ವಿಜಯಪುರ : ಕರ್ನಾಟಕದಲ್ಲಿ ತನ್ನದೇ ಆದ ಹೆಸರು ಮಾಡಿದ ಹಜಾರೆ ಟೆಕ್ಸಟೈಲ್ ಈಗ ಮತ್ತೊಂದು ದಾಖಲೆ ಬರೆದಿದೆ. ಗೃಹ ಬಳಕೆಯ ಎಲ್ಲ ವಸ್ತುಗಳು ಒಂದೇ ಸೂರಿನಡಿ ಅಗ್ಗದ ದರದಲ್ಲಿ ಕಾರ್ಖಾನೆಯಿಂದ ನೇರವಾಗಿ ಗ್ರಾಹಕರ ಕೈ ಸೇರುವ ಬೆಲೆಯಲ್ಲಿ ನೂತನ ಹಜಾರೆ ಬಜಾರ್ ಬೃಹತ್ ಮಳಿಗೆ ಅನಾವರಣ ಮಾಡಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಹಜಾರೆ ಟೆಕ್ಸ್ಟೈಲ್ಸ್ ಈಗ ಮತ್ತೊಂದು ದಾಖಲೆ ಬರೆದಿದೆ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಇಂಥದ್ದೊಂದು ಮೈಲುಗಲ್ಲಿಗೆ ಸಾಕ್ಷಿಯಾಗಲಿದೆ. ಒಂದೇ ಸೂರಿನಡಿ ಗೃಹ ಬಳಕೆಯ ಎಲ್ಲ ವಸ್ತುಗಳು ಅಗ್ಗದ ದರದಲ್ಲಿ ಅಂದರೆ ಕಾರ್ಖಾನೆಯಿಂದ ನೇರ ಗ್ರಾಹಕರ ಕೈ ಸೇರುವ ರೀತಿಯಲ್ಲಿ ಲಭ್ಯವಾಗಲು ಹಜಾರೆ ಬಜಾರ್ ಉದ್ಘಾಟನೆ ಮಾಡಲಾಗಿದೆ.
ಹೆಸರಾಂತ ಜವಳಿ ವ್ಯಾಪಾರಸ್ಥ ಚಡಚಣದ ಬಾಹುಲಿ ಎನ್ ಮುತ್ತಿನ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಮುಗಳಖೋಡದ ಜಿಡಗಾ ಮಠದ ಶಿವಯೋಗಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ರಬಕವಿಯ ಬ್ರಹ್ಮಾನಂದ ಆಶ್ರಮದ ಗುರು ಸಿದ್ದೇಶ್ವರ ಶ್ರೀಗಳು ಧಿವ್ಯ ಸಾನಿಧ್ಯವನ್ನು ವಹಿಸಿದ್ದರು. ಇನ್ನೂ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರು ಸಹಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉದ್ಘಾಟನೆ ಆದ ಮೊದಲ ದಿನವೇ ಹೆಚ್ಚಿನ ಗ್ರಾಹಕರು ಪಾಲ್ಗೊಂಡು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದರು.