ಯಾದಗಿರಿ : ಹಳೇ ಹುಬ್ಬಳ್ಳಿ ಗಲಾಟೆ ಕೇಸ್ ವಾಪಾಸ್ ಪಡೆದ ನಿರ್ಧಾರ ಸೇರಿದಂತೆ ಅನೇಕ ವಿಷಯಗಳ ಕುರಿತು ಮಾತನಾಡಿದ ಶಾಸಕ ರಾಜು ಗೌಡ ಕಾಂಗ್ರೆಸಿಗರ ಮೇಲೆ ಗುಡುಗಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದ ರಾಜು ಗೌಡ ಸಿಎಂ ರಾಜಿನಾಮೆ ತಪ್ಪಿಸಲು ಜನರನ್ನ ಡೈವರ್ಟ್ ಮಾಡಲು ಕಾಂಟ್ರವರ್ಷಿಯಲ್ ಕೇಸ್ ವಾಪಸ್ ತೆಗೆಯುತ್ತಿದ್ದಾರೆ.ಸರ್ಕಾರದ ಈ ನಿರ್ಧಾರ ದುರಾಡಳಿತದ ಪರಮಾವಧಿಯಾಗಿದೆ. ಕೋರ್ಟೆ ಅಪರಾಧಿಗಳಿಗೆ ಬೇಲ್ ಕೊಟ್ಟಿಲ್ಲ ಅಂತದರಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ಸರಿಯಿಲ್ಲ. ಪೊಲೀಸ್ ಸ್ಟೇಷನ್ ನುಗ್ಗಿ ದ್ವಂಸ ಮಾಡಿ ಪೊಲೀಸರಿಗೆ ಹೊಡೆವರನ್ನ ಅದೇಗೆ ಆಚೆಗೆ ಬಿಡುತ್ತೀರಿ ಎಂದು ಪ್ರಶ್ನಿಸಿದರು.
ರಾಜಕೀಯ ಲಾಭಕ್ಕಾಗಿ ಗಲಭೆಕೋರರನ್ನು ವಾಪಸ್ ಬಿಡುಗಡೆ ಮಾಡಿದ್ದಾರೆ ಹಂಗಾದ್ರೇ ರಾಜ್ಯ ಯಾವ ಪರಿಸ್ಥಿತಿ ಇದೆ. ನಾಳೆ ಯಾರೂ ಬೇಕಾದ್ರೂ, ಏನ್ ಬೇಕಾದರೂ ಮಾಡಬಹುದು ಅನ್ನೋದನ್ನ ತೋರಿಸಿ ಕೊಟ್ಟಿದ್ದಾರೆ. ಇವತ್ತು ಸಿದ್ದರಾಮಯ್ಯ ಸಾಹೇಬ್ರು ರಾಜಿನಾಮೆ ಕೊಡುವ ಪರಿಸ್ಥಿತಿಗೆ ಬಂದಿದ್ದಾರೆ. ಇದನ್ನ ತಪ್ಪಿಸಿಕೊಳ್ಳಲು ಕಾಂಟರವರ್ಷಿಯಲ್ ಕೇಸ್ ವಾಪಸ್ ತೆಗಿಯುತ್ತಿದ್ದಾರೆ. ಜನರ ಮೈಂಡ್ ಡೈವರ್ಟ್ ಮಾಡಲು ಈ ರೀತಿ ಮಾಡ್ತಿದ್ದಾರೆ
ಮುಂದುವರಿದು ಮಾತನಾಡಿದ ಶಾಸಕ ಪೊಲೀಸ್ ಠಾಣೆಗೆ ನುಗ್ಗಿ ಹೊಡೆದವ್ರು, ನಾಳೆ ನಿಮ್ಮ ಮನೆಗೆ ಹೊಕ್ಕು ಹೊಡಿತ್ತಾರೆ. ಯಾರೂ ಅಧಿಕಾರದಲ್ಲಿ ಇರಲ್ಲ ಅವರ ಮನೆ ಹೊಕ್ಕು ಹೊಡೆಯುವ ಕೆಲಸ ಆಗುತ್ತೆ. ಕಾಂಗ್ರೆಸ್ ನವ್ರು ಕರ್ನಾಟಕ ಭಾರತ ದೇಶದಿಂದ ಹೊರಗಿದೆ ಅಂತ ತಿಳ್ಕೊಂಡಿದ್ದಾರೆ. ಕರ್ನಾಟಕ ಭಾರತದಿಂದ ಹೊರಗಿದೆ, ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನದಿಂದ ಸಪ್ರೆಟ್ ಇದೆ ಅಂತ ತಿಳಿದ್ದಿದ್ದಾರೆ.ಅವರ ಮನಸಿಗೆ ಏನ್ ಬರುತ್ತೋ ಅದನ್ನ ಮಾಡುತ್ತಿದ್ದಾರೆ .ಕೂಡಲೇ ನಿನ್ನೆ ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡ ನಿರ್ಧಾರ ಮರುಪರಿಶೀಲನೆ ನಡೆಬೇಕು
ಆರೋಪಿಗಳಿಗೆಲ್ಲರಿಗು ಎಲ್ಲರಿಗೂ ಶಿಕ್ಷೆಯಾಗಬೇಕು ಇಲ್ಲದಿದ್ದರೆ ಇದು ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ ಕಾಂಗ್ರೆಸ್ ಪಕ್ಷ ಬೆಂಬಲಿಸುವವರು ರಾಜ್ಯದಲ್ಲಿ ಏನ್ ಬೇಕಾದರು ಮಾಡಬಹುದು ಅನ್ಕೊಂಡಿದ್ದಾರೆ ಅಧಿಕಾರ ಶಾಶ್ವತ ಅಲ್ಲ, ಕಾಲ ಚಕ್ರ ತಿರುಗುತ್ತ ಇರುತ್ತದೆ ಆಡಳಿತ ಪಕ್ಷದಲ್ಲಿ ಯಾವ ರೀತಿ ಸರ್ಕಾರ ನಡೆಸ್ತಾರೆ ಅನ್ನೋದು ಮುಖ್ಯ ಎಂದು ಶಾಸಕ ರಾಜುಗೌಡ ಕಾಂಗ್ರಸ್ ಪಕ್ಷದ ಮೇಲೆ ಕಿಡಿಕಾರಿದ್ದಾರೆ.