ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಗೆ ತೆರೆಬಿದ್ದಿದೆ. 17 ವರ್ಷಗಳ ವನವಾಸದ ನಂತರ RCB ಕೊನೆಗೆ ಕಪ್ ಮುಡಿಗೇರಿಸಿಕೊಂಡಿದೆ. ಇದರ ನಡುವೆ ಚೆನೈ ವಿರುದ್ದ ನಡೆದ 52ನೇ ಪಂದ್ಯ ಮುಗಿದ ನಂತರ ಸ್ಟೇಡಿಯಂ ಹೊರಗಡೆ ಆರ್ಸಿಬಿ ಅಭಿಮಾನಿಗಳ ಅಭಿಮಾನ ಕಂಡ ಕೃನಾಲ್ ಪಾಂಡ್ಯ ‘ಈ ಅಭಿಮಾನಿಗಳಿಗಾಗಿ ಕಪ್ ಗೆಲ್ಲಬೇಕು ಎಂದು ಶಪಥ ಮಾಡಿದ್ದರು. ಈಗ ಕಪ್ ಗೆಲ್ಲುವ ಮೂಲಕ ಆರ್ಸಿಬಿ ಅಭಿಮಾನಿಗಳಿಗೆ ನೀಡಿದ್ದ ಮಾತನ್ನ ಕೃನಾಲ್ ಪಾಂಡ್ಯ ಉಳಿಸಿಕೊಂಡಿದ್ದಾರೆ. ಇದನ್ನೂ ಓದಿ :ಬಸ್ & ಲಾರಿ ನಡುವೆ ಭೀಕರ ಅಪಘಾತ; ಮಹಿಳೆ ಸಾ*ವು, 15ಕ್ಕೂ ಅಧಿಕ ಜನರಿಗೆ ಗಾಯ
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 52ನೇ ಪಂದ್ಯದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 213 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೇವಲ 211 ರನ್ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಈ ಪಂದ್ಯದಲ್ಲಿ ಆರ್ಸಿಬಿ 2 ರನ್ಗಳ ಮೂಲಕ ರೋಚಕ ಗೆಲುವು ದಾಖಲಿಸಿತ್ತು.ಇದನ್ನೂ ಓದಿ:IPL 2025; ಆರ್ಸಿಬಿ ಗೆಲ್ಲುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಮಾಜಿ ಪ್ರಧಾನಿ ರಿಷಿ ಸುನಕ್
ಈ ಗೆಲುವಿನ ನಂತರ ಸ್ಟೇಡಿಯಂನಿಂದ ಹೊರ ಬಂದ ಆಟಗಾರರನ್ನು ಸ್ವಾಗತಿಸಿಕೊಂಡ ಅಭಿಮಾನಿಗಳು. ರಸ್ತೆಯುದ್ದಕ್ಕೂ ಆರ್ಸಿಬಿ ಪರ ಘೋಷಣೆಗಳನ್ನ ಕೂಗುತ್ತ ಹರ್ಷೋದ್ಗಾರ ವ್ಯಕ್ತಪಡಿಸಿದ್ದರು. ಮಧ್ಯರಾತ್ರಿ ಯವರೆಗೆ ಕಾದು ನಿಂತು ತೋರಿದ ಈ ಅಭಿಮಾನಕ್ಕೆ ಆರ್ಸಿಬಿ ಆಟಗಾರರು ಪುಳಕಿತರಾಗಿದ್ದರು ಅಷ್ಟೇ ಅಲ್ಲದೆ ಈ ಕ್ರೇಝ್ ನೋಡಿ ರೋಮಾಂಚನಗೊಂಡ ಕೃನಾಲ್ ಪಾಂಡ್ಯ, “ಈ ಸಲ ಇವರಿಗಾಗಿ ನಾವು ಕಪ್ ಗೆಲ್ಲಲೇಬೇಕು” ಎಂದು ಶಪಥ ಮಾಡಿದ್ದರು. ಈ ಶಪಥವನ್ನು ಇದೀಗ ಪಾಂಡ್ಯ ಈಡೇರಿಸಿದ್ದಾರೆ. ಅದು ಕೂಡ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ.
ಈಗಾಗಲೇ ಮುಂಬೈ ತಂಡದಲ್ಲಿ ಮೂರು ಭಾರಿ ಕಪ್ ಗೆದ್ದಿರುವ ಕೃನಾಲ್ ಪಾಂಡ್ಯ ನಿನ್ನೆ ಪಂಜಾಬ್ ಕಿಂಗ್ಸ್ ವಿರುದ್ದ ನಡೆದ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿಸಿದ್ದು. ಇಡೀ ಪಂದ್ಯದ ಗತಿಯನ್ನೇ ಬದಲಾಯಿಸಿದ್ದಾರೆ. ಫಿಂಗರ್ ಸ್ಪಿನ್ ಮೂಲಕ ದಾಳಿ ಸಂಘಟಿಸಿದ ಕೃನಾಲ್ ಪಾಂಡ್ಯ 4 ಓವರ್ಗಳಲ್ಲಿ ನೀಡಿದ್ದು ಕೇವಲ 17 ರನ್ಗಳನ್ನು ಬಿಟ್ಟುಕೊಟ್ಟು, 2 ವಿಕೆಟ್ಗಳನ್ನು ಪಡೆದರು. ಇದನ್ನೂ ಓದಿ:RCB ಗೆಲುವಿಗೆ ರಾಜ್ಯಪಾಲರಿಂದ ಅಭಿನಂದನೆ; ಈ ಸಲ ಕಪ್ ನಮ್ದು ಎಂದು ಸಿಎಂ ಸಿದ್ದರಾಮಯ್ಯ ಸಂತಸ
ಈ ಮೂಲಕ ತಿಂಗಳ ಹಿಂದೆ ಆರ್ಸಿಬಿ ಅಭಿಮಾನಿಗಳ ಮುಂದೆ ಮಾಡಿದ ಶಪಥವನ್ನು ಕೃನಾಲ್ ಪಾಂಡ್ಯ ಈಡೇರಿಸಿದ್ದಾರೆ. ಅಷ್ಟೇ ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.