ಬೆಂಗಳೂರು : ಕಳೆದ ಕೆಲದಿನಗಳಿಂದ ಪವರ್ ಟಿವಿಯಲ್ಲಿ ಭಿತ್ತರಗೊಂಡ ಸ್ಮಾರ್ಟ್ ಮೀಟರ್ ಹಗರಣದ ಕುರಿತು ಶಾಸಕ ಅಶ್ವಥ್ ನಾರಾಯಣ ಸುದ್ದಿಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದ್ದು. ಸ್ಮಾರ್ಟ್ ಮೀಟರ್ ಟೆಂಡರ್ನಲ್ಲಿ ಸುಮಾರು 15,568 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಹೇಳಿದ್ದಾರೆ.
ಸ್ಮಾರ್ಟ್ಮೀಟರ್ ಗಳ ಖರೀದಿಯಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಆಗಿದೆ, ರಾಜಶ್ರೀ ಕಂಪನಿಗೆ ಅನುಕೂಲ ಆಗುವಂತೆ ಟೆಂಡರ್ ಕರೆಯಲಾಗಿದೆ. ಕೆಟಿಪಿಪಿ ಕಾಯ್ದೆ ಪ್ರಕಾರ ಈ ಸ್ಮಾರ್ಟ್ ಮೀಟರ್ ಟೆಂಡರ್ ಪಡೆದುಕೊಳ್ಳುವ ಸಂಸ್ಥೆ ಬಳಿ 6800 ಕೋಟಿ ಬಿಡ್ ಸಾಮರ್ಥ್ಯ ಮೊತ್ತ ಇರಬೇಕು. ಆದರೆ ಟೆಂಡರ್ ಪಡೆದಿರುವ ರಾಜಶ್ರೀ ಕಂಪನು ಬಳಿ ಕೇವಲ 400 ಕೋಟಿ ಇದೆ. ಟೆಂಡರ್ ಮೌಲ್ಯ 1920 ಕೋಟಿ ಇಡಬೇಕಿತ್ತು, ಆದ್ರೆ ಟೆಂಡರ್ನಲ್ಲಿ ಇಟ್ಟಿದ್ದು ಕೇವಲ 107 ಕೋಟಿ ಇಟ್ಟಿದ್ದಾರೆ.
ಇದನ್ನೂ ಓದಿ : ಡಿಕೆಶಿ ವಿರುದ್ದ ಆಕ್ರೋಶ, ನಡುರಸ್ತೆಯಲ್ಲಿ ಬಂಡೆಯನ್ನು ಪುಡಿಗೈದ ಮಂಡ್ಯ ಜನತೆ..!
ಅಷ್ಟೇ ಅಲ್ಲದೆ ಬ್ಲಾಕ್ಲಿಸ್ಟ್ನಲ್ಲಿ ಇರುವ ಸಂಸ್ಥೆಗೆ ಟೆಂಡರ್ ಕೊಡುವಂತಿಲ್ಲ ಅಂತ ಕೆಟಿಟಿಪಿ ಕಾಯ್ದೆಯಲ್ಲಿದೆ ಆದರೆ ಉತ್ತರ ಪ್ರದೇಶದಲ್ಲಿ ಬ್ಲಾಕ್ಲಿಸ್ಟ್ ಆಗಿದ್ದ ಬಿಸಿಐಟಿಎಸ್ ಕಂಪೆನಿಗೆ ಸಾಪ್ಟ್ವೇರ್ ಟೆಂಡರ್ ಕೊಟ್ಟಿದ್ದಾರೆ ಎಂದು ಇಂಧನ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಶಾಸಕ ಅಶ್ವಥ್ ನಾರಯಣ “ಬೆಸ್ಕಾಂ ಸೇರಿ ಎಲ್ಲ ಎಸ್ಕಾಂಗಳ ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್ನಲ್ಲಿ 15,568 ಕೋಟಿ ಮೊತ್ತದ ಹಗರಣ ಆಗಿದೆ. ಇದು ರಾಜ್ಯದ ಬಹು ದೊಡ್ಡ ಹಗರಣ. KERC ಗೈಡ್ಲೈನ್ಸ್ ಪ್ರಕಾನ ಮೀಟರ್ ಕಡ್ಡಾಯ ಮಾಡುವಂತಿಲ್ಲ. ಕೇಂದ್ರ ಸರ್ಕಾರದ ಪ್ರಕಾರ 1 ಲಕ್ಷ ಸ್ಮಾರ್ಟ್ ಮೀಟರ್ ಕಡ್ಡಾತ ಸಾಕು. ಆದರೆ ರಾಜ್ಯ ಸರ್ಕಾರ 10 ಲಕ್ಷ ಸ್ಮಾರ್ಟ್ಮೀಟರ್ ಕಡ್ಡಾಯ ಮಾಡಿದೆ. ಸ್ಮಾರ್ಟ್ ಮೀಟರ್ಗಳನ್ನು ಮೊದಲು ವಿದ್ಯುತ್ ಫೀಡರ್ಗಳಲ್ಲಿ ಅಳವಡಿಕೆ ಮಾಡಬೇಕು. ನಂತರ ಹಳೆಯ ಗ್ರಾಹಕರ ಮನೆಗಳಿಗೆ ಅಳವಡಿಕೆ ಮಾಡಬೇಕು, ಇದರ ನಂತರ ಹೊಸ ಗ್ರಾಹಕರಿಗೆ ಅಳವಡಿಸಬೇಕು. ಈ ಹಂತಗಳನ್ನು ಅನುಸರಿಸದೇ ಏಕಾಏಕಿ ಹೊಸ ಗ್ರಾಹಕರಿಗೆ ಸ್ಮಾರ್ಟ್ಮೀಟರ್ ಕಡ್ಡಾಯ ಮಾಡ್ತಿದ್ದಾರೆ