Monday, July 1, 2024

ನಿರ್ಮಾಪಕನಿಗೆ ತಲೆನೋವಾದ ಬಡ್ಡಿ ದಂಧೆಕೋರರ ಕಾಟ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದೆ. ಸಾಲ ಕೊಟ್ಟವರ ಕಿರುಕುಳಕ್ಕೆ ಬೇಸತ್ತ ಖ್ಯಾತ ನಿರ್ಮಾಪಕ ಪೊಲೀಸರಿಗೆ ದೂರು ನೀಡಿದ್ದಾರೆ.

ಸಿಸಿಬಿಗೆ ಪ್ರೊಡ್ಯೂಸರ್ ಪುಷ್ಕರ್ ಮಲ್ಲಿಕಾರ್ಜುನ್​​ ದೂರು ನೀಡಿದ್ದಾರೆ. ಆದರ್ಶ್, ಹರ್ಷ, ಶಿವು ಎಂಬುವವರ ಬಳಿ ಕಿರಿಕ್ ಪಾರ್ಟಿ ಚಿತ್ರಕ್ಕಾಗಿ ಸಾಲ ಪಡೆದಿದ್ರು ಎನ್ನಲಾಗಿದೆ. ನಿರಂತರವಾಗಿ ಸಿನಿಮಾದಲ್ಲಿ ಸೋಲು ಅನುಭವಿಸಿದ್ದ ನಿರ್ಮಾಪಕ 5 ಕೋಟಿ ಸಾಲಕ್ಕೆ 11 ಕೋಟಿ ಬಡ್ಡಿ ಕಟ್ಟಿದ್ದಾರೆ. ಆದರೂ, ಇನ್ನೂ 13 ಕೋಟಿ ಚಕ್ರ ಬಡ್ಡಿ ಕಟ್ಟಿ ಎಂದು ಸಿನಿಮಾ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್​​ಗೆ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ಸಲ್ಮಾನ್​​​​​ ಖಾನ್​​​ ಬಳಿಕ ಮತ್ತೊಬ್ಬ ಸ್ಟಾರ್​ ಜೊತೆ ರಶ್ಮಿಕಾ ಮೂವಿ

ಹೀಗಾಗಿ ಸಿಸಿಬಿ ಪೊಲೀಸರಿಗೆ ನಿರ್ಮಾಪಕರು ಸೇರಿದಂತೆ ಉಪನಿಬಂಧಕರಾದ ಕಿಶೋರ್​​​ರಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಮನಿ ಲ್ಯಾಂಡ್ರಿಂಗ್ ಸೆಕ್ಷನ್​​​ನಲ್ಲಿ ಆರೋಪಿಗಳ ವಿರುದ್ಧ FIR​​​​ ಸಹ ದಾಖಲಾಗಿದೆ.

RELATED ARTICLES

Related Articles

TRENDING ARTICLES