ಬೆಂಗಳೂರು: ನಟ ದರ್ಶನ್ ಅಭಿಮಾನಿಗಳಿಂದ ತನಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬಿಗ್ ಬಾಸ್ ಕನ್ನಡ ಸ್ಪರ್ಧಿ, ನಟ ಪ್ರಥಮ್ ಜ್ಞಾನಭಾರತಿ ಪೊಲೀಸ್ ಠಾಣೆ ಮೊರೆ ಹೋಗಿದ್ದು ದರ್ಶನ್ ಅಭಿಮಾನಿಗಳ ವಿರುದ್ದ ದೂರು ದಾಖಲಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಈ ಪೋಸ್ಟ್ನಲ್ಲಿ, ಜೀವನ ದೊಡ್ಡದು;ಯಾರಿಗೋಸ್ಕರವೋ ಹಾಳು ಮಾಡಿಕೊಳ್ಳಬೇಡಿ; ನಾನು ಶಾಂತಿಯಿಂದಲೇ ಇದ್ದೆ;ನೀವು ಅತೀಯಾಗಿ ನಮ್ಮ #ಕರ್ನಾಟಕದಅಳಿಯ ತಂಡದoffice noಗೆ ಬೆದರಿಕೆ ಹಾಕುತಿದ್ದೀರಾ; ಇನ್ಮೇಲೆ ನನಗೆ ಬರೋ ಕಾಲ್ msg,social media warningಎಲ್ಲವೂ ಪೋಲೀಸರು ನೋಡಿಕೊಳ್ತಾರೆ; ಬದುಕು ಸುಂದರವಾದದ್ದು; #ಅಂಧಾಭಿಮಾನಿಗಳೇ, ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ. ಎಂದು ಬರೆಯುವ ಮೂಲಕ ದರ್ಶನ್ ಅಭಿಮಾನಿಗಳ ವಿರುದ್ದ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.
ಜೀವನ ದೊಡ್ಡದು;ಯಾರಿಗೋಸ್ಕರವೋ ಹಾಳು ಮಾಡಿಕೊಳ್ಳಬೇಡಿ;
ನಾನು ಶಾಂತಿಯಿಂದಲೇ ಇದ್ದೆ;ನೀವು ಅತೀಯಾಗಿ ನಮ್ಮ #ಕರ್ನಾಟಕದಅಳಿಯ ತಂಡದoffice noಗೆ ಬೆದರಿಕೆ ಹಾಕುತಿದ್ದೀರಾ;
ಇನ್ಮೇಲೆ ನನಗೆ ಬರೋ ಕಾಲ್ msg,social media warningಎಲ್ಲವೂ ಪೋಲೀಸರು ನೋಡಿಕೊಳ್ತಾರೆ;
ಬದುಕು ಸುಂದರವಾದದ್ದು; #ಅಂಧಾಭಿಮಾನಿಗಳೇ,
ನಿಮ್ಮ ತಂದೆ ತಾಯಿಗಳಿಗೆ ಮೀಸಲಿಡಿ pic.twitter.com/A5KQRy8Cof— Olle Hudga Pratham (@OPratham) June 19, 2024
ಇದನ್ನೂ ಓದಿ: ಹಾಸನದಲ್ಲಿ ಹಾಡಹಗಲೇ ಶೂಟೌಟ್: ಇಬ್ಬರು ಸಾವು
ನಟ ದರ್ಶನ್ ಗೆ ಜೈಲಾ..ಬೇಲಾ..?
ರೇಣುಕಾಸ್ವಾಮಿ ಕೊಲೆ ಪ್ರರಕಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಅಂಡ್ ಗ್ಯಾಂಗ್ ಇಂದು ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಮ್ಯಾಜಿಸ್ಟ್ರೇಟ್ ಕೋರ್ಟ್ ಎದುರು ಹಾಜರಾಗಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಇನ್ನು ಕೆಲವೆ ನಿಮಿಷಗಳಲ್ಲಿ ನಡೆಯಲಿದ್ದು ‘ಡಿ’ ಗ್ಯಾಂಗ್ಗೆ ಜೈಲೋ.. ಬೇಲೋ..? ಎನ್ನುವುದು ತಿಳಿಯಲಿದೆ.
ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಅಂಡ್ ಗ್ಯಾಂಗ್ ವಿಚಾರಣೆ ನಡೆಸುತ್ತಿರುವ ಪೊಲೀಸರು ಮತ್ತೆ 3 ದಿನ ಕಸ್ಟಡಿಗೆ ಕೇಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಈವೇಳೆ ದರ್ಶನ್ ತಂಡವನ್ನು ಕಸ್ಟಡಿಗೆ ಕೊಡದಿದ್ದರೇ, ಹೆಚ್ಚುಕಮ್ಮಿ ಪರಪ್ಪನ ಅಗ್ರಹಾರ ಪಾಲು ಸಾಧ್ಯತೆ ಇದೆ ಎನ್ನಲಾಗಿದೆ.