯೇ? ಇದರಲ್ಲಿ ರಾಜ್ಯ ಸರಕಾರದ ಬೆಂಬಲ ಬೆಲೆ 60 ಕೋಟಿ ರೂ. ಸೇರುತ್ತದೆ. ಇವನ್ನೆಲ್ಲಾ ಸರಕಾರಗಳು ಎಂದು ಕರೀಬೇಕಾ? ಮೂರೂವರೆ ಲಕ್ಷ ರೂ. ಬಜೆಟ್ ಮಂಡನೆ ಮಾಡುವ ಸರಕಾರ ರೈತರನ್ನು ಯಾವ ರೀತಿ ನೋಡುತ್ತಿದೆ. ಕಾಂಗ್ರೆಸ್‌ ಪಕ್ಷದ ಸಂಸದನ ಮನೆಯಲ್ಲಿ 300 ಕೋಟಿ ಕಪ್ಪುಹಣ ಸಿಕ್ಕಿದೆ, ಇದು ನಮ್ಮ‌ ದೇಶ ಎಂದು ಮಾಜಿ ಮುಖ್ಯಮಂತ್ರಿಗಳು ಬೇಸರ ವ್ಯಕ್ತಪಡಿಸಿದರು.

ಸಚಿವ ಶಿವಾನಂದ ಪಾಟೀಲ್ ಅವರು ಎರಡು ಲಕ್ಷ ಟನ್ ಕೊಬರಿ ಉತ್ಪಾದನೆ ಇದೆ ಎಂದು ಹೇಳಿದ್ದಾರೆ. ಅಷ್ಟನ್ನು ಎರಡು ಸರಕಾರಗಳು ಖರೀದಿ ಮಾಡಿದರೆ 2,500 ಕೋಟಿ ರೂ. ಬರಬಹುದು. 1,500 ಕೋಟಿ ರೂ. ಸರಕಾರಕ್ಕೆ ವಾಪಸ್ ಬರುತ್ತದೆ. ಈ ಸರಕಾರದ ನೀತಿಯನ್ನು ನಾಡಿನ ಜನತೆ, ರೈತರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ನಮ್ಮ ಶಾಸಕರ ಜತೆ ಚರ್ಚೆ ಮಾಡುತ್ತೇನೆ. ಕೊಬರಿ ಬೆಳೆಯುವ ರೈತರಲ್ಲಿ ಮನವಿ ಮಾಡುತ್ತೇನೆ. ಎರಡು ಸರಕಾರಗಳ ಕಣ್ಣು ತೆರೆಸಲು ಅರಸೀಕೆರೆಯಿಂದ ತುಮಕೂರುವರೆಗೆ ಪಾದಯಾತ್ರೆ ಮಾಡುತ್ತೇನೆ. ನನಗೆ ಆರೋಗ್ಯ ಸಮಸ್ಯೆಯಿದೆ, ಅದಕ್ಕೆ ಹೆದರಿ ಕೂರಲ್ಲ. ಅಧಿವೇಶನ ಮುಗಿದ ಮೇಲೆ ಪಾದಯಾತ್ರೆ ಕೈಗೊಳ್ಳುತ್ತೇನೆ ಎಂದ ಅವರು, ಎನ್‌ಡಿಎ ಜತೆ ಮೈತ್ರಿ ಆಗಿದೆ ಎಂದು ಮೃದುಧೋರಣೆ ತೋರಲ್ಲ. ನಾನೇ ಸಿಎಂ ಆಗಿ ಅಧಿಕಾರದಲ್ಲಿ ಇದ್ದಿದ್ದರೆ ಕ್ವಿಂಟಾಲ್ ಕೊಬರಿಗೆ ಹದಿನೈದು ಸಾವಿರ ರೂ. ಘೋಷಣೆ ಮಾಡುತ್ತಿದ್ದೆ. ನನ್ನ ಮನಸ್ಸಿಗೆ ನೋವಿದೆ, ಈ ಜನಗಳಲ್ಲಿ ಯಾವಾಗ ತಿಳಿವಳಿಕೆ ಬರುತ್ತದೆ ಎಂದು ಎಂದು ಅವರು ನೋವು ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES