Friday, May 3, 2024

ಬೆಂಗಳೂರಿನಲ್ಲಿ ತುಂತುರು ಮಳೆ, ರಾಜಧಾನಿ ಮಂದಿ ಖುಷ್

ಬೆಂಗಳೂರು : ಬಿಸಿಲಿ ಧಗೆಗೆ ಹೈರಾಣಾಗಿ ಹೋಗಿದ್ದ ಬೆಂಗಳೂರಿಗೆ ವರುಣ ಆಗಮನವಾಗಿದೆ. ಇಂದು ಮಧ್ಯಾಹ್ನ ನಗರದ ಹಲವೆಡೆ ತುಂತುರು ಮಳೆಯಾಗಿದೆ.

ರಾಜ್ಯದ ಹಲವೆಡೆ ಭಾರಿ ಮಳೆಯಾಗಿದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ವರುಣನ ಆಗಮನವಾಗಿರಲಿಲ್ಲ. ಇಂದು ತುಂತುರು ಮಳೆಯಾಗಿದ್ದು, ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಜನರು ಫುಲ್​ ಖುಷ್​ ಆಗಿದ್ದಾರೆ.

ನಗರದ ಟೌನ್ ಹಾಲ್, ಜಯನಗರ, ಜೆ.ಪಿ. ನಗರ, ಕಾರ್ಪೊರೇಷನ್ ವೃತ್ತ, ಮೈಸೂರ್ ಬ್ಯಾಂಕ್ ವೃತ್ತ, ಸೇರಿದಂತೆ ಹಲವೆಡೆ ತುಂತುರು ಮಳೆ ಸುರಿದಿದೆ.

ಬೆಳಗ್ಗೆಯಿಂದಲೂ ಕೆಲವೆಡೆ ಮೋಡ ಕವಿದ ವಾತಾವರಣ ಕಮಡುಬಂದಿತು. ಈ ಹಿನ್ನಲೆ ನಗರದ ಕೆಲವೆಡೆ ಹಗುರ ಮಳೆಯಾಗಿದೆ. ಹವಾಮಾನ ಇಲಾಖೆ‌ ಎರಡು ದಿನ ಕಾಲ ಬೆಂಗಳೂರಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿತ್ತು.

RELATED ARTICLES

Related Articles

TRENDING ARTICLES