ಹಾಸನ: ಆರ್ಸಿಬಿ ಗೆಲುವಿನ ಸಂಭ್ರಮಕ್ಕೆ ಸಾಕ್ಷಿಯಾಗಲು ತೆರಳಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ನೆನ್ನೆಯ ಬೆಂಗಳೂರಿನ ಘೋರ ಘಟನೆ ಇಡೀ ರಾಜ್ಯವನ್ನೇ ಶೋಕ ಸಾಗರಕ್ಕೆ ದೂಡಿದೆ. ದುರ್ಘಟನೆಯಲ್ಲಿ ಹಾಸನದ ಭೂಮಿಕ್ ಸಾವನ್ನಪ್ಪಿದ್ದು. ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ :ಎರಡನೇ ಮದುವೆಯಾದ ಸಂಸದೆ ಮಹುವಾ ಮೊಯಿತ್ರಾ; ಪೋಟೋ ವೈರಲ್
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದ ಲಕ್ಷ್ಮಣ್ ತಮ್ಮ ಮಗನನ್ನು ಕಳೆದುಕೊಂಡಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ಮಾಡಿಕೊಂಡು ಸಾಕಷ್ಟು ಸಂಪಾದನೆ ಮಾಡಿ ದೊಡ್ಡ ಮಟ್ಟಕ್ಕೆ ಬಂದಿದ್ದಾರೆ. ಇವರದ್ದು ವೆಲ್ ಸೆಟಲ್ಡ್ ಫ್ಯಾಮಿಲಿ. ಮೊನ್ನೆ ಮೊನ್ನೆಯಷ್ಟೇ ದೊಡ್ಡ ಕನಸಿನ ಮನೆ ಕಟ್ಟಿ ಖುಷಿಯಾಗಿದ್ದರು. ತಮ್ಮ ಇದ್ದ ಒಬ್ಬನೇ ಮಗನಿಗಾಗಿ ಸಾಕಷ್ಟು ಆಸ್ತಿ ಮಾಡಿದ್ದಾರೆ. ಇದನ್ನೂ ಓದಿ :ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ RCB
ಇನ್ನು ಭೂಮಿಕ್ ದ್ವಿತೀಯ ವರ್ಷದ ಇಂಜಿನಿಯರಿಂಗ್ ಪದವಿ ಓದುತ್ತಿದ್ದ, ಈತನನ್ನ ಅಪ್ಪ ಅಮ್ಮ ಮುದ್ದಾಗಿಯೇ ಸಾಕಿದ್ದರು. ಭೂಮಿಕ್ ಕೂಡ ತನ್ನ ತಂದೆ ತಾಯಿಗೆ ವಿನೀಯತೆಯಿಂದ ಪ್ರೀತಿಯಿಂದ ಇದ್ದ ಹುಡುಗ. ಮೊನ್ನೆಯಷ್ಟೇ ಆರ್ಸಿಬಿ ಗೆಲುವನ್ನ ಮನೆಯಲ್ಲೇ ಸಂಭ್ರಮಿಸಿದ್ದ ಈತ ಬೆಂಗಳೂರಿಗೆ ಬಂದ ಆರ್ಸಿಬಿ ಆಟಗಾರರ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಸೆಯಿಂದ ತನ್ನ ಸ್ನೇಹಿತನ ಜೊತೆ ಹೋಗಿದ್ದಾನೆ. ಆದರೆ ಅಲ್ಲಿ ನಡೆದ ವಿಧಿಯಾಟಕ್ಕೆ ಅಮಾಯಕ ಭೂಮಿಕ್ ಬಲಿಯಾಗಿದ್ದಾನೆ. ಇದನ್ನೂ ಓದಿ :ಏಕಾಏಕಿ ಮುರಿದು ಬಿತ್ತು ಸ್ಲೀಪರ್ ಕೋಚ್ ಬಸ್ ಸೀಟ್; KSRTCಗೆ ಹಿಡಿಶಾಪ ಹಾಕಿದ ಪ್ರಯಾಣಿಕರು
ಮುಗಿಲು ಮುಟ್ಟಿದೆ ಪೋಷಕರ ಆಕ್ರಂದನ..!
ಮಗನ ಸಾವಿನಿಂದ ಜರ್ಜರಿತರಾಗಿರೋ ಭೂಮಿಕ್ ಪೋಷಕರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಣ್ಣೀರಿನ ಶಾಪ ಹಾಕಿದ್ದಾರೆ. ನನ್ನ ಮಗ ಪೊರ್ಕಿ ಅಲ್ಲಾ ಒಂದು ದಿನವೂ ಕಾಲೇಜಿಗೆ ತಪ್ಪಿಸುತ್ತಿರಲಿಲ್ಲ. ನಮ್ಮಮಾತಿಗೆ ಒಂದು ದಿನ ಎದುರು ಮಾತಾಡಿಲ್ಲ, ಇದ್ದ ಒಬ್ಬ ಮಗನನ್ನು ಕಳೆದುಕೊಂಡಿದ್ದೇವೆ ಈ ಸರ್ಕಾರಕ್ಕೆ ನಮ್ಮ ಕಣ್ಣೀರಿನ ಶಾಪ ತಟ್ಟೇ ತಟ್ಟುತ್ತೇ,ಡಿಕೆ ಶಿವಕುಮಾರ್ ಬಂದು ನಮ್ಮ ಕಷ್ಟ ನೋಡಿ ನಿಮಗೆ ವಾಸ್ತವತೆ ಅರ್ಥವಾಗುತ್ತೆ, ನಮ್ಮ ಮಗನದ್ದು ಸಾವಲ್ಲ ಕೊಲೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ :ಭೀಕರ ಕಾಲ್ತುಳಿತ; ವರ್ಷದ ಹಿಂದೆ ಮದುವೆ, ಪತಿ ಜೊತೆ ಸ್ಟೇಡಿಯಂಗೆ ಬಂದಿದ್ದ ಪತ್ನಿ ಸಾವು
ಮೃತ ಭೂಮಿಕ್ ಅಂತ್ಯಕ್ರಿಯೆ ಸ್ವಗ್ರಾಮ ಕುಪ್ಪಗೋಡಿನಲ್ಲಿ ನಡೆದಿದ್ದು. ಆತ ಸಾಕಿದ್ದ ಶ್ವಾನಗಳು ಕೂಡ ಭೂಮಿಕ್ಗೆ ಮುತ್ತಿಕ್ಕಿ ಅಂತಿಮ ವಿದಾಯ ಹೇಳಿವೆ, ಆದರೆ ಸರ್ಕಾರದ ನಿರ್ಲಕ್ಷ, ದುರಾಡಳಿತದಿಂದ 11 ಅಭಿಮಾನಿಗಳು ಸಾವನ್ನಪ್ಪಿರುವುದು ಮಾತ್ರ ವಿಪರ್ಯಾಸ.
ಹೆಚ್ಚಿನ ಸುದ್ದಿಗಾಗಿ ಫಾಲೋ ಮಾಡಿ: https://whatsapp.com/channel/0029Va5cjRY9Gv7Tls4bhb1n