ಬೆಂಗಳೂರು : ಅಕ್ಷಯ ತೃತೀಯವು ಹಿಂದೂಗಳಿಗೆ ಪುಣ್ಯ ಫಲ ನೀಡುವ ಹಬ್ಬ. ಅಕ್ಷಯ ತೃತೀಯದಂದು ಶುಭ, ಅಶುಭ ಮುಹೂರ್ತಗಳನ್ನು ನೋಡದೇ ಯಾವುದೇ ಕಾರ್ಯವನ್ನು ಪ್ರಾರಂಭಿಸಬಹುದು.
ಅಕ್ಷಯ ತೃತೀಯ, ಪರಶುರಾಮ ಜಯಂತಿ ಹಾಗೂ ಬಸವೇಶ್ವರ ಜಯಂತಿ ಒಂದೇ ದಿನ ಬಂದಿದೆ. ಈ ಶುಭದಿನ ನಾವು ಯಾವ ಕಾರ್ಯ ಮಾಡಬೇಕು? ಏನನ್ನು ಮಾಡಬಾರದು? ಯಾವ ರಾಶಿಯವರಿಗೆ ಶುಭ ಎಂಬ ಕುರಿತು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಪವರ್ ಟಿವಿಗೆ ಪ್ರತಿಕ್ರಿಯಿಸಿರುವ ಶ್ರೀಗಳು, ನಮ್ಮ ಶಾಸ್ತ್ರದಲ್ಲಿ ಸನಾತನ ಧರ್ಮದಲ್ಲಿ ವೈಶಾಖ ಮಾಸ ಶುಕ್ಲಪಕ್ಷದ ತೃತೀಯ ತಿಥಿಯನ್ನು ‘ಅಕ್ಷಯ ತೃತೀಯ’ ಎಂದು ಕರೆಯುತ್ತೇವೆ. ಮೇ 10 ಬೆಳಗ್ಗೆ 5.45 ರಿಂದ ಮಧ್ಯಾಹ್ನ 12.16ರ ತನಕ ಅಕ್ಷಯ ತೃತೀಯದ ಮುಹೂರ್ತ ಇರಲಿದೆ ಎಂದು ತಿಳಿಸಿದ್ದಾರೆ.
ಅಕ್ಷಯ ತೃತೀಯದಂದು ಯಾವ ಕಾರ್ಯ ಮಾಡಬೇಕು?
ಅಕ್ಷಯ ತೃತೀಯದಂದು ಏನನ್ನು ಮಾಡಬಾರದು?
ತಂದೆ ತಾಯಿಯ ಸೇವೆಯನ್ನು ಮಾಡಿ
ಶ್ರೀಮಠದಲ್ಲಿ ಗಜಲಕ್ಷ್ಮೀಯ ಯಾಗ
ಶ್ರೀಮಠದಲ್ಲಿ ಅಕ್ಷಯ ತೃತೀಯದಂದು ಗಜಲಕ್ಷ್ಮೀ ಯಾಗವನ್ನು ಹಮ್ಮಿಕೊಳ್ಳಲಾಗಿದೆ. ಶ್ಋಈಮಠದ ಭಕ್ತರು ಭಾಗವಹಿಸಿ ಅಕ್ಷಯದ ಪ್ರಸಾದವನ್ನು ಸ್ವೀಕರಿಸಿ, ಅಕ್ಷಯವಾದ ಪುಣ್ಯ ಸಂಪಾದಿಸಿರಿ ಎಂದು ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.