Wednesday, October 9, 2024

Viral Video : ನನ್ನ ನೋಡೋಕೆ ಯಾಕೆ ಇಷ್ಟು ಕಷ್ಟ; ನಾನೇ ನಿಮ್ಮ ಹತ್ರ ಬರ್ತೀನಿ

ಬೆಂಗಳೂರು :  ದಟ್ಟ ಅರಣ್ಯದಲ್ಲಿ ಪ್ರವಾಸಿಗರು ವಾಹನದಲ್ಲಿ ಸಫಾರಿ ಹೊರಟಿದ್ದರು. ಈ ಮಧ್ಯೆ ಚಿರತೆಯೊಂದು ವಾಹನದತ್ತ ಬರುತ್ತಲೇ ಒಂದೇ ಕ್ಷಣದಲ್ಲಿ ಚಿರತೆ ಸಫಾರಿ ವಾಹನದ ಮೇಲೆ ಎಗರೇ ಬಿಟ್ಟಿತು. ಚಿರತೆ ಕಿಟಕಿಯ ಕಡೆ ಹತ್ತಿ ಒಳನುಗ್ಗಲೂ ಪ್ರಯತ್ನಿಸಿತು. ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ಕುಳಿತದವರು ಭಯಗೊಂಡು ಜೋರಾಗಿಯೇ ಕೂಗಿಲು ಆರಂಭಿಸಿದರು. ಇನ್ನೇನೊ ಚಿರತೆ ಕಿಟಕಿಯಿಂದ ಒಳ ನುಗ್ಗೆ ಬಿಡಬಹುದು ಎನ್ನುವಷ್ಟರಲ್ಲೇ, ಚಾಲಕ ನಿಧಾನವಾಗಿ ವಾಹನವನ್ನು ಮುಂದಕ್ಕೆ ಓಡಿಸಿದರು. ಅದೃಷ್ಟವಶಾತ್‌ ಚಿರತೆ ವಾಹನದಿಂದ ಇಳಿದು ಓಡಿತು.

ಈ ಘಟನೆ  ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದ್ದು, ಸಫಾರಿಗೆ ಹೊರಟ್ಟಿದ್ದ ಮತ್ತೊಂದು ವಾಹನದಲ್ಲಿದ್ದ ಪ್ರವಾಸಿಗರು ವಿಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖರ್​ ವೈರಲ್​ ಆಗುತ್ತಿದೆ.

RELATED ARTICLES

Related Articles

TRENDING ARTICLES