ಭಾರತ ಕ್ರಿಕೆಟ್ ತಂಡದ ಮುಡಿಗೆ ಟಿ-20 ವಿಶ್ವಕಪ್ ಕಿರೀಟ ತೊಡಿಸಿ ಕೋಚ್ ರಾಹುಲ್ ದ್ರಾವಿಡ್ ನಿರ್ಗಮಿಸಿದ್ದಾರೆ. ಆಟಗಾರನಾಗಿ ಭಾರತೀಯ ಕ್ರಿಕೆಟ್ನ ‘ಮಹಾ ಗೋಡೆ’ ಐಸಿಸಿ ಟ್ರೋಫಿ ಜಯಿಸದಿದ್ದರೂ, ಕೋಚ್ ಆಗಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ದ್ರಾವಿಡ್, ಫೈನಲ್ನಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ರಾಹುಲ್ ದ್ರಾವಿಡ್, ‘ಆಟಗಾರನಾಗಿ ಟ್ರೋಫಿ ಜಯಿಸುವ ಅದೃಷ್ಟ ನನಗಿರಲಿಲ್ಲ. ನಾನು ನನ್ನ ಗರಿಷ್ಠ ಪ್ರಯತ್ನವನ್ನೇ ಮಾಡಿದ್ದೇನೆ. ಅವೆಲ್ಲಾ ಆಟದ ಒಂದು ಭಾಗವಷ್ಟೇ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ʼವಿಶ್ವʼ ಗೆದ್ದ ನಾಯಕ ರೋಹಿತ್, ಕೋಚ್ ದ್ರಾವಿಡ್, ಕೊಹ್ಲಿಗೆ ಕರೆ ಮಾಡಿ ಅಭಿನಂದಿಸಿದ ಮೋದಿ
ನನಗೆ ತಿಳಿದಿರುವ ಹಲವು ಆಟಗಾರರು ಟ್ರೋಫಿ ಗೆದ್ದಿಲ್ಲ. ಭಾರತ ತಂಡಕ್ಕೆ ತರಬೇತಿ ನೀಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಈ ಯುವಕರು ನಾನು ಟ್ರೋಫಿ ಗೆಲ್ಲುವ ಹಾಗೆ ಮಾಡಿದ್ದಾರೆ. ಇದೊಂದು ಅದ್ಭುತ ಅನುಭವ. ನಾನು ನನ್ನ ಕೆಲಸ. ಮಾಡಿದ್ದೇನೆ ಅಷ್ಟೇ ಎಂದು ದ್ರಾವಿಡ್ ನುಡಿದಿದ್ದಾರೆ.
ಈ ತಂಡಕ್ಕೆ ಕೋಚ್ ಮಾಡಿದ್ದು ಅದ್ಭುತ ಅನುಭವವಾಗಿತ್ತು. ಇಂಥ ಡ್ರೆಸಿಂಗ್ ರೂಮ್ನ ಭಾಗವಾಗಿರುವುದು ಖುಷಿ. ಇದು ನನಗೆ ಜೀವಮಾನದ ಸ್ಮೃತಿ. ಇದು ಸಾಧ್ಯವಾಗಿಸಿದ ತಂಡದ ಆಟಗಾರರು ಹಾಗೂ ಸಿಬ್ಬಂದಿಗೆ ನಾನು ಆಭಾರಿ ಎಂದು ಹೇಳಿದ್ದಾರೆ.