ಫಿಲ್ಮಿಡೆಸ್ಕ್: ಚಂದನ್ ಶೆಟ್ಟಿ & ನಿವೇದಿತಾ ಗೌಡ ಡಿವೋರ್ಸ್ ಸುದ್ದಿ ಎಲ್ಲರಿಗೂ ಶಾಕ್ ಕೊಟ್ಟಿದೆ. ರಿಯಾಲಿಟಿ ಶೋಗಳಲ್ಲಿ ಮಿಂಚ್ತಾ, ಸೋಷಿಯಲ್ ಮಿಡಿಯಾದಲ್ಲಿ ಕ್ಯೂಟ್ ಆಗಿ ರೀಲ್ಸ್ ಮಾಡ್ತಾ ಎಲ್ಲರನ್ನ ರಂಜಿಸ್ತಾ ಇದ್ದ ಈ ತಾರಾಜೋಡಿ ಏಕಾಏಕಿ ಸಂಬಂಧವನ್ನ ಮುರಿದುಕೊಂಡಿದ್ದು ಯಾಕೆ ಅಂತ ಎಲ್ರೂ ತಲೆ ಕೆಡಿಸಿಕೊಂಡಿದ್ದಾರೆ.
ಅಸಲಿಗೆ ಈ ಇಬ್ಬರಿಗೂ ವಿಚ್ಛೇದನ ಕೊಡಿಸಿರೋ ವಕೀಲೆ ಹೇಳುವ ಪ್ರಕಾರ ಕಳೆದ ಒಂದು ವರ್ಷದ ಹಿಂದೆಯೇ ಈ ಜೋಡಿ ಹೊಂದಾಣಿಕೆಯ ಕೊರತೆಯಿಂದ ಡಿವೋರ್ಸ್ ಪಡೆಯೋದಕ್ಕೆ ತೀರ್ಮಾನ ಮಾಡಿತ್ತಂತೆ. ತಮ್ಮ ಸಂಬಂಧ ಹದಗೆಟ್ಟು ಡಿವೋರ್ಸ್ ಹಂತಕ್ಕೆ ಬಂದಿದ್ರೂ ಅದನ್ನ ಎಲ್ಲಿಯೂ ತೊರಗೊಡದೇ ಅನ್ಯೋನ್ಯವಾಗಿದ್ದಂತೆ ಇಬ್ಬರು ನಟನೆ ಮಾಡ್ತಾನೇ ಬಂದಿದ್ರು. ಅಷ್ಟರ ಮಟ್ಟಿಗೆ ಈ ಇಬ್ಬರು ಅತ್ಯುತ್ತುಮ ನಟ-ನಟಿಯರು.
ಆದ್ರೆ ಇವ್ರು ಅದೆಷ್ಟೇ ನಟನೆ ಮಾಡ್ತಾ ಇದ್ರೂ ತೀರಾ ಹತ್ತಿರದಿಂದ ಇವರನ್ನ ನೋಡ್ತಾ ಇದ್ದವರಿಗೆ ಏನ್ ನಡೀತಾ ಇದೆ ಅನ್ನೋ ಅಸಲಿಯತ್ತು ಗೊತ್ತಿತ್ತು. ಅದ್ರಲ್ಲೂ ರಾಜಾ ರಾಣಿ ಅನ್ನೋ ರಿಯಾಲಿಟಿ ಶೋ ಮತ್ತದರ ನಿರ್ಮಾಪಕ ಕಂ ಜಡ್ಜ್ ಸೃಜನ್ ಲೋಕೇಶ್ ಹೆಸರು ಈ ವಿಚಾರದಲ್ಲಿ ಕೇಳಿ ಬರ್ತಾ ಇದೆ.
