ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಂದು ನಟ ದರ್ಶನ್ ಸೇರಿದಂತೆ 19 ಮಂದಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್ ಬಂಧನದ ಬಗ್ಗೆ ಕನ್ನಡ ಚಿತ್ರರಂಗದ ನಟ ಕಿಚ್ಚ ಸುದೀಪ್, ಉಪೇಂದ್ರ ಸೆರಿದಂತೆ ಹಲವು ಕಲಾವಿದರು ಪ್ರತಿಕ್ರಿಯಿಸಿದ್ದಾರೆ. ಇದೀಗ ಈ ಕುರಿತು ದರ್ಶನ್ರನ್ನು ಮೆಜೆಸ್ಟಿಕ್ ಚಿತ್ರದ ಮೂಲಕ ನಾಯಕನಟನನ್ನಾಗಿ ಚಿತ್ರರಂಗಕ್ಕೆ ಪರಚಯಿಸಿದ ನಿರ್ಮಾಪಕ ಭಾ.ಮ ಹರೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಪವರ್ ಟಿವಿ ಯೋಂದಿಗೆ ಮಾತನಾಡಿದ ಅವರು, ಒಬ್ಬ ಸಾಮಾನ್ಯ ಹುಡುನಾಗಿದ್ದ ದರ್ಶನ್, ಚಾಲೆಂಜಿಂಗ್ ಸ್ಟಾರ್ ಆಗಿ ಬೆಳದ. ಇಂಥ ನಟ ಈ ರೀತಿ ಕೊಲೆ ಪ್ರಕರಣದಲ್ಲಿ ಸಿಲುಕಿರುವುದು, ಅದರಲ್ಲೂ ತನ್ನ ಅಭಿಮಾನಿಯನ್ನು ಕೊಂದಿರುವುದು ಭಾರತ ಚಿತ್ರರಂಗದಲ್ಲೆ ಇದೇ ಮೊದಲು ಎಂದು ಭಾವಿಸುತ್ತೇನೆ ಎಂದರು.
ಇದನ್ನೂ ಓದಿ: ನಟ ದರ್ಶನ್ ತಗಡು ಮಾತಿಗೆ ನಯವಾಗೇ ಗುಮ್ಮಿದ ಉಮಾಪತಿ
ಸಾಮಾನ್ಯ ಹುಡುಗನನ್ನು ಕೊಲ್ಲಲಿಕ್ಕೆ 16 ಜನ ಬೇಕಾಗಿರಲಿಲ್ಲ, ಕಾನೂನು ಕೈಗೆ ತೆಗೆದುಕೊಳ್ಳುವುದು ಬೇಕಾಗಿರಲಿಲ್ಲ, ಯಾಕೆ ಕೊಲ್ಲಬೇಕಾಗಿತ್ತು ಬದಲಿಗೆ ಕರೆದು ಬುದ್ದಿ ಹೇಳಬೆಕಾಗಿತ್ತು. ಅದಕ್ಕೆ ಅಂತ ಸೈಬರ್ ಕ್ರೈಂ ಇತ್ತು, ಕಾನೂನು ಕೈಗೆತ್ತಿಕೊಳ್ಳುವ ಅವಷ್ಯಕತೆ ಇರಲಿಲ್ಲ, ದುಡುಕುವ ಮುನ್ನ ಒಂದು ಗಳಿಗೆ ಯೋಚನೆ ಮಾಡಬೇಕಾಗಿತ್ತು. ನಡೆದಿದ್ದೆಲ್ಲಾ ನಂದೇ ದಾರಿ ಎಂದಾಗ ಈ ರೀತಿಯೆಲ್ಲಾ ಆಗುತ್ತೆ ಎಂದರು.
ರೇಣುಕಾಸ್ವಾಮಿ 5 ತಿಂಗಳ ಗರ್ಭಿಣಿ, ವಯಸ್ಸಾದ ತಂದೆ-ತಾಯಿ, ಇನ್ನೊಂದು ವಯಸ್ಸಾದ ಅಜ್ಜಿ ಇದೆ, ಇಡೀ ಕುಟುಂಬಕ್ಕೆ ಆಧಾರವಾಗಿದ್ದವನನ್ನು ಈ ರೀತಿ ಮಾಡಿದ್ದು ನ್ಯಾಯಾನಾ? ಒಬ್ಬ ವ್ಯಕ್ತಿಯನ್ನು ಫುಟ್ಬಾಲ್, ವಾಲೀಬಾಲ್ ರೀತಿ ಆಡಿದ್ದಾರಲ್ಲ ಇವರಿಗೆಲ್ಲಾ ಮಾನವೀಯತೆ ಇದ್ಯಾ, ನಾಚಿಕೆಯಾಗಬೇಕು ಇವರಿಗೆ ಎಂದು ಕಿಡಿಕಾರಿದರು.
ಆತ ತಪ್ಪು ಮಾಡಿದ್ದರೇ ಅದಕ್ಕೆ ಅಂತ ಪೊಲೀಸ್ ಇಲ್ವಾ? ಕಾನೂನಿಲ್ವಾ? ಒಂದು ಕೇಸ್ ಹಾಕಿ ಕರೆದು ವಾರ್ನ್ ಮಾಡಬಹುದಾಗಿತ್ತು, ಇವತ್ತು ಇವರು ಮಾಡಿರುವ ಕೊಲೆಗೆ ನಮ್ಮ ಫಿಲ್ಮ್ ಚೇಂಬರ್ 5 ಲಕ್ಷ ದುಡ್ಡನ್ನು ಫೈನ್ ರೀತಿಯಲ್ಲಿ ಕೊಡಬೇಕಾಗಿತ್ತಾ ಎಂದು ಪ್ರಶ್ನೆ ಮಾಡಿದರು.