ಬೆಂಗಳೂರು: ದೊಡ್ಡವರ ವಿಷಯ ನನಗೆ ಗೊತ್ತಿಲ್ಲ, ಚಂದ್ರಶೇಖರ ಸ್ವಾಮೀಜಿಯನ್ನ ನಾನು ಕಣ್ಣಾರೆ ನೋಡಿದ್ದು ಯಾವ ಮಟ್ಟದಲ್ಲಿದ್ರು, ಮಾಜಿ ಪ್ರಧಾನಿ ದೇವೇಗೌಡ್ರು ಅವರಿಗೆ ಯಾವ ರೀತಿ ಸಹಾಯ ಮಾಡಿದ್ರು ದೇವೆಗೌಡ್ರು ಬಗ್ಗೆ ರಾಜಣ್ಣ ಮಾತನಾಡಿದಾಗ ಎಲ್ಲೋಗಿದ್ರು..? ಎಂದು ಚಂದ್ರಶೇಖರನಾಥ ಸ್ವಾಮೀಜಿಗೆ ಹೆಚ್.ಡಿ.ರೇವಣ್ಣ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಧಾನಿ ಕುಟುಂಬಕ್ಕೆ ಸಂಕಷ್ಟದ ಮೇಲೆ ಸಂಕಷ್ಟ!
ಡಿಕೆಶಿ ಸಿಎಂ ಮಾಡಿ ಎಂಬ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವೈಯುಕ್ತಿಕವಾಗಿ ಹೇಳಿದಾಗ ಮಾತಾಡಬಹುದಿತ್ತು. ಕರ್ಟಸಿಗಾದ್ರು ದೇವೇಗೌಡರ ಬಗ್ಗೆ ಸ್ವಾಮಿಜಿ ಮಾತಾಡಿದ್ರಾ? ಚಂದ್ರಶೇಖರ ಸ್ವಾಮೀಜಿ ಅವರ ಮಠಕ್ಕೆ ದೇವೇಗೌಡ್ರು ಎಷ್ಟು ಮಾಡಿದ್ದಾರೆ ಗೊತ್ತು. ಯಾರನ್ನಾದ್ರು ಸಿಎಂ ಮಾಡಿಕೊಳ್ಳಿ ಅದು ನಮಗೆ ಗೊತ್ತಿಲ್ಲ. ದೇವೇಗೌಡ್ರ ಪರ ಮಾತಾಡಿ ಅಂತಾ ಹೇಳಲ್ಲ. ಒಬ್ಬ ಸಮಾಜದ ಮುಖಂಡರ ಬಗ್ಗೆ ಮಾತಾಡಿದಾಗ ಅವರ ಪರ ಮಾತಾಡಲಿಲ್ವಲ್ಲ ಎಂದರು.
ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ವಿಚಾರದ ಬಗ್ಗೆ ಮಾತಾಡಿದ ಅವರು, ಅವರದ್ದು ರಾಷ್ಟ್ರೀಯ ಪಕ್ಷಕ್ಕೆ ಸೇರಿದ್ದು ಯಾರನ್ನಾದ್ರು ಸಿಎಂ ಮಾಡಿಕೊಳ್ಳಿ. ಸಿಎಂ ಹುದ್ದೆ ನಮ್ಮ ಹತ್ತಿರ ಇಲ್ಲಾ, ಕಾಂಗ್ರೆಸ್ ಬಳಿ ಇದೆ ಎಂದಿದ್ದಾರೆ.