ದಾವಣಗೆರೆ : ಮುಸ್ಲಿಮರು ಏನು ಮಾಡಿದ್ರೂ ಅದನ್ನು ಕಾಂಗ್ರೆಸ್ನವರು ಮಾಫಿ ಮಾಡ್ತಾರೆ. ರಾಮನಗರ ಶಾಸಕ ಮುಸ್ಲಿಂ ಅಲ್ವಾ? ಅದು ಕೂಡ ಮಾಫಿ ಮಾಡ್ತಾರೆ. ಇಷ್ಟಾದರೂ ಏಕೆ ಅವನ ಮೇಲೆ ಆಕ್ಷನ್ ತೆಗೆದುಕೊಳ್ಳಲಿಲ್ಲ ಎಂದು ವಿಪಕ್ಷ ಉಪನಾಯಕ ಅರವಿಂದ್ ಬೆಲ್ಲದ್ ಪ್ರಶ್ನಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯರಿಗೆ ಗಂಡಸ್ತನ ಇದ್ರೆ ಆ ಶಾಸಕರ ಮೇಲೆ ಆಕ್ಷನ್ ತೆಗೆದುಕೊಳ್ಳಲಿ. ಆಕ್ಷನ್ ತಗೋಳೋದಿಲ್ಲ, ಯಾಕ್ ಹೇಳ್ರಿ.. ಅವರು ಮುಸ್ಲಿಮರಲ್ಲವೇ ಅದಕ್ಕೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎಂದು ಬರೋದಿಲ್ಲ. ಮಹಿಳೆಯರ ಮರ್ಯಾದೆ ಪ್ರಶ್ನೆ ಇದು. ಸ್ವತಃ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಹೇಳಿದ್ದಾರೆ, ತನಿಖೆ ನಡೆಸಿ ಎಂದು. ಏಕೆ ತನಿಖೆ ವಿಳಂಬ ಮಾಡಿಸಿದ್ದಾರೆ ಎಂದು ಜನರಿಗೆ ಉತ್ತರ ಕೊಡಬೇಕು. ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡು ತನಿಖೆಗೆ ವಿಳಂಬ ಮಾಡಿದ್ರು ಎಂದು ಹೇಳಲಿ. ರಾಜ್ಯ ಸರ್ಕಾರ ತನಿಖೆ ವಿಳಂಬ ಮಾಡಿದ್ದು ಏಕೆ ಅಂತ ಹೇಳಲಿ ಎಂದು ಕಿಡಿಕಾರಿದ್ದಾರೆ.
ಜಿಹಾದಿಗಳಿಗೆ ಟ್ರೈನಿಂಗ್ ಕೊಡುತ್ತಿದ್ದಾರೆ
ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಮೃತದೇಹವನ್ನು ನಾನು ಮರಣೋತ್ತರ ಪರೀಕ್ಷೇಗಿಂತ ಮೊದಲು ನೋಡಿದೆ. ಈ ರೀತಿ ಕೊಲೆ ಮಾಡಲು ಎಲ್ಲಿ ಟ್ರೈನಿಂಗ್ ನೀಡುತ್ತಾರೆ ಎಂದು ಗೊತ್ತಾಗಲಿ. ಜಿಹಾದಿ ಮನಸ್ಥಿತಿಯನ್ನು ಹೊಂದಿರುವರಿಂದಲೇ ಇದು ಸಾಧ್ಯ. ಹಿಂದೂ ಯುವತಿಯರ ಜೊತೆ ಫೋಟೋ ತೆಗೆಸಿಕೊಂಡು ಬ್ಲಾಕ್ ಮೇಲ್ ಮಾಡೋದು. ಮತಾಂತರ ಆಗುವಂತೆ ಹೆದರಿಸೋದು, ಒಪ್ಪದೇ ಇದ್ದಾಗ ಕೊಲೆ ಮಾಡೋದು. ಈ ರೀತಿ ಕೊಲೆ ಮಾಡೋ ಜಿಹಾದಿಗಳಿಗೆ ಟ್ರೈನಿಂಗ್ ಕೊಡುತ್ತಿದ್ದಾರೆ ಎಂದು ದೂರಿದ್ದಾರೆ.
ಸಿಐಡಿ ಮೇಲೆ ನಮಗೆ ನಂಬಿಕೆ ಇಲ್ಲ
ನೇಹಾ ಹತ್ಯೆಯ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿದೆ. ಸಿಐಡಿ ಮೇಲೆ ನಮಗೆ ನಂಬಿಕೆ ಇಲ್ಲ. ಪೊಲೀಸ್ ಇಲಾಖೆಯಲ್ಲಿ ಬೇಡವಾದವರನ್ನು ಸಿಐಡಿಗೆ ಹಾಕಿರುತ್ತಾರೆ. ಅಂತವರು ತನಿಖೆ ಮಾಡೋದನ್ನು ನಾವು ಒಪ್ಪೋದಿಲ್ಲ, ನ್ಯಾಯವನ್ನು ನಿರೀಕ್ಷೆ ಮಾಡೋದಿಲ್ಲ. ನೇಹಾ ಪ್ರಕರಣವನ್ನು ಸಿಬಿಐ ಸೇರಿದಂತೆ ವಿವಿಧ ಅತ್ಯುನ್ನತ ತನಿಖಾ ಸಂಸ್ಥೆಗಳಿಗೆ ನೀಡಲಿ ಎಂದ ಅರವಿಂದ್ ಬೆಲ್ಲದ್ ಒತ್ತಾಯ ಮಾಡಿದ್ದಾರೆ.