ಇದನ್ನೂ ಓದಿ: ಚಂದನ್ ಶೆಟ್ಟಿ-ನಿವೇದಿತಾ ಡೈವೋರ್ಸ್ ಬಗ್ಗೆ ತುಪ್ಪದ ಹುಡುಗಿ ರಾಗಿಣಿ ಪ್ರತಿಕ್ರಿಯೆ
ಹಾಗಾದ್ರೆ ರಾಜಾ ರಾಣಿ ಬೇರೆ ಆಗೋದಕ್ಕೆ ಸೃಜನ್ ಕಾರಣನಾ..? ಗಂಡ ಹೆಂಡತಿ ನಡುವೆ ಬಂದ ಆಗುಂತಕ ಅವನೇನಾ..? ಹಾಲು ಜೇನಿನಂತೆ ಇದ್ದ ಚಂದನ್ – ನಿವಿ ದಾಂಪತ್ಯಕ್ಕೆ ಸೃಜನ್ ಲೋಕೇಶ್ ಹುಳಿ ಹಿಂಡಿದ್ನಾ..? ಅಸಲಿ ವಿಚಾರ ಈ ಮೂವರಿಗೇ ಗೊತ್ತು. ಆದ್ರೆ ಈ ತರಹದ ಗಾಸಿಪ್ ಬಣ್ಣದ ಲೋಕದಲ್ಲಿ ಹರಿದಾಡ್ತಾ ಇರೋದಂತೂ ನಿಜ.
ರಾಜಾ-ರಾಣಿ ಶೋನಲ್ಲಿ ಚಂದನ್ ಆ್ಯಂಡ್ ನಿವೇದಿತಾ ಭಾಗಿಯಾಗಿ ವಿನ್ನರ್ ಆಗಿದ್ರು. ಈ ಶೋ ನಂತರ ಚಂದನ್ ಸಿನಿಮಾ ಸಂಗೀತ, ಮ್ಯೂಸಿಕ್ ಶೋಗಳು, ನಟನೆ ಅಂತ ಬ್ಯುಸಿಯಾದ್ರು. ಆದ್ರೆ ನಿವೇದಿತಾ ಗಿಚ್ಚಿ ಗಿಲಿಗಿಲಿ ಅನ್ನೋ ಶೋನಲ್ಲಿ ನಟಿಸೋದಕ್ಕೆ ಶುರುಮಾಡಿದ್ರು. ಅಲ್ಲಿಂದಲೇ ಎಲ್ಲವೂ ಹಳಿತಪ್ತು ಅಂತ ಸ್ಮಾಲ್ ಸ್ಕ್ರೀನ್ ಸೆಟ್ಗಳಲ್ಲಿ ಸುದ್ದಿಯಾಗಿತ್ತು.
ನಿವೇದಿತಾ ಬರ್ತ್ಡೇಗೆ ಸೃಜನ್ ಕೊಟ್ಟ ಭರ್ಜರಿ ಗಿಫ್ಟ್: ಕಟ್ಟಿಕೊಂಡ ಗಂಡನಿಗೆ ಸಜಾ.. ಮಜಾ ವಿಥ್ ಸೃಜಾ..?
ಯೆಸ್, ನಿವೇದಿತಾ ಬರ್ತ್ಡೇಗೆ ಸೃಜನ್ ಲೋಕೇಶ್ ಭರ್ಜರಿ ಗಿಫ್ಟ್ ಕೊಟ್ಟಿದ್ರು. ತಮ್ಮ ನಿರ್ಮಾಣದ ಶೋಗಳಲ್ಲಿ ನಿವೇದಿತಾಗೆ ಅವಕಾಶದ ಮೇಲೆ ಅವಕಾಶ ಕೊಟ್ರು. ಅಷ್ಟೆಲ್ಲಾ ಯಾಕೆ ತಮ್ಮ ನಿರ್ಮಾಣದ ಜಿಎಸ್ಟಿ ಅನ್ನೋ ಸಿನಿಮಾದಲ್ಲೂ ನಟನೆಯ ಚಾನ್ಸ್ ಕೊಟ್ರು.
