ಬೆಂಗಳೂರು : ಬಿಸಿಲಿ ಧಗೆಗೆ ಹೈರಾಣಾಗಿ ಹೋಗಿದ್ದ ಬೆಂಗಳೂರಿಗೆ ವರುಣ ಆಗಮನವಾಗಿದೆ. ಇಂದು ಮಧ್ಯಾಹ್ನ ನಗರದ ಹಲವೆಡೆ ತುಂತುರು ಮಳೆಯಾಗಿದೆ.
ರಾಜ್ಯದ ಹಲವೆಡೆ ಭಾರಿ ಮಳೆಯಾಗಿದೆ. ಆದರೆ, ಬೆಂಗಳೂರಿನಲ್ಲಿ ಮಾತ್ರ ವರುಣನ ಆಗಮನವಾಗಿರಲಿಲ್ಲ. ಇಂದು ತುಂತುರು ಮಳೆಯಾಗಿದ್ದು, ಬಿಸಿಲಿನ ಬೇಗೆಗೆ ಕಂಗೆಟ್ಟಿದ್ದ ಜನರು ಫುಲ್ ಖುಷ್ ಆಗಿದ್ದಾರೆ.
ನಗರದ ಟೌನ್ ಹಾಲ್, ಜಯನಗರ, ಜೆ.ಪಿ. ನಗರ, ಕಾರ್ಪೊರೇಷನ್ ವೃತ್ತ, ಮೈಸೂರ್ ಬ್ಯಾಂಕ್ ವೃತ್ತ, ಸೇರಿದಂತೆ ಹಲವೆಡೆ ತುಂತುರು ಮಳೆ ಸುರಿದಿದೆ.
#Bengaluru #rain after 142 days. pic.twitter.com/q6VT3hTwRm
— Arsenal (@sanwat) April 20, 2024
ಬೆಳಗ್ಗೆಯಿಂದಲೂ ಕೆಲವೆಡೆ ಮೋಡ ಕವಿದ ವಾತಾವರಣ ಕಮಡುಬಂದಿತು. ಈ ಹಿನ್ನಲೆ ನಗರದ ಕೆಲವೆಡೆ ಹಗುರ ಮಳೆಯಾಗಿದೆ. ಹವಾಮಾನ ಇಲಾಖೆ ಎರಡು ದಿನ ಕಾಲ ಬೆಂಗಳೂರಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿತ್ತು.
Finally #rain #Bengaluru #bengalururains pic.twitter.com/fWW9X23GAt
— Rakesh saasui.design (@_rakeshmondal) April 20, 2024