Monday, May 20, 2024

ಕುಮಾರಸ್ವಾಮಿ ಕೇಂದ್ರ ಸಚಿವರಾಗುವುದರಲ್ಲಿ ಯಾವುದೇ ಸಂಶಯವಿಲ್ಲ : ಬಿ.ವೈ. ರಾಘವೇಂದ್ರ

ಶಿವಮೊಗ್ಗ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವರಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎನ್​ಡಿಎ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಮಾತನಾಡಿ, ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ನಾನು ಲೋಕಸಭೆಯಲ್ಲಿ ಕೆಲಸ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

ಕುಮಾರಸ್ವಾಮಿ ಪಕ್ಕದಲ್ಲಿ‌ ಕುಳಿತು ನಾವು ಸಭೆ ನಡೆಸುತ್ತೇವೆ ಎಂದು ಊಹಿಸಿರಲಿಲ್ಲ. ಶೋಷಿತರ, ಬಡವರ ರಕ್ಷಣೆ ಆಗಬೇಕು ಎಂಬುದರ ಫಲವೇ ಈ ಮೈತ್ರಿ. ಕುಮಾರಣ್ಣ ಕಾಲಸಂಕಗಳಿಗೆ ಆದ್ಯತೆ ನೀಡಿ ಶಾಲಾ ಸೇತುಬಂಧ ಜಾರಿಗೆ ತರುತ್ತಾರೆ. ನಾನು ಇಲ್ಲಿಯವರೆಗೆ ಹಾಗೂ ಮುಂದೆ ಸಂಸದನಾಗಿ ಗೆದ್ದ ಮೇಲೆ ನಿಮ್ಮೆಲ್ಲರ ಆಶಯದಂತೆ ಅಭಿವೃದ್ಧಿ ಕಾರ್ಯ ನಡೆಸುತ್ತೇನೆ ಎಂದು ಹೇಳಿದರು‌.

ಕಾಂಗ್ರೆಸ್​ ದಾರಿ ತಪ್ಪಿಸುತ್ತಿರುವುದೇ ಕಾರಣ

ಮಲೆನಾಡಿನ ಸಮಸ್ಯೆಗಳನ್ನು ಆದ್ಯತೆ ಮೇಲೆ‌ ಪರಿಹರಿಸುವ ಕೆಲಸ ಮಾಡುತ್ತೇನೆ. ಹಿಂದೆ ನಮ್ಮ ಪತ್ನಿ ನಾವು ಯಾರಿಗೆ ಹೇಳುತ್ತೆವೆಯೋ ಅವರಿಗೆ ವೋಟು ಹಾಕುತ್ತಿದ್ದರು. ಆದರೆ, ಈಗ ನಮ್ಮ ಪತ್ನಿಯನ್ನೇ ನಾವು ಯಾರಿಗೆ ಮತ ನೀಡುತ್ತೀರಿ ಎಂದು ಕೇಳುವ ಸ್ಥಿತಿ ಬಂದಿದೆ. ಇದಕ್ಕೆ ಕಾಂಗ್ರೆಸ್​ ದಾರಿ ತಪ್ಪಿಸುತ್ತಿರುವುದೇ ಕಾರಣ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 22 ಜನ ನಾಮಪತ್ರ ಸಲ್ಲಿಸಿದ್ದಾರೆ

ನಿಮ್ಮ ಮತವನ್ನು ಬಿಜೆಪಿ ನೀಡಿ ಗೆಲ್ಲಿಸಿ. ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದಂತೆ ಜಿಲ್ಲೆಯಲ್ಲಿ 22 ಜನ ನಾಮಪತ್ರ ಸಲ್ಲಿಸಿದ್ದಾರೆ. ಎರಡು ವಿವಿಪ್ಯಾಟ್ ಇರುತ್ತದೆ.‌ ಹುಷಾರಾಗಿ ನೋಡಿಕೊಂಡು ಮತ ಚಲಾಯಿಸಿ ಎಂದು ಬಿ.ವೈ. ರಾಘವೇಂದ್ರ ಮನವಿ ಮಾಡಿದರು.

RELATED ARTICLES

Related Articles

TRENDING ARTICLES