Saturday, May 4, 2024

ನಾನು ಯಾವಾಗಲೋ ಸಾಯಬೇಕಿತ್ತು : ದೇವೇಗೌಡ ಕಣ್ಣೀರು

ಹಾಸನ : ಸಕಲೇಶಪುರದ ಕಟ್ಟಾಯ ಹೋಬಳಿಯ ಸತ್ತಿಗರಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದ ಪ್ರಚಾರ ಸಭೆಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ಕಣ್ಣೀರು ಹಾಕಿದ್ದಾರೆ.

ನಾನು ಯಾವಾಗಲೋ ಸಾಯಬೇಕಿತ್ತು. ಆದರೆ, ಬದುಕಿದೆ. ನನಗೆ ಮೂರು ವರ್ಷ ಕಿಡ್ನಿ ಪೇಲ್ ಆಗಿತ್ತು. ಮಣಿಪಾಲ್ ಆಸ್ಪತ್ರೆಯಲ್ಲಿ ನನ್ನ ಅಳಿಯ ಡಾ. ಮಂಜುನಾಥ್, ಡಾ. ಬಳ್ಳಾಲು ಮೂರು ವರ್ಷದಲ್ಲಿ ಬದುಕಿಸಿದ್ರು. ನಿಮ್ಮ ನೋಡೋ ಸೌಭಾಗ್ಯ ಎಂದು ದೇವೇಗೌಡ್ರು ಅತ್ತಿದ್ದಾರೆ.

ನಿಮ್ಮನ್ನ ನೋಡಿದಾಗ ನನಗೆ ತುಂಬಾ ನೋವಿದೆ. ತಾಯಿ ಹೂವು ಕೊಟ್ಟಿತು ಅಂತ ಅರ್ಚಕರು ಕೊಟ್ಟಿದ್ದಾರೆ. ಜೇಬಲಿ ಇಟ್ಕೊಂಡಿದ್ದೀನಿ ನಾನು. ನಿಮ್ಮನ್ನ ಗೆಲ್ಲಿಸ್ತಿವಿ ಅಂತ ಬಂದಿರೋ ಪುಣ್ಯಾತ್ಮರು ನೀವು. ನಿಮಗೆ ಸಾಷ್ಟಾಂಗ ನಮಸ್ಕಾರ. ಉಳಿದ ಇನ್ನೆರಡು ವರ್ಷ ಬದುಕಬಹುದು ನಾನು. ಏನು ಮಾಡಬೇಕು ಅನ್ನೋದು ನಿತ್ಯ ತಲೆ ಒಳಗೆ ಯೋಚನೆ ಮಾಡ್ತಿನಿ, ಬಿಡೋದಿಲ್ಲ ನಾನು ಎಂದು ಭಾವುಕರಾಗಿದ್ದಾರೆ.

28ಕ್ಕೆ 28 ಗೆಲ್ಲಿಸಿ, ಅಮೇಲೆ ನೋಡ್ತಿನಿ ನಾನು

ನಾನು ಡ್ರಿಪ್ ಇರಿಗೇಷನ್, ಟ್ರ್ಯಾಕ್ಟರ್​ಗೆ, ಟಿಲ್ಲರ್​ಗೆ ಸಬ್ಸಿಡಿ ಕೊಟ್ಟಿದ್ದೆ. ಚಿಕ್ಕಬಳ್ಳಾಪುರದಲ್ಲಿ ನಾನು ಮೋದಿಗೆ ಹೇಳಿದೆ. ನಮ್ಮ ರಾಜ್ಯದ ನೀರು ಕಾವೇರಿ ನೀರನ್ನ ಇವತ್ತು ಅವನು ಸ್ಟಾಲಿನ್ ಕೊಡೊದಿಲ್ಲ ಅಂತಾನೆ. ನೀವು 28ಕ್ಕೆ 28 ಗೆಲ್ಲಿಸಿ, ಅಮೇಲೆ ನೋಡ್ತಿನಿ ನಾನು. ಇದು ಕೇವಲ ಹಾಸನ ಲೋಕಸಭಾ ಪ್ರಶ್ನೆ ಅಲ್ಲ, 28 ಕ್ಷೇತ್ರ ಗೆಲ್ಲಬೇಕು. ನನ್ನ ಮನಸ್ಸಲ್ಲಿ ನೋವಿದೆ. ನಮ್ಮ ಗೌಡ ಬರ್ತಾನೆ, ಏನಾದ್ರು ಮಾಡ್ತಾನೆ ಅಂತ ಇಲ್ಲಿ 20 ಹಳ್ಳಿಜನ ಸೇರಿದ್ದೀರಿ ಎಂದು ಹೇಳಿದ್ದಾರೆ.

ಕೆಲಸ ಮಾಡಿ ನನ್ನ ಕೊನೆ ಉಸಿರು ಎಳಿಬೇಕು

ಪ್ರಧಾನಿ ಮೋದಿ ಜೊತೆ ಕೂತು ಫೋಟೋ ತೆಗೆಸಿಕೊಳ್ಳದಲ್ಲ. ಮೋದಿಯವರನ್ನು ಚುನಾವಣೆ ಮುಗಿದ ಮೇಲೆ ಆ ಮನುಷ್ಯ ಸುಮಾರು 400 ಸೀಟು ಅಂತಾರೆ. ಅವರು ಪ್ರಧಾನ ಮಂತ್ರಿ ಆಗೋದು ನೂರಕ್ಕೆ ನೂರು ಪಟ್ಟು ಸತ್ಯ. ಅವರ ಕೈಹಿಡಿದು ಬರೆಸೋ ಶಕ್ತಿ ಇದೆ ನನಗೆ. ಏನು ಮಾಡಬೇಕು? ಯಾವ ಥರ ಮಾಡಬೇಕು? ಈ ಭಾಗಕ್ಕೆ ಹೇಗೆ ನಿಮ್ಮನ್ನ ಬದುಕಲಿಕ್ಕೆ ಮಾರ್ಗ ಕಲ್ಪಿಸಿಬೇಕು ಅನ್ನೊದನ್ನ ಮಾಡಿ, ನನ್ನ ಕೊನೆ ಉಸಿರು ಎಳಿಬೇಕು ಎನ್ನುವ ಹಠ ಇದೆ ನನಗೆ ಎಂದು ದೇವೇಗೌಡ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES