Saturday, October 5, 2024

ಆಮ್ಲೆಟ್​ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕನ ಮೇಲೆ ಬಿಯರ್​ ಬಾಟಲಿಯಿಂದ ಹಲ್ಲೆ

ಬೆಂಗಳೂರು: ಆಮ್ಲೆಟ್​ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಬಾರ್​ ಕ್ಯಾಶಿಯರ್​ ಹಾಗು ಸಪ್ಲೇಯರ್ ಸೇರಿ​ ಗ್ರಾಹಕನ ಮೇಲೆ ಬಿಯರ್​ ಬಾಟಲಿಯಿಂದ ಹಲ್ಲೆ ನಡೆಸಿರುವ ಘಟನೆ ಜಿಗಣಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊಪ್ಪ ಗೇಟ್​ ನಿವಾಸಿ ಬಾಬು (30) ವರ್ಷ, ಹಲ್ಲೆಗೊಳಗಾದ ವ್ಯಕ್ತಿ, ಬಾರ್​ ಕ್ಯಾಶಿಯರ್​ ಸಮಂತ್​ ಹಾಗು ಸಪ್ಲೇಯರ್​ ಜೀವನ್​ ಗೌಡ ಹಲ್ಲೆ ನಡೆಸಿದ ಆರೋಪಿಗಳು, ಆಮ್ಲೆಟ್​ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಬಿಯರ್​ ಬಾಟಲಿಯಿಂದ ಬಾಬು ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಹಾಸ್ಟೆಲ್​ ಊಟ ಸೇವಿಸಿ 25 ವಿದ್ಯಾರ್ಥಿಗಳು ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಜಿಗಣಿ ಪೊಲೀಸ್​ ಠಾಣಾ ವ್ಯಾಪ್ತಿಯ ಪ್ರೀತಿಧಾಮ ಬಾರ್​ ನಲ್ಲಿ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಬಾಬು ಎಂಬಾತ ಮದ್ಯದ ಜೊತೆಗೆ ಆಮ್ಲೆಟ್​ ಆರ್ಡರ್​ ಮಾಡಿದ್ದ, ಆಮ್ಲೆಟ್​ ತಿನ್ನುವಾಗ ಕಲ್ಲು ಸಿಕ್ಕಿದೆ ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಬಾರ್​ ಕ್ಯಾಶಿಯರ್​ ಹಾಗು ಸಪ್ಲೇಯರ್ ಏಕಾಏಕಿ​ ಬಿಯರ್​ ಬಾಟಲಿಯಿಂದ ಗ್ರಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರಿಂದ ಗ್ರಾಹಕ ಬಾಬು ತಲೆಗೆ ತೀವ್ರವಗಿ ಪೆಟ್ಟಾಗಿದೆ. ಈ ಘಟನೆಯೂ ಜಿಗಣಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES

Related Articles

TRENDING ARTICLES