Monday, July 8, 2024

ರೇಣುಕಸ್ವಾಮಿ ಕೊಲೆ ಪ್ರಕರಣ: ವಿಚಾರಣೆಗೆ ಹಾಜರಾದ ನಿರ್ಮಾಪಕ ಮಿಲನ ಪ್ರಕಾಶ್​

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ ನಿರ್ಮಾಪಕ ಮಿಲನ ಪ್ರಕಾಶ್​ ಅವರಿಗೆ ಪೊಲೀಸರು ನೋಟೀಸ್​ ನೀಡಿದ ಹಿನ್ನೆಲೆ ಇಂದು ವಿಚಾರಣೆಗೆ ಹಾಜರಾದರು.

ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ನಟ ದರ್ಶನ್​ ಕಾಟೇರ ಚಿತ್ರದ ಬಳಿಕ ಬಿಗ್​ ಬಜೆಟ್​ ಸಿನಿಮಾ ಡೆವಿಲ್​ ನಲ್ಲಿ ನಟನೆ ಮಾಡುತ್ತಿದ್ದು ಈ ಚಿತ್ರಕ್ಕೆ ಮಿಲನಾ ಪ್ರಕಾಶ್​  ನಿರ್ಮಾಪಕರಾಗಿದ್ದಾರೆ. ರೇಣುಕಾಸ್ವಾಮಿ ಕೊಲೆಗೂ ಮುನ್ನ ಮತ್ತು ನಂತರ ಇದೇ ಡೆವಿಲ್​ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್​ ಭಾಗಿಯಾಗಿದ್ದರು. ಈ ಹಿನ್ನೆಲೆ ಹೆಚ್ಚಿನ ವಿಚಾರಣೆಗಾಗಿ ಇಂದು ನಿರ್ಮಾಪಕ ಮಿಲನ ಪ್ರಕಾಶ್​ಪೊಲೀಸ್​ರ ಮುಂದೆ ಹಾಜರಾಗಿದ್ದರು.

ಇದನ್ನೂ ಓದಿ:  ಚನ್ನಪಟ್ಟಣ ಉಪಚುನಾವಣೆ: ಮೈತ್ರಿ ಅಭ್ಯರ್ಥಿ ನಾನೇ- ಸಿ.ಪಿ ಯೋಗೇಶ್ವರ್​

ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆ ಮಾಡುತ್ತಿರುವ ವಿಜಯನಗರದ ಎಸಿಪಿ ಚಂದನ್​ ಕುಮಾರ್​ ಅವರು ನೀಡಿದ ನೋಟೀಸ್​ ಹಿನ್ನೆಲೆ ಇಂದು ವಿಜಯನಗರ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು.

RELATED ARTICLES

Related Articles

TRENDING ARTICLES