ಬೆಂಗಳೂರು: ದರ್ಶನ್ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಹೊರಬಿದ್ದಿದ್ದು, ‘ಕರಾವಳಿ’ ಸಿನಿಮಾದಿಂದ ನಟ ದರ್ಶನ್ ರನ್ನು ಕೈಬಿಡಲಾಗಿದೆ ಎಂದು ಚಿತ್ರತಂಡವು ಅಧಿಕೃತವಾಗಿ ಪವರ್ ಟಿವಿಗೆ ಮಾಹಿತಿ ನೀಡಿದೆ.
ಡೈನಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕ ನಟನಾಗಿ ನಟಿಸುತ್ತಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವಿ ‘ಕರಾವಳಿ’ ಚಿತ್ರದ ಚಿತ್ರೀಕರಣವು ಈಗಾಗಲೇ ನಡೆಯುತ್ತಿದ್ದು, ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟ ದರ್ಶನ್ ನಟಿಸಬೇಕಿತ್ತು. ಆದರೇ, ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲು ಸೇರಿರುವುದರಿಂದ ಚಿತ್ರತಂಡವು ದರ್ಶನ್ರನ್ನು ಸಿನಿಮಾದಿಂದ ಕೈಬಿಟ್ಟಿದೆ.
ಇದನ್ನು ಓದಿ: ಹಿರಿಯ ಮಗ ದರ್ಶನ್ ಬಂಧನದ ಬಗ್ಗೆ ಮೌನ ಮುರಿದ ಮಾಜಿ ಸಂಸದೆ ಸುಮಲತಾ
ಸದ್ಯ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರಾವಳಿ ಸಿನಿಮಾದಿಂದ ಕೈಬಿಟ್ಟಿರುವುದರಿಂದ ಅವರ ಪಾತ್ರಕ್ಕೆ ಯಾರಾಗುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಈ ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ದರ್ಶನ್ ರನ್ನು ಕೈಬಿಟ್ಟಿರುವ ಪಾತ್ರಕ್ಕೆ ಗುರುದತ್ ಅವರ ಗುರುಗಳಾದ ಕಿಚ್ಚ ಸುದೀಪ್ ಎಂಟ್ರಿಯಾಗಲಿದ್ದಾರಾ? ಶಿಷ್ಯನಿಗೆ ಕಿಚ್ಚ ಸಾಥ್ ನೀಡಲಿದ್ದಾರಾ? ಎಂಬುದನ್ನು ಕಾದು ನೋಡಬೇಕಾಗಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ‘ಇನ್ಸ್ಪೆಕ್ಟರ್ ವಿಕ್ರಮ್’ ಚಿತ್ರದಲ್ಲಿ ‘ದಾಸ’ ನಟನೆ ಮಾಡಿದ್ದರು. ಈಗ ಸೆಟ್ಟೇರಲಿರುವ ‘ಕರಾವಳಿ’ ಚಿತ್ರದಲ್ಲೂ ನಟಿಸಲು ನಟ ದರ್ಶನ್ ಸಿದ್ಧವಾಗಿದ್ದರಂತೆ, ಈ ನಡುವೆ ಜೈಲು ಸೇರಿದ್ದರಿಂದ ‘ಕರಾವಳಿ’ ಚಿತ್ರದಿಂದ ದರ್ಶನ್ ರನ್ನು ಕೈಬಿಡಲಾಗಿದೆ.