Sunday, October 6, 2024

ಭಾವೀ ಪತ್ನಿಯನ್ನೇ ಕೊಲೆ ಮಾಡಿದನಾ ಭಾವಿ ಪತಿ?..

ಮೈಸೂರು : ಭಾವಿ ಪತ್ನಿಯನ್ನು ಕೊಲೆ ಮಾಡಿ ನೇಣು ಹಾಕಿದ ಘಟನೆ ನಗರದ ಹೆಚ್.ಡಿ ಕೋಟೆ ತಾಲ್ಲೂಕಿನ ಹೀರೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಕವಿತಾ (20) ಕೊಲೆಯಾದ ದುರ್ದೈವಿ. ನಿರಂಜನ್ ಜಗ್ಗ ಎಂಬಾತನಿಂದ ಕೊಲೆ ಮಾಡಲಾಗಿದೆ ಎಂದು ಆರೋಪಮಾಡಲಾಗಿದೆ.

ಮೈಸೂರು ಜಿಲ್ಲೆ, ಎಚ್.ಡಿ.ಕೋಟೆ ತಾಲೂಕಿನ ಪುಟ್ಟಮಲ್ಲಪ್ಪ ಹಾಗು ಶಿವನಂಜಮ್ಮನವರ ಪುತ್ರಿ ಕವಿತಾಳೊಂದಿಗೆ  ಬೂದನೂರು ಗ್ರಾಮದ ಜಗ್ಗನ ಮದುವೆಯನ್ನುಇದೇ ಅಕ್ಟೊಬರ್ 21ಕ್ಕೆ ನಿಶ್ಚಯ ಮಾಡಲಾಗಿತ್ತು. ಕವಿತಾ ಪೋಷಕರು ಕೆಲಸಕ್ಕಾಗಿ ಹೊಲಕ್ಕೆ ಹೋಗಿದ್ದ ಸಮಯದಲ್ಲಿ ನಿರಂಜನ್ ಜಗ್ಗ ಕವಿತಾಳ ಮನೆಗೆ ಹೋಗಿದ್ದನು, ಇದೇ ವೇಳೆ ಅವಳೊಂದಿಗೆ ಜಗಳವಾಡಿ ಕೊಲೆ ಮಾಡಿ ನೇಣು ಹಾಕಿದ್ದಾನೆ ಎಂದು ಶಂಕಿಸಲಾಗಿದೆ.

ಮನೆಯ ಹೆಂಚು ತೆಗೆದು ಓಡಿ ಹೋಗುವಾಗ ಗ್ರಾಮಸ್ಥರು ಆತನನ್ನು ತಡೆಯಲು ಪ್ರಯತ್ನಿಸಿದ್ದಾರೆ. ಇದಾದ ಬಳಿಕ ಎಚ್.ಡಿ ಕೋಟೆ ಅಂತರಸಂತೆ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೋಲಿಸರ ಮುಂದೆ ಶರಣಾಗಿರುವ ಆರೋಪಿ ನಾನು ಕೊಲೆ ಮಾಡಿಲ್ಲ, ಜನರು ಹೊಡೆದು ಸಾಯಿಸಿ ಬಿಡುತ್ತಾರೆ ಎಂದು ಓಡಿ ಹೋದೆ ಎಂದು ಪೋಲಿಸರ ಮುಂದೆ ಆರೋಪಿ ಹೇಳಿಕೆ ನೀಡಿದ್ದಾನೆ.

 

RELATED ARTICLES

Related Articles

TRENDING ARTICLES