ಬೆಂಗಳೂರು: ನಟ ದರ್ಶನ್ನ ಕರಾಳ ಮುಖ ಬಗೆದಷ್ಟೂ ಬಯಲಾಗ್ತಿದೆ. ರಾಜ್ಯದಲ್ಲಿ ದರ್ಶನ್ ಅಭಿಮಾನಿಗಳು ಬದಲಾಗ್ತಿದ್ದಾರಾ ಎಂಬ ಪ್ರಶ್ನೆ ಕಾಡ್ತಿದೆ. ನಟ ದರ್ಶನ್ ಕ್ರೌರ್ಯಕ್ಕೆ ಕೆಲ ಫ್ಯಾನ್ಸ್ ಬೇಸತ್ತು ದರ್ಶನ್ ಅಭಿಮಾನಿ ಹೋಟೆಲ್ ಹೆಸರು ಬದಲಿಸಿದ್ದಾರೆ.
ಮೊದಲು ತೂಗುದೀಪ ಚಾಕ್ನಾ ಸೆಂಟರ್ ಅಂತ ಹೆಸರು ಇಟ್ಟಿದ್ದ ಅಭಿಮಾನಿಗಳು ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ ಬಳಿಕ ಇದೀಗ ಭೈರವ ಚಾಕ್ನಾ ಸೆಂಟರ್ ಅಂತ ಹೆಸರು ಬದಲಾವಣೆ ಮಾಡಿದ್ದಾರೆ. ಬದಲಾದ ಹೋಟೆಲ್ ಬೋರ್ಡ್ನಲ್ಲಿ ಪುನೀತ್ ರಾಜ್ಕುಮಾರ್ ಫೋಟೋ ಹಾಕಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ಪತ್ನಿ ಮಗನನ್ನು ಕಂಡು ಬಿಕ್ಕಿ ಬಿಕ್ಕಿ ಅತ್ತ ನಟ ದರ್ಶನ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮತ್ತು ಕಿಡ್ನಾಪ್ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಜೈಲುಪಾಲಾಗಿದ್ದಾರೆ. ಜೈಲು ಸೇರಿದ ಹಿನ್ನೆಲೆ ಅಭಿಮಾನಿ ಬಳಗದಲ್ಲಿ ಕೊಂಚ ಬದಲಾವಣೆಯಾಗಿದೆ. ಹೋಟೆಲ್ ಹೆಸರುಗಳನ್ನಷ್ಟೆ ಅಲ್ಲದೇ ತಮ್ಮ ತಮ್ಮ ವಾಹನಗಳ ಮೇಲೆ ಹಾಕಿಸಿದ್ದ ಡಿಬಾಸ್ ಹೆಸರಿನ ಸ್ಟಿಕ್ಕರ್ಗಳನ್ನು ತೆಗೆಸಿ ಹಾಕುತ್ತಿದ್ದಾರೆ.