ಬಳ್ಳಾರಿ : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ನೋಡಲು ಮಗ ವಿನೇಶ ಇಂದು (ಅ.03) ಬಳ್ಳಾರಿ ಜೈಲಿಗೆ ಬೇಟಿ ನೀಡಿದ್ದು. ತಾಯಿ ವಿಜಯ ಲಕ್ಷ್ಮಿ ಅವರೊಂದಿಗೆ ಇಂದು ಮಧ್ಯಾನ ಜೈಲಿಗೆ ಆಗಮಿಸಿದ್ದಾರೆ.
ಸೋಮವಾರ ವಿಜಯಲಕ್ಷ್ಮಿ ಜೈಲಿಗೆ ಬೇಟಿ ನೀಡಿದಾಗ ಮಗನನ್ನು ನೆನೆದು ಕಣ್ಣೀರಿಟ್ಟಿದ್ದ ದರ್ಶನ್ . ಮಗನನ್ನು ಕರೆದುಕೊಂಡು ಬರುವಂತೆ ಹೇಳಿದ್ದನು. ಅದಕ್ಕೆ ಸಮ್ಮತಿಸಿದ್ದ ವಿಜಯಲಕ್ಷ್ಮಿಯವರು ಮಗನನ್ನು ಕರೆದುಕೊಂಡು ಇಂದು ಸಂಜೆ 4 ಗಂಟೆಗೆ ಜೈಲಿಗೆ ಬೇಟಿ ನೀಡಿದರು. ಈ ಸಮಯದಲ್ಲಿ ವಿಸಿಟರ್ ರೂಂನಲ್ಲಿ ಮಗನನ್ನು ನೋಡಿದ ದರ್ಶನ್ ಭಾವುಕನಾಗಿದ್ದಾನೆ ಎಂಬ ಮಾಹಿತಿ ದೊರೆತಿದೆ.
ಸಂದರ್ಶನಕ್ಕೆ ಹೆಚ್ಚುವರಿ ಸಮಯದ ಪರ್ಮಿಷನ್ ಪಡೆದಿರುವ ದರ್ಶನ್ ಕುಟುಂಬ. 30 ನಿಮಿಷದ ಬದಲಾಗಿ 45 ನಿಮಿಷ ಸಂದರ್ಶನದ ಸಮಯವನ್ನು ನಿಗದಿ ಮಾಡಲಾಗಿದೆ. ಮ್ಯಾನುವಲ್ ಪ್ರಕಾರ ಜೈಲಾಧಿಕಾರಿಗಳಿಗೆ ಹೆಚ್ಚುವರಿ ಸಮಯಕ್ಕೆ ಅನುಮತಿ ನೀಡಲು ಅವಕಾಶವಿದ್ದರೂ ಡಿಜಿ ಮತ್ತು ಡಿಐಜಿಯಿಂದ ಜೈಲಾಧಿಕಾರಿಗಳೂ ಅನುಮತಿ ಪಡೆದಿದ್ದಾರೆ.
ಜೈಲಿಗೆ ಆಗಮಿಸಿರುವ ಪತ್ನಿ ವಿಜಯಲಕ್ಷ್ಮಿಯವರು ದರ್ಶನ್ಗಾಗಿ ಎರಡು ಬ್ಯಾಗ್ ಬಟ್ಟೆ ಮತ್ತು ಡ್ರೈ ಪ್ರೂಟ್ ಮತ್ತು ಹಣ್ಣುಗಳನ್ನು ತಂದಿದ್ದಾರೆ .