ನಿವಿಯ ಬರ್ತ್ಡೇಗೆ ಸೃಜಾ ಹಾಕಿರೋ ಪೋಸ್ಟ್ ನೋಡಿದ್ರೆ ಇವ್ರ ಆತ್ಮೀಯತೆ ಅದ್ಯಾಪರಿ ಇದೆ ಅನ್ನೋದು ಗೊತ್ತಾಗುತ್ತೆ. ಸೃಜನ್ ಮತ್ತು ನಿವಿಯ ಈ ಅಸಹಜ ಸಲುಗೆಯನ್ನ ನೋಡಿ ಅನೇಕರು ಚಂದನ್ಗೆ ಎಚ್ಚರಿಸಿದ್ರಂತೆ. ಮ್ಯೂಸಿಕ್ ಕಾಂಸೆರ್ಟ್ ಅಂತ ಊರೂರು ತಿರುಗುವ ಚಂದನ್ಗೆ ನಿನ್ನ ಹೆಂಡತಿ ಬಗ್ಗೆ ಗಮನ ಹರಿಸು ಅಂತ ಸೂಚಿಸಿದ್ರಂತೆ.
ಆಗ ಚಂದನ್ ತನ್ನ ಜೊತೆ ಶೋಗಳಿಗೆ ಬರಲಿಕ್ಕೆ ನಿವೇದಿತಾರನ್ನ ಒತ್ತಾಯ ಮಾಡಿದ್ದಾರೆ. ಆದ್ರೆ ನಿವಿ ನನಗೆ ಅದ್ರಲ್ಲಿ ಆಸಕ್ತಿಯಿಲ್ಲ ನೀನು ಹೋಗಿ ಬಾ ಅಂತ ಚಂದುನ ಸಾಗಿ ಹಾಕ್ತಾ ಇದ್ರಂತೆ. ಗಂಡನ ಜೊತೆಗಿನ ಸಂಗೀತ ಶೋಗಳಿಗಿಂತ ಮಜಾ ವಿಥ್ ಸೃಜಾ ಶೋಗಳಲ್ಲೇ ನಿವಿ ಹೆಚ್ಚು ಮಿಂಚತೊಡಗಿದ್ಳು.
ನಿವೇದಿತಾ ಸೋಲೋ ಟ್ರಿಪ್.. ಚಂದನ್ಗೆ ಕಟಾ‘ಕಟ್’: ಚಂದು – ನಿವಿ ಡಿವೋರ್ಸ್ ಹಿಂದಿದೆ ಡಾರ್ಕ್ ಸೀಕ್ರೆಟ್
ಈ ನಡುವೆ ನಿವೇದಿತಾ ತಾನು ಸೋಲೋ ಟ್ರಿಪ್ ಹೋಗಬೇಕು ಅಂತ ಆಗಾಗ ವಿದೇಶಕ್ಕೆ ಹೋಗೋದಕ್ಕೆ ಶುರುಮಾಡಿದ್ರಂತೆ. ಚಂದನ್ ಕೂಡ ಪತ್ನಿಗೆ ಆ ಫ್ರೀಡಂ ಕೊಟ್ಟಿದ್ರು. ಆದ್ರೆ ನಿವಿಯ ಸೋಲೋ ಟ್ರಿಪ್ಗೆ ಮತ್ತೊಬ್ಬ ಸೋಲೋ ಹೀರೋ ಸಾಥ್ ಕೊಡ್ತಿದ್ದಾನೆ ಅನ್ನೋ ವಿಚಾರ ಚಂದನ್ ಕಿವಿಗೆ ಬಿದ್ದಿತ್ತಂತೆ.
