Sunday, July 7, 2024

ಬೇಗ ಅಪಘಾತ ಮಾಡಿ; ಸಿಕ್ಕಾಪಟ್ಟೆ ಟ್ರೋಲ್ ಆಯ್ತು ಮಂಗಳೂರು- ಮಡಿಕೇರಿ ಹೆದ್ದಾರಿಯ ಬೋರ್ಡ್

ಕರ್ನಾಟಕ ರಾಜ್ಯದ ಮಂಗಳೂರು ಹೆದ್ದಾರಿಯಲ್ಲಿ ಅವಸರವೇ ಅಪಘಾತಕ್ಕೆ ಕಾರಣ ಎಂಬ ಎಚ್ಚರಿಕೆಯ ಬೋರ್ಡ್​ ಹಾಕಲಾಗಿದೆ. ಅದರ ಕೆಳಗೆ ಇಂಗ್ಲಿಷ್​ನಲ್ಲಿ ಅನುವಾದ ಮಾಡಿರುವ ಸಾಲುಗಳನ್ನು ಕೂಡ ಹಾಕಲಾಗಿದ್ದು, ಗೂಗಲ್ ಟ್ರಾನ್ಸಲೇಟ್ ಮಾಡಿರುವ ಭೂಪರು ಈ ಕನ್ನಡದ ವಾಕ್ಯವನ್ನು Urgent make an Accident ಎಂದು ಅನುವಾದಿಸಿದ್ದಾರೆ. ಈ ಬೋರ್ಡ್​ನ ಫೋಟೋ ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಭಾರೀ ಟ್ರೋಲ್ ಆಗುತ್ತಿದೆ.

ಮಂಗಳೂರು ಹೆದ್ದಾರಿಯಲ್ಲಿನ ಈ ಬೋರ್ಡ್​ನ ಫೋಟೋವನ್ನು ಎಕ್ಸ್​ನಲ್ಲಿ ಕೊಡಗು ಕನೆಕ್ಟ್​ ಪೇಜ್ ಪೋಸ್ಟ್ ಮಾಡಿದೆ. ಈ ಪೋಸ್ಟನ್ನು ನೂರಾರು ಜನರು ರೀಟ್ವೀಟ್ ಮಾಡಿದ್ದು, ವೈರಲ್ ಆಗಿದೆ.

ಇದನ್ನೂ ಓದಿ: ವರಲಕ್ಷ್ಮಿ ಶರತ್‌ಕುಮಾರ್ ರಿಸಪ್ಷನ್‌ನಲ್ಲಿ ಮಿಂಚಿದ ಕಿಚ್ಚ ಸುದೀಪ್ ಕುಟುಂಬ!

ಕೊಡಗು ಕನೆಕ್ಟ್’ ಹೆಸರಿನ ಸಾಮಾಜಿಕ ಮಾಧ್ಯಮ ಬಳಕೆದಾರರು ಸೈನ್‌ಬೋರ್ಡ್‌ನ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೈನ್‌ಬೋರ್ಡ್‌ನ ಕನ್ನಡ ಬರಹದ ಇಂಗ್ಲಿಷ್ ಅನುವಾದವನ್ನು “ತುರ್ತಾಗಿ ಅಪಘಾತ ಮಾಡಿ” ಎಂದು ಬರೆಯಲಾಗಿದೆ. ಇದನ್ನು ಇಂಗ್ಲಿಷ್​ನಲ್ಲಿ Overspeeding is the reason for Accidents ಎಂದು ಬರೆಯುವ ಬದಲು Urgent make an Accident ಎಂದು ಅನುವಾದಿಸಲಾಗಿದೆ.

RELATED ARTICLES

Related Articles

TRENDING ARTICLES