ಮಂಡ್ಯ : ಚುನಾವಣೆ ಅಂದ್ರೆ ಮಂಡ್ಯ ಜಿಲ್ಲೆ ಗರಿಗೆದರಿ ನಿಲ್ಲುತ್ತದೆ. ಚುನಾವಣೆಯನ್ನೇ ಉಸಿರಾಗಿಸಿಕೊಂಡಿರೋ ಇಡೀ ಜಿಲ್ಲೆ ಜನ ರಾಜಕೀಯವನ್ನೇ ಹೊದ್ದು ಮಲಗುತ್ತಾರೆ. ಇಂತಹ ಲೋಖಾ ಅಖಾಡದಲ್ಲಿ ಕಾಂಗ್ರೆಸ್ ತನ್ನದೇ ಆದ ಛಾಪು ಮೂಡಿಸುತ್ತಿದೆ.
ತನ್ನ ಅಬ್ಬರದ ಪ್ರಚಾರವನ್ನ ಕಾಂಗ್ರೆಸ್ ಮುಂದುವರೆಸಿದೆ. ಇಡೀ ಜಿಲ್ಲೆಯಲ್ಲಿ ಈಗಾಗಲೇ ಎರಡು ಸುತ್ತಿನ ಪ್ರಚಾರ ನಡೆಸಿದ್ದು, ಮತ್ತೆ ತನ್ನ ಮೂರನೇ ಸುತ್ತಿನ ಪ್ರಚಾರವನ್ನು ಮುಂದುವರೆಸಿದೆ. ಇಂದೂ ಕೂಡ ಕೆ.ಆರ್.ಪೇಟೆ ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ರೋಡ್ ಶೋ ಮೂಲಕ ಪ್ರಚಾರ ಪ್ರಾರಂಭಿಸಿತು.
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಇಂದು ಕೆ.ಆರ್.ಪೇಟೆ ಹಾಗೂ ನಾಗಮಂಗಲ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ರು. ಸ್ಟಾರ್ ಚಂದ್ರು ಹೋದಲೆಲ್ಲಾ ಅಭಿಮಾನಿಗಳು, ಕಾರ್ಯಕರ್ತರು ಬೃಹತ್ ಹಾರ ಹಾಕಿ, ಪಟಾಕಿ ಸಿಡಿಸಿ, ಜಯಘೋಷಗಳೊಟ್ಟಿಗೆ ಭರ್ಜರಿ ಸ್ವಾಗತ ಕೋರಿದರು.
ಇದೇ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮತ್ತಷ್ಟು ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುತ್ತೆ. ನಾನು ಈ ಮಣ್ಣಿನ ಮಗ, ದಯಮಾಡಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.
ಇನ್ನು,ಪ್ರಚಾರದ ವೇಳೆ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಜನರಿಗೆ ಕಾಂಗ್ರೆಸ್ ಸರ್ಕಾರದ ಮೇಲೆ ವಿಶ್ವಾಸವಿದೆ. ಸ್ಟಾರ್ ಚಂದ್ರು ಉದ್ಯಮದಲ್ಲಿ ಹೆಸರು ಮಾಡಿವರು ಹೀಗಾಗಿ ಅಭಿವೃದ್ಧಿ ನಿಶ್ಚಿತ ಎಂದರು.
ಒಟ್ಟಾರೆ, ಕೆ.ಆರ್.ಪೇಟೆ ಕ್ಷೇತ್ರದ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಸ್ಟಾರ್ ಚಂದ್ರು, ಪ್ರಚಾರದುದ್ದಕ್ಕೂ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಹಾಗೂ ಗ್ಯಾರಂಟಿಗಳನ್ನು ಜನರಿಗೆ ಮನದಟ್ಟು ಮಾಡಿದರು.
ಸಚಿವರಾದ ಚಲುವರಾಯಸ್ವಾಮಿ ಅವರೊಂದಿಗೆ ನಾಗಮಂಗಲದ ಹುಲಿಕೆರೆ ಗ್ರಾಮದ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು, ಜನರ ಒಳಿತಿಗೆ ಪ್ರಾರ್ಥಿಸಿದೆ. ಬಳಿಕ ಗ್ರಾಮಸ್ಥರಲ್ಲಿ ಮತಯಾಚಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಈ ಚುನಾವಣೆಯಲ್ಲಿ ಹಸ್ತದ ಗುರುತಿಗೆ ಮತ ನೀಡುವಂತೆ ಕೋರಿದೆ.#Mandya #StarChandru pic.twitter.com/IUBshLYgax
— Venkataramane Gowda (@nimstarchandru) April 22, 2024