Monday, July 1, 2024

ರೇಣುಕಾಸ್ವಾಮಿ ಕೊಲೆ ಪ್ರಕರಣ: ಸಿಸಿ ಕ್ಯಾಮೆರಾದಲ್ಲಿ ಹಣ ಹಂಚಿಕೆ ದೃಶ್ಯ ಸೆರೆ

ಬೆಂಗಳೂರು: ಬೆಂಗಳೂರಿನ ಗಿರಿನಗರದಲ್ಲಿರುವ ಪ್ರದೋಶ್‌ ನಿವಾಸ ಸಿಸಿ ಕ್ಯಾಮೆರಾದಲ್ಲಿ ಹಣ ಹಂಚಿಕೆ ದೃಶ್ಯ ಸೆರೆಯಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್​ ಮತ್ತು ಕೊಲೆ ಪ್ರಕರಣದ A14 ಆರೋಪಿ ಪ್ರದೋಶ್‌ ಮನೆಯಲ್ಲೇ 30 ಲಕ್ಷ ರೂ. ಹಂಚಿಕೆ ಮಾಡಲಾಗಿದೆ. ಇತರೆ ಆರೋಪಿಗಳು ಮನೆಗೆ ಬಂದಿರೋ ದೃಶ್ಯಗಳು ಮನೆಗೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಹಿನ್ನೆಲೆ ಮನೆಯ ಸಿಸಿಟಿವಿ ಡಿವಿಆರ್‌ ವಶಕ್ಕೆ ಪಡೆದು ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.

ಪಶ್ಚಿಮ ವಿಭಾಗ ಪೊಲೀಸರು ತನಿಖೆ ಮುಂದುವರೆಸಲಿದ್ದಾರೆ. ಮೊದಲ ದಿನ, ಕೃತ್ಯ ನಡೆದ ದಿನ, ಬಳಿಕ ಎಲ್ಲಿಗೆ ಹೋದ್ರು? ಎಲ್ಲದರ ಬಗ್ಗೆ ಮ್ಯಾಪಿಂಗ್ ಮಾಡಲು ಪೊಲೀಸರು ಮುಂದಾಗಿದ್ದಾರೆ. ಕೊಲೆ ಆರೋಪಿಗಳ ಮೊಬೈಲ್, ಟ್ರಾವೆಲ್‌ ಹಿಸ್ಟರಿ ಕಲೆಹಾಕುತ್ತಿದ್ದಾರೆ. ಸಿಸಿ ಕ್ಯಾಮೆರಾಗಳನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪಟ್ಟಣಗೆರೆ ಶೆಡ್‌ನಲ್ಲಿ ಕೆಲಸ ಮಾಡುವವರ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಅಡ್ವಾಣಿ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು

ತನಿಖೆ ನಡೆಸುವಂತೆ ITಗೆ ಪತ್ರ

ದರ್ಶನ್ ಗ್ಯಾಂಗ್‌ನಿಂದ 70 ಲಕ್ಷ ರೂಪಾಯಿ ಜಪ್ತಿ ವಿಚಾರ ಸಂಬಂಧ ಹಣದ ಮೂಲದ ಬಗ್ಗೆ ತನಿಖೆ ನಡೆಸುವಂತೆ ITಗೆ ಪತ್ರ ಬರೆಯಲಾಗಿದೆ. ಐಟಿ ಇಲಾಖೆಗೆ ಪೊಲೀಸ್ ಅಧಿಕಾರಿಗಳು ಪತ್ರ ಬರೆದಿದ್ದಾರೆ.

ದರ್ಶನ್‌ ಮನೆಯಲ್ಲಿ 37ಲಕ್ಷ, ಪತ್ನಿ ಮನೆಯಲ್ಲಿ 3 ಲಕ್ಷ, ಆರೋಪಿಗಳಿಂದ 30 ಲಕ್ಷ ರೂಪಾಯಿ ಜಪ್ತಿ ಮಾಡಿದ್ದರು. ಇದೀಗ ತನಿಖಾಧಿಕಾರಿಗಳು ಈ ಹಣದ ಮೂಲ ಕೆದಕುತ್ತಿದ್ದಾರೆ. 70 ಲಕ್ಷ ಎಲ್ಲಿಂದ ಬಂತು? ಯಾರಿಗೆ ಸೇರಿದ್ದು ಎಂಬ ತನಿಖೆ ನಡೆಸಲಿದ್ದಾರೆ. ಶೀಘ್ರದಲ್ಲೇ ಐಟಿ ಈ ಪ್ರಕರಣದಲ್ಲಿ ಎಂಟ್ರಿಯಾಗುವ ಸಾಧ್ಯತೆಯಿದೆ. ನೋಟಿಸ್‌ ನೀಡಿ ಐಟಿ ಇಲಾಖೆ ತನಿಖೆ ಆರಂಭಿಸಲಿದೆ.

RELATED ARTICLES

Related Articles

TRENDING ARTICLES