ವಿಜಯನಗರ: ದೇಶದಲ್ಲೇ ಅತ್ತುತ್ತಮ ಸಮೂಹ ಸಾರಿಗೆಗಳ ಪೈಕಿ KSRTC ಕೂಡ ಒಂದಾಗಿದೆ. ಆದರೆ ಇತ್ತೀಚೆಗೆ ರಾಯರ ಕುದುರಿ ಕತ್ತೆಯಾಗುವ ರೀತಿ ಕೆಎಸ್ಆರ್ಟಿಸಿ ಬಸ್ಗಳು ಸರಿಯಾದ ನಿರ್ವಹಣೆಗಳಿಲ್ಲದೆ ಹಾಳಾಗುತ್ತಿವೆ. ಇದಕ್ಕೆ ಉದಾಹರಣೆಯಾಗಿ ಕಲ್ಯಾಣ ಕರ್ನಾಟಕ ಸಾರಿಗೆಯ ಸ್ಪೀಪರ್ ಕೋಚ್ನ ಅಪ್ಪರ್ ಸೀಟ್ ಕುಸಿದು ಬಿದ್ದಿದ್ದು. ಕೆಳಗೆ ಮಲಗಿದ್ದ ಪ್ರಯಾಣಿಕರು ಸ್ಪಲ್ಪದರಲ್ಲೇ ಪಾರಾಗಿದ್ದಾರೆ. ಇದನ್ನೂ ಓದಿ :ಜನ ಪ್ರಾಣ ಕಳ್ಕೊಂಡಿದ್ದಾರೆ, ಒಳಗೆ ಸೆಲಬ್ರೇಷನ್ ಯಾಕ್ ಬೇಕಿತ್ತು; 1 ಕೋಟಿ ಪರಿಹಾರಕ್ಕೆ ಆಗ್ರಹಿಸಿದ ಬಿ,ಕೆ ಹರಿಪ್ರಸಾದ್
ಕಲಬುರಗಿಯಿಂದ ಹೊಸಪೇಟೆಗೆ ಮಾರ್ಗವಾಗಿ ಚಲಿಸುತ್ತಿದ್ದ KA-35 F-138 ನಂಬರ್ ಬಸ್ನಲ್ಲಿ ಘಟನೆ ನಡೆದಿದ್ದು. ನಿನ್ನೆ ತಡರಾತ್ರಿ ಸೀಟ್ ಕುಸಿದು ಬಿದ್ದಿದೆ. ಬಸ್ನ ಅಪ್ಪರ್ ಸೀಟ್ ಕುಸಿದು ಬಿದ್ದಿದ್ದು. ಕೆಳಗೆ ಮಲಗಿದ್ದ ಪ್ರಯಾಣಿಕರು ಸ್ವಲ್ಪದರಲ್ಲೇ ಅಪಾಯದಿಂದ ಪರಾಗಿದ್ದಾರೆ. ಘಟನೆಯಿಂದ ಕೆಲಕಾಲ ಬಸ್ನಲ್ಲಿ ಆತಂಕದ ವಾತವರಣ ನಿರ್ಮಾಣವಾಗಿದ್ದು. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ:‘ಸಿನಿಮಾ ತುಂಬಾ ಕೆಟ್ಟದಾಗಿದೆ’; ಥಗ್ಲೈಫ್ ಸಿನಿಮಾಗೆ ಛೀಮಾರಿ ಹಾಕಿದ ತಮಿಳು ಪ್ರೇಕ್ಷಕರು
ಘಟನೆ ಬಗ್ಗೆ ಪ್ರಯಾಣಿಕರು ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದು. ಬಸ್ಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.