ಬೆಂಗಳೂರು : ನಗರದ ಜನರಿಗೆ ಇದೊಂದು ಎಚ್ಚರಿಕೆಯ ಸುದ್ದಿ. ರಾಜಧಾನಿಯ ಜನರ ಹೊಟ್ಟೆ ಸೇರುತ್ತಿದೆ ಮನುಷ್ಯರ ಮೂತ್ರ ಮತ್ತು ಕೊಳಚೆ ನೀರು ಮಿಶ್ರಿತ ಸೊಪ್ಪು. ಹೌದು, ಗಾಬರಿಯಾದರು ಇದು ಸತ್ಯ ಪ್ರತಿನಿತ್ಯ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಗೆ ಲೋಡ್ಗಟ್ಟಲೆ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಸೊಪ್ಪು ಬರುತ್ತಿದ್ದು ಇದನ್ನು ಅತಿ ಕೆಟ್ಟ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ.
ಪ್ರತಿನಿತ್ಯ ಬೆಂಗಳೂರಿನ ಕೆ.ಆರ್ ಮಾರುಕಟ್ಟೆಗೆ ನೂರಾರು ಲೋಡ್ನಷ್ಟು ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಸೊಪ್ಪು ಬರುತ್ತಿದ್ದು. ಈ ಸೊಪ್ಪನ್ನು ಕೆ.ಆರ್ ಮಾರುಕಟ್ಟೆಯ ಚರಂಡಿ, ಪುಟ್ಬಾತ್, ರೋಡ್ನ ಮೇಲೆ ಸುರಿಯುತ್ತಿದ್ದಾರೆ. ಇಲ್ಲಿ ಕೆಲಸ ಮಾಡುವ ಜನರು ಚಪ್ಪಲಿ ಕಾಲಿನಲ್ಲಿಯೆ ಸೊಪ್ಪನ್ನು ತುಳಿಯುತ್ತ ಒಡಾಡುತ್ತಾರೆ.
ಸೊಪ್ಪು ಸುರಿಯುವ ಮುನ್ನ ಕೆಳಗೆ ಪ್ಲಾಸ್ಟಿಕ್ ಶೀಟ್ನ್ನು ಕೂಡ ಹಾಕದೆ ನೆಲದ ಮೇಲೆಯೆ ಸುರಿಯುತ್ತಿದ್ದು. ಜನರು ಓಡಾಡಲು ಅಸಯ್ಯ ಪಡುವ ಜಾಗದಲ್ಲೆಲ್ಲ ಸೊಪ್ಪನ್ನು ಸುರಿಯುತ್ತಿದ್ದಾರೆ. ಈ ಸೊಪ್ಪು ಬೆಂಗಳೂರಿನ ಮನೆಮನೆಗು ತಲುಪುತ್ತಿದೆ. ಆದರೂ ಸಹ ಆಹಾರ ಸುರಕ್ಷತಾ ಅಧಿಕಾರಿಗಳು ಇದರ ಕಡೆಗೆ ಯಾವುದೇ ಗಮನ ನೀಡುದೆ ಕಣ್ಮುಚ್ಚಿ ಕುಳಿತಿದ್ದಾರೆ.