Friday, June 6, 2025

ಜನ ಪ್ರಾಣ ಕಳ್ಕೊಂಡಿದ್ದಾರೆ, ಒಳಗೆ ಸೆಲಬ್ರೇಷನ್​ ಯಾಕ್​​ ಬೇಕಿತ್ತು; 1 ಕೋಟಿ ಪರಿಹಾರಕ್ಕೆ ಆಗ್ರಹಿಸಿದ ಬಿ,ಕೆ ಹರಿಪ್ರಸಾದ್​

ಮಂಗಳೂರು : ಆರ್​ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿರುವ ಕುರಿತು ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದು. ‘ 11 ಜನರ ಸಾವಿಗೆ ಯಾರು ಹೊಣೆ ಅಂತ ಸರ್ಕಾರ ಹೇಳಬೇಕು. ಜನ ಆಚೆ ಸಾವನ್ನಪ್ಪಿರವ ಸಂದರ್ಭದಲ್ಲಿ, ಸಂಭ್ರಮಚರಣೆಯನ್ನ ನಿಲ್ಲಿಸಬೇಕಿತ್ತು ಎಂದು ಹೇಳಿದ್ದಾರೆ. ಜೊತೆಗೆ ಮೃತರ ಕುಟುಂಬಕ್ಕೆ ಬಿಸಿಸಿಐ 1 ಕೋಟಿ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ :‘ಸಿನಿಮಾ ತುಂಬಾ ಕೆಟ್ಟದಾಗಿದೆ’; ಥಗ್​ಲೈಫ್​ ಸಿನಿಮಾಗೆ ಛೀಮಾರಿ ಹಾಕಿದ ತಮಿಳು ಪ್ರೇಕ್ಷಕರು

ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬಿ,ಕೆ ಹರಿಪ್ರಸಾದ್​ “ಯಾವುದೋ ಒಂದು ಭಾವನೆ ಮತ್ತು ಹರ್ಷೋದ್ಘಾರದಲ್ಲಿ ವಿಜಯೋತ್ಸವ ಮಾಡುವಾಗ ಘಟನೆ ನಡೆದಿದೆ. ಏನಾಗಿದೆ, ಏನಾಗಿಲ್ಲ ಅನ್ನೋದನ್ನ ಮುಖ್ಯಮಂತ್ರಿಗಳು ಹೇಳಬೇಕಾಗುತ್ತದೆ. ಈ ಐಪಿಎಲ್ ನಡೆಸೋರು ಕರೋಡ್ ಪತಿಗಳಲ್ಲ, ಸಾವಿರಾರು ಕೋಟಿ ಮಾಲೀಕರು, ಈಗಿರುವಾಗ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಬಿಸಿಸಿಐ ಒಂದೊಂದು ಕೋಟಿ ಕೊಡಬೇಕು. ಸರ್ಕಾರ ಬಿಸಿಸಿಐನಿಂದ ಪರಿಹಾರ ಕೊಡಿಸಬೇಕು ಎಂದು ಹೇಳಿದರು. ಇದನ್ನೂ ಓದಿ :ಭೀಕರ ಕಾಲ್ತುಳಿತ; ವರ್ಷದ ಹಿಂದೆ ಮದುವೆ, ಪತಿ ಜೊತೆ ಸ್ಟೇಡಿಯಂಗೆ ಬಂದಿದ್ದ ಪತ್ನಿ ಸಾವು

ಮೃತರಿಗೆ ಸಂತಾಪ ಸೂಚಿಸಿದ ಹರಿಪ್ರಸಾದ್ “ಎಲ್ಲರೂ ದುಃಖದಲ್ಲಿದ್ದಾರೆ, ಹಾಗಾಗಿ ಏನೂ ಹೇಳಲು ಹೋಗಲ್ಲ
ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ದುಃಖ ತಡೆದುಕೊಳ್ಳಲು ಭಗವಂತ ಶಕ್ತಿ ಕೊಡಲಿ. ಸರ್ಕಾರದ ಏನ್ ಮಾಡಿದೆ ಏನ್ ಮಾಡಿಲ್ಲ ಅಂತ ನಾನು ಜವಾಬ್ದಾರಿ ಸ್ಥಾನದಲ್ಲಿ ನಿಂತುಕೊಂಡು ಹೇಳಲು ಆಗಲ್ಲ. ಈ ಕುರಿತು ಸಿಎಂ, ಡಿಸಿಎಂ ಮತ್ತು ಗೃಹ ಸಚಿವರು ತಿಳುವಳಿಕೆ ಕೊಡಬೇಕು. ಇದನ್ನೂ ಓದಿ :ಜುಲೈ 21ರಿಂದ ಸಂಸತ್ ಮುಂಗಾರು ಅಧಿವೇಶನ; ಆಪರೇಷನ್​ ಸಿಂಧೂರ್​ ಬಗ್ಗೆ ಚರ್ಚೆ

ಚಿನ್ನಸ್ವಾಮಿ ಕ್ರೀಡಾಂಗಣದ ಕೆಪಾಸಿಟಿ ಇರೋದು ಕೇವಲ 35 ಸಾವಿರ, ಆದರೆ ಉಚಿತ ಪ್ರವೇಶ ಅಂದ ತಕ್ಷಣ ಅಲ್ಲಿಗೆ ಮೂರು ಲಕ್ಷ ಜನ ಬಂದಿದ್ದಾರೆ. ಸಾವಿರ ಜನರಿಗೆ ಒಬ್ಬ ಪೊಲೀಸ್​ ನಮ್ಮಲ್ಲಿದ್ದಾರೆ. ಇದರಿಂದಾಗಿ ಹೆಚ್ಚು ಕಡಿಮೆ ಆಗಿದೆ. ಅಷ್ಟೇ ಅಲ್ಲದೇ ಹೊರಗಡೆ ಸಾವು ಸಂಭವಿಸಿರುವಾಗ, ಒಳಗೆ ಸೆಲಬ್ರೇಷನ್​ ನಿಲ್ಲಿಸಬೇಕಿತ್ತು. ಹೈಕೋರ್ಟ್​ಗೆ ಸುಮುಟೋ ಕೇಸ್ ಮಾಡುವ ಎಲ್ಲಾ ಹಕ್ಕಿದೆ, ಅದೇ ಥರ ಎಲ್ಲದರಲ್ಲೂ ಮಾಡಿದರೆ ಒಳ್ಳೆಯದು
ಹನ್ನೊಂದು ಜನರ ಸಾವಿಗೆ ಯಾರು ಹೊಣೆ ಅಂತ ಸರ್ಕಾರ ಹೇಳಬೇಕು ಎಂದು ಬಿ.ಕೆ ಹರಿಪ್ರಾಸದ್ ಆಗ್ರಹಿಸಿದ್ದಾರೆ. ಇದನ್ನೂ ಓದಿ :‘ಕನ್ನಡದ ನಟರು ತಮಿಳಿನಲ್ಲಿ ನಟಿಸುತ್ತಿದ್ದಾರೆ’; ಪರೋಕ್ಷವಾಗಿ ಬೆದರಿಕೆ ಹಾಕಿದ ತಮಿಳು ನಿರ್ಮಾಪಕರು

RELATED ARTICLES

Related Articles

TRENDING ARTICLES