Saturday, October 5, 2024

ದರ್ಶನ್​ ಅಭಿಮಾನಿಗಳಿಗೆ ‘ಕಹಿ ಸುದ್ದಿ’, ಕರಾವಳಿ ಚಿತ್ರದಿಂದ ‘ದಾಸ’ ಔಟ್​!

ಬೆಂಗಳೂರು: ದರ್ಶನ್ ಅಭಿಮಾನಿಗಳಿಗೆ ಕಹಿ ಸುದ್ದಿಯೊಂದು ಹೊರಬಿದ್ದಿದ್ದು, ‘ಕರಾವಳಿ’ ಸಿನಿಮಾದಿಂದ ನಟ ದರ್ಶನ್​ ರನ್ನು ಕೈಬಿಡಲಾಗಿದೆ ಎಂದು ಚಿತ್ರತಂಡವು ಅಧಿಕೃತವಾಗಿ ಪವರ್​ ಟಿವಿಗೆ ಮಾಹಿತಿ ನೀಡಿದೆ.

ಡೈನಮಿಕ್​ ಪ್ರಿನ್ಸ್​ ಪ್ರಜ್ವಲ್​ ದೇವರಾಜ್​ ನಾಯಕ ನಟನಾಗಿ ನಟಿಸುತ್ತಿರುವ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಮೂವಿ ‘ಕರಾವಳಿ’ ಚಿತ್ರದ ಚಿತ್ರೀಕರಣವು ಈಗಾಗಲೇ ನಡೆಯುತ್ತಿದ್ದು, ಈ ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟ ದರ್ಶನ್​ ನಟಿಸಬೇಕಿತ್ತು. ಆದರೇ, ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲು ಸೇರಿರುವುದರಿಂದ ಚಿತ್ರತಂಡವು ದರ್ಶನ್​ರನ್ನು ಸಿನಿಮಾದಿಂದ ಕೈಬಿಟ್ಟಿದೆ.

ಇದನ್ನು ಓದಿ: ಹಿರಿಯ ಮಗ ದರ್ಶನ್ ಬಂಧನದ ಬಗ್ಗೆ ಮೌನ ಮುರಿದ ಮಾಜಿ ಸಂಸದೆ ಸುಮಲತಾ

ಸದ್ಯ, ಚಾಲೆಂಜಿಂಗ್ ಸ್ಟಾರ್​ ದರ್ಶನ್ ಕರಾವಳಿ ಸಿನಿಮಾದಿಂದ ಕೈಬಿಟ್ಟಿರುವುದರಿಂದ ಅವರ ಪಾತ್ರಕ್ಕೆ ಯಾರಾಗುತ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಈ ಚಿತ್ರಕ್ಕೆ ಗುರುದತ್​​ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ದರ್ಶನ್​ ರನ್ನು ಕೈಬಿಟ್ಟಿರುವ ಪಾತ್ರಕ್ಕೆ ಗುರುದತ್​ ಅವರ ಗುರುಗಳಾದ ಕಿಚ್ಚ ಸುದೀಪ್​ ಎಂಟ್ರಿಯಾಗಲಿದ್ದಾರಾ? ಶಿಷ್ಯನಿಗೆ ಕಿಚ್ಚ ಸಾಥ್​ ನೀಡಲಿದ್ದಾರಾ? ಎಂಬುದನ್ನು ಕಾದು ನೋಡಬೇಕಾಗಿದೆ.

ಈ ಹಿಂದೆ ಬಿಡುಗಡೆಯಾಗಿದ್ದ ‘ಇನ್ಸ್‌ಪೆಕ್ಟರ್‌ ವಿಕ್ರಮ್’ ಚಿತ್ರದಲ್ಲಿ ‘ದಾಸ’ ನಟನೆ ಮಾಡಿದ್ದರು. ಈಗ ಸೆಟ್ಟೇರಲಿರುವ ‘ಕರಾವಳಿ’ ಚಿತ್ರದಲ್ಲೂ ನಟಿಸಲು ನಟ ದರ್ಶನ್​ ಸಿದ್ಧವಾಗಿದ್ದರಂತೆ, ಈ ನಡುವೆ ಜೈಲು ಸೇರಿದ್ದರಿಂದ ‘ಕರಾವಳಿ’ ಚಿತ್ರದಿಂದ ದರ್ಶನ್​ ರನ್ನು ಕೈಬಿಡಲಾಗಿದೆ.

RELATED ARTICLES

Related Articles

TRENDING ARTICLES