ಕೊಪ್ಪಳ : ನೇಹಾ ಹಿರೇಮಠ ನಮ್ಮ ಮಗಳು ಇದ್ದಂತೆ. ಹಿರೇಮಠ ಕುಟುಂಬ ನಮ್ಮ ಪಕ್ಷದವರು. ನೇಹಾ ಹತ್ಯೆ ಮಾಡಿದ್ದು ಫಯಾಜ್ ಆಗ್ಲಿ, ಇನ್ನೊಬ್ಬ ಆಗ್ಲಿ. ಇದನ್ನ ನಾವು ಖಂಡಿಸುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ ಸಂಬಂಧ ಬಿಜೆಪಿ ರಾಜಕಾರಣಿ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಎಲ್ಲಾ ಸರ್ಕಾರದಲ್ಲೂ ಕೊಲೆಗಳು ಆಗಿವೆ. ನೇಹಾ ಹತ್ಯೆ ಪ್ರಕರಣ ನಮಗೂ ನೋವು ತಂದಿದೆ. ಕೊಲೆ ಆಗಿದಕ್ಕೆ ಆ ಕುಟುಂಬಕ್ಕೆ ಹೋಗಿ ಸಾಂತ್ವಾನ ಹೇಳುವ ಕೆಲಸ ಮಾಡಲಿ. ಅದನ್ನು ಹೊರತುಪಡಿಸಿ ಸಾವಿನ ಮನೆಯಲ್ಲಿ ರಾಜಕೀಯ ಮಾಡೋದು ಬಿಡಲಿ. ಕಾನೂನಿನಲ್ಲಿ ಏನು ಶಿಕ್ಷೆ ಇದೆ, ಅದು ಖಂಡಿತಾ ಆ ಕೊಲೆ ಆರೋಪಿಗೆ ಆಗುತ್ತೆ ಎಂದು ತಿಳಿಸಿದ್ದಾರೆ.
ಮೋದಿಗೆ ಇವಾಗ ನೆನಪಾಯ್ತಾ?
ಪ್ರಧಾನಿ ಮೋದಿ ಸಂವಿಧಾನ ಬದಲಾವಣೆ ಮಾಡೋಲ್ಲ ಎಂಬ ಹೇಳಿಕೆಗೆ ಸಚಿವ ಶಿವರಾಜ ತಂಗಡಗಿ ತಿರುಗೇಟು ನೀಡಿದ್ದಾರೆ. ಸಂವಿಧಾನ ಟಚ್ ಮಾಡೋಕೆ ಬೀಡೋರ್ ಯಾರು? ಸಂವಿಧಾನದ ಬಗ್ಗೆ ಮೋದಿಗೆ ಇವಾಗ ನೆನಪಾಯ್ತಾ? ಎಂದು ಕಿಡಿಕಾರಿದ್ದಾರೆ.
ದೇಶಕ್ಕೆ ಬಿಜೆಪಿ ಕೊಡುಗೆ ಶೂನ್ಯ
ನಿಮಗೆ ಸಂವಿಧಾನದ ಮೇಲೆ ಗೌರವ ಇದ್ದಿದ್ರೆ ಸಂವಿಧಾನದ ಕುರಿತು ಅವಹೇಳನವಾಗಿ ಮಾತನಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ಅಂಬೇಡ್ಕರ್ ಸಂವಿಧಾನವನ್ನು ಗೌರವಿಸುತ್ತ ಬಂದಿದ್ದು ನಮ್ಮ ಕಾಂಗ್ರೆಸ್ ಪಕ್ಷ. ನಮ್ಮದು ಸ್ವತಂತ್ರ ಹೋರಾಟಕ್ಕಾಗಿ ಹುಟ್ಟಿದ ಪಕ್ಷ. ದೇಶಕ್ಕೆ ಬಿಜೆಪಿ ಕೊಡುಗೆ ಏನಿದೆ ಎಂದು ಮೋದಿ ಹೇಳಲಿ ನೋಡೋಣ. ದೇಶಕ್ಕೆ ಬಿಜೆಪಿ ಕೊಡುಗೆ ಶೂನ್ಯ ಎಂದು ಹರಿಹಾಯ್ದಿದ್ದಾರೆ.