ಗದಗ: ಭಾರತೀಯ ಸೇನೆಯಲ್ಲಿ 24 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಮರಳಿದ ಯೋಧನಿಗೆ ಭರ್ಜರಿ ಸ್ಬಾಗತ ದೊರೆತಿದೆ. ಗದಗ ಜಿಲ್ಲೆಯ, ರೋಣ ತಾಲ್ಲೂಕಿ ಹೊಳೆ ಮಣ್ಣೂರು ಎಂಬ ಗ್ರಾಮದ ಯೋದನಿಗೆ ಭರ್ಜರಿ ಸ್ವಾಗತ ನೀಡಲಾಗಿದೆ
ಸೇನೆಯಲ್ಲಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಯೋಧ ಶರಣಪ್ಪ ಖವಾಸ್ತಗೆ ಭರ್ಜರಿ ಸ್ವಾಗತ ನೀಡಲಾಗಿದೆ. ಹೊಳೆಯಾಲೂರು ಗ್ರಾಮದಿಂದ ಹೊಳೆಮಣ್ಣೂರು ಗ್ರಾಮದವರೆಗೆ ಮೆರವಣಿಗೆ ಮಾಡಲಾಗಿದ್ದು. ನಿವೃತ್ತ ಯೋಧರ ಸಂಘದ ನೇತೃತ್ವದಲ್ಲಿ ಬೈಕ್ ಮೆರವಣಿಗೆ ಮಾಡಿ, ವೀರ ಯೋದನ ಕುಟುಂಬಕ್ಕೆ ಹೂವಿನ ಸುರಿಮಳೆ ಮಾಡಿದ್ದಾರೆ .