Monday, May 20, 2024

ಪ್ರಜ್ವಲ್ ರಾಸಲೀಲೆ ಪ್ರಕರಣ : ಮೋದಿಯವರೇ ನೀವು ಇನ್ನೂ ಮೌನವಾಗಿರುತ್ತೀರಾ? : ಪ್ರಿಯಾಂಕಾ ಗಾಂಧಿ ಕಿಡಿ

ದೆಹಲಿ : ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರ ರಾಸಲೀಲೆಗಳ ಪೆನ್​ಡ್ರೈವ್​ ಸುದ್ದಿ ಇದೀಗ ದೇಶದ ಟ್ರೆಂಡಿಗ್ ಟಾಫಿಕ್​ ಆಗಿದ್ದು, ಈ ಕುರಿತು ಕಾಂಗ್ರೆಸ್​ ನಾಯಕಿ ಪ್ರಿಯಾಂಕ ವಾದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿಯವರಿಗೆ ಪ್ರಶ್ನೆ ಮಾಡಿದ್ದಾರೆ.

ಪ್ರಧಾನಿಯವರೇ, ನೀವು ಭುಜದ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಳ್ಳುವ ಆ ನಾಯಕನ ಪರ ಪ್ರಚಾರಕ್ಕೆ ಘಟನೆಯ 10 ದಿನಗಳ ಮೊದಲು ತೆರಳುತ್ತೀರಿ. ಪ್ರಚಾರದ ವೇದಿಕೆಯಲ್ಲಿ ಆ ನಾಯಕನನ್ನು ಹೊಗಳಿದ್ರಿ. ಇಂದು ಕರ್ನಾಟಕದ ಆ ನಾಯಕ ದೇಶದಿಂದ ತಲೆ ಮರೆಸಿಕೊಂಡಿದ್ದಾನೆ. ಅವನ ಘೋರ ಅಪರಾಧಗಳ ಬಗ್ಗೆ ಕೇಳಿದ್ರೆ ಹೃದಯ ವಿದ್ರಾವಕವಾಗಿದೆ. ಇದರಿಂದ ನೂರಾರು ಮಹಿಳೆಯರ ಜೀವನವನ್ನು ಹಾಳಾಗಿದೆ. ಮೋದಿಜಿ, ನೀವು ಇನ್ನೂ ಮೌನವಾಗಿರುತ್ತೀರಾ? ಎಂದು ಪ್ರತಿಕ್ರಿಯೆ ನೀಡುವಂತೆ ಕಿಡಿಕಾರಿದ್ದಾರೆ.

ಇನ್ನು ಘಟನೆ ಹೊರಬರುತ್ತಿದ್ದಂತೆ ಸ್ವಕ್ಷೀಯರಿಂದಲೇ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಸಿಡಿದೆದ್ದಿದ್ದಾರೆ. ಈ ಘಟನೆಯಿಂದ ಪಕ್ಷಕ್ಕೆ ತೀವ್ರ ಮುಜುಗರವಾಗುತ್ತಿದ್ದು ಪಕ್ಷದ ಹೆಸರೇಳಲು ಹೇಸಿಗೆಯಾಗುತ್ತಿದೆ ಈ ಕೂಡಲೇ ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಪಕ್ಷದ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES