ಬೀದರ್ : ಅದು ಎರಡ್ಮೂರು ವರ್ಷಗಳ ಹಿಂದೆ ಆರಂಭವಾಗಿದ್ದ ಲವ್. ಇಂದು ಆಕೆಯ ಮದುವೆ ಕೂಡಾ ಇನ್ನೊಬ್ಬನ ಜೊತೆ ನಿಶ್ಚಯವಾಗಿತ್ತು. ಅದೇ ದಿನ ಯುವಕನ ಶವ ಕೂಡಾ ನಿಗೂಢವಾಗಿ ಪತ್ತೆಯಾಗಿದೆ.
ರೈಲ್ವೆ ಹಳಿಯ ಮೇಲೆ ಯುವಕನ ದೇಹ ತುಂಡರಿಸಿ ಬಿದ್ದಿತ್ತು. ಮೃತ ಯುವಕನ ಸಾವಿಗೆ ಯುವತಿ ಕುಟುಂಬಸ್ತರೇ ಕಾರಣ ಎಂದು ಮೃತ ಯುವಕನ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಒಂದೆಡೆ ಕುಟುಂಬಸ್ಥರ ರೋಧನ, ಇನ್ನೊಂದೆಡೆ ರೈಲ್ವೆ ಹಳಿ ಮೇಲೆ ಬಿದ್ದಿರೋ ಯುವಕನ ಶವ. ಯುವಕನ ಶವ ಕಂಡು ಬೆಚ್ಚಿ ಬಿದ್ದ ಜನ. ಈ ಎಲ್ಲಾ ದೃಶ್ಯ ಕಂಡು ಬಂದಿದ್ದು, ಬೀದರ್ ನಗರದ ನೌಬಾದ್ ಬಳಿ ಇರುವ ಹೈವೆ ಬ್ರಿಡ್ಜ್ ಬಳಿ. ಬೀದರ್ ತಾಲೂಕಿನ ನಿಜಾಂಪುರ ಗ್ರಾಮದ ನಿವಾಸಿ ವೆಂಕಟೇಶ ಕುಮಾರ್ (22) ಮೃತ ದುರ್ದೈವಿ.
ಸಾವಿಗೆ ಯುವತಿ ಕುಟುಂಬಸ್ಥರೇ ಕಾರಣ
ಇಂದು ಬೆಳಗ್ಗೆ ರೈಲ್ವೆ ಹಳಿ ಮೇಲೆ ಬಿದ್ದಿರುವ ಶವ ಕಂಡು ಜನ ಭಯಭೀತರಾಗಿದರು. ತುಂಡರಿಸಿದ ದೇಹ ಕಂಡು ತಬ್ಬಿಬ್ಬಾಗಿದ್ದರು. ತಾನಾಯ್ತು ತನ್ನ ಕೆಲಸ ಆಯ್ತು ಅಂತ ಜೀವನ ನಡೆಸ್ತಾ ಇದ್ದ ವೆಂಕಟೇಶ ಎರಡ್ಮೂರು ವರ್ಷಗಳಿಂದ ಪ್ರೀತಿ ಬಲೆಯಲ್ಲಿ ಬಿದ್ದಿದ್ದ. ನಿಜಾಂಪುರ ಗ್ರಾಮದ ಯುವತಿಯನ್ನ ಎರಡ್ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ. ಅದೇ ಪ್ರೀತಿ ಇಂದು ಆತನಿಗೆ ಮುಳುವಾಗಿದ್ದು, ರೈಲ್ವೆ ಹಳಿಯ ಮೇಲೆ ಶವವಾಗಿ ಬಿದ್ದಿದ್ದ. 22 ವರ್ಷದ ವೆಂಕಟೇಶ ಶವ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಯುವಕನ ಸಾವಿಗೆ ಯುವತಿಯ ಕುಟುಂಬಸ್ಥರೇ ಕಾರಣ ಎಂದು ಯುವತಿ ಕುಟುಂಬದವರ ಮೇಲೆ ಆರೋಪ ಮಾಡಿದ್ರು.
ನಿನ್ನೆ ಬರ್ತ್ಡೇ ಆಚರಣೆ, ಇಂದು ಶವ
ಇಬ್ಬರ ಲವ್ ವಿಚಾರಕ್ಕೆ ಮೂರು ಬಾರಿ ಯುವತಿ ಕುಟುಂಬಸ್ಥರು ಮನೆಗೆ ಆಗಮಿಸಿದ್ರು. ಕೊಲೆ ಬೆದರಿಕೆಯನ್ನ ಹಾಕಿದ್ರು. ಎರಡು ಕುಟುಂಬಸ್ಥರು ತಮ್ಮಷ್ಟಕ್ಕೆ ತಾವಿರ್ತೇವೆ ಅಂತಾ ಮಾತುಕತೆಯನ್ನ ಮಾಡಿದ್ದೇವು. ಆದರೆ, ನಿನ್ನೆ ಬರ್ತ್ಡೇ ಆಚರಣೆಯಲ್ಲಿ ಭಾಗಿಯಾಗಿದ್ದ ಅಣ್ಣ ಶವವಾಗಿದ್ದಾನೆ. ಆತನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಯುವತಿ ಸಹೋದರಿ ಅಳಲು ತೋಳಿಕೊಂಡರು.
ಒಟ್ನಲ್ಲಿ, ಮೃತ ಯುವಕ ವೆಂಕಟೇಶ ಪಾಲಿಗೆ ಪ್ರೀತಿಯೇ ಮುಳುವಾಗಿದ್ದು, ಬಾಳಿ ಬದುಕಬೇಕಾಗಿದ್ದ ವೆಂಕಟೇಶ ಇಹಲೋಕ ತ್ಯಜಿಸಿದ್ದಾನೆ. ಪ್ರೀತಿ ಬಲೆಯಲ್ಲಿ ಬೀಳದೆ ತಾನಾಯ್ತು ತನ್ನ ಕೆಲಸವಾಯ್ತು ಅಂತ ಇದ್ದಿದ್ರೆ ಇಂದು ಶವವಾಗುತ್ತಿರಲಿಲ್ಲ.