ಯಾವಾಗ ಈ ಗಾಸಿಪ್ ಹೆಚ್ಚಾಗಿ ಹರಿದಾಡೋದಕ್ಕೆ ಶುರುವಾಯ್ತೋ ಚಂದನ್ , ನಿವೇದಿತಾಗೆ ಇನ್ನು ಮುಂದೆ ಈ ರಿಯಾಲಿಟಿ ಶೋ ಸಹವಾಸ ಸಾಕು.. ರಿಯಾಲಿಟಿನಲ್ಲಿ ಸಂಸಾರ ಮಾಡಿಕೊಂಡಿರೋಣ.. ಮಕ್ಕಳನ್ನ ಮಾಡಿಕೊಳ್ಳೋಣ ಅಂತ ಕೇಳಿಕೊಂಡ್ರಂತೆ. ಆದ್ರೆ ನಿವೇದಿತಾ ಇದಕ್ಕೆ ಸುತಾರಾಂ ಒಪ್ಪಿಕೊಂಡಿಲ್ಲ.
ಚಂದನ್ ಶೆಟ್ಟಿ ಕಷ್ಟ ಪಟ್ಟು ಮೇಲೆ ಬಂದ ಹುಡುಗ. ಅರ್ಜುನ್ ಜನ್ಯ ಜೊತೆ ಕೆಲಸ ಮಾಡ್ತಾ ಉದ್ಯಮದಲ್ಲಿ ಒಂದೊಂದೇ ಹೆಜ್ಜೆ ಇಟ್ಟು ಮೇಲೆ ಬಂದಾತ. ಕನ್ನಡದಲ್ಲಿ ರ್ಯಾಪ್ ಸಾಂಗ್ಗಳ ಹೊಸ ಟ್ರೆಂಡ್ ಅನ್ನೇ ಶುರುಮಾಡಿದ್ದು ಚಂದನ್ ಶೆಟ್ಟಿ.
ತನ್ನ ರ್ಯಾಪ್ ಸಾಂಗ್ಗಳಿಂದ ಫೇಮಸ್ ಆಗಿ ಬಿಗ್ ಬಾಸ್ ಸೀಸನ್-5ನ ಸ್ಪರ್ಧಿಯಾಗಿ ಹೋಗಿದ್ದ ಚಂದನ್ ಬಿಗ್ ಬಾಸ್ ಟ್ರೋಫಿಯನ್ನೂ ಗೆದ್ದುಬಿಟ್ರು. ಅದೇ ಬಿಗ್ ಬಾಸ್ ಮನೆಯಲ್ಲಿ ಚಂದನ್ಗೆ ಸಿಕ್ಕಿದ್ದು ಈ ನಿವೇದಿತಾ.
ಗೊಂಬೆಯಂತಿದ್ದ ನಿವೇದಿತಾನ ನೋಡಿ ಕರಗಿ ಹೋಗಿದ್ದ ಚಂದು ‘ಗೊಂಬೆ ಗೊಂಬೆ’ ಅಂತಾ ಹಾಡನ್ನೇ ಕಂಪೋಸ್ ಮಾಡಿದ್ರು. ಯುವದಸರಾ ವೇದಿಕೆ ಮೇಲೆ ಪ್ರಪೋಸ್ ಮಾಡಿದ್ರು. ಕುಟುಂಬದರವರನ್ನ ಒಪ್ಸಿ ಮೈಸೂರಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ರು.
ಈ ಗೊಂಬೆ ತನ್ನ ಮನೆ-ಮನದಲ್ಲಿ ಸದಾ ಇರ್ತಾಳೆ ಅಂತ ಚಂದನ್ ನಂಬಿಕೊಂಡಿದ್ರು. ಆದ್ರೆ ಗೊಂಬೆಯಾಟ ನಾಲ್ಕೇ ವರ್ಷಕ್ಕೆ ಮುಗಿದುಹೋಗಿದೆ. ‘ಪಡೆಯಲು ಹೋಗಿ ಗೊಂಬೆ.. ಹಾಳಾಗ್ಹೋದೇ’ ಅಂತ ಹೊಸ ರ್ಯಾಪ್ ಸಾಂಗ್ ಕಂಪೋಸ್ ಮಾಡ್ತಾ ಇದ್ದಾರಂತೆ ಚಂದನ್ ಶೆಟ್ಟಿ.
ಫಿಲಂ ಬ್ಯೂರೋ, ಪವರ್ ಟಿವಿ.