Saturday, May 4, 2024

ನೇಹಾಳನ್ನು ಕೊಂದಿದ್ದು ಡಿ.ಕೆ. ಶಿವಕುಮಾರ್ ಬ್ರದರ್ಸ್ : ಸಿ.ಟಿ. ರವಿ

ಚಿಕ್ಕಮಗಳೂರು : ಡಿ.ಕೆ. ಶಿವಕುಮಾರ್‌ ಅವರ ಎಮೋಷನಲ್ ಬ್ರದರ್ಸ್ ಇದ್ದಾರಲ್ಲ, ಅವರೇ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾಳನ್ನು ಕೊಂದು ಹಾಕಿದ್ದು ಎಂದು ಮಾಜಿ ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದು ಡಿಕೆಶಿ ಬ್ರದರ್ಸ್. ಅವರೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದ್ದು. ಡಿ.ಕೆ. ಶಿವಕುಮಾರ್‌ ಅವರೇ ನಿಮ್ಮ ಸ್ವಂತ, ರಕ್ತ ಹಂಚಿಕೊಂಡ ಬ್ರದರ್ ಚುನಾವಣೆಯಲ್ಲಿ ಸೋಲ್ತಾರೆ. ಈ ಚುನಾವಣೆಯಲ್ಲಿ ಡಿಕೆಶಿ ಅವರ ಬ್ರದರ್ ಸೋಲ್ತಾರೆ, ಅನುಮಾನವೇ ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.

ಆ ಮಹದೇವಪ್ಪ ಅನ್ನೋ ಸಚಿವ ಹೇಳ್ತಾನೆ. ಇದೆಲ್ಲಾ ಬಿಜೆಪಿಯವರ ಆಟ ಅಂತಾನೆ. ಸಿಎಂ ಸಿದ್ರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್‌ಗೆ ವಿಷಯದ ಗಂಭೀರತೆ ಇದ್ಯಾ? ಅವರ ಮನೆಯಲ್ಲಿ ಈ ರೀತಿ ಘಟನೆ ಆಗಿಲ್ಲವಲ್ಲಾ. ಅವರ ಮನೆ ಹೆಣ್ಣು ಮಕ್ಕಳಿಗೆ ಆಗಿದ್ರೆ, ಆಗ ಸಂಕಟ ಅರ್ಥ ಆಗೋದು. ಸಂವೇದನೆ ಕಳ್ಕೊಂಡ ಕಾಂಗ್ರೆಸ್ಸಿಗೆ ಏನೂ ಅರ್ಥ ಆಗಲ್ಲ. ಅವರ ಸಂವೇದನೆ ಸತ್ತೋಗಿದೆ, ವೋಟ್‌ ಬ್ಯಾಂಕ್ ಮಾತ್ರ ಕಾಣ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

387 ಕಾಂಗ್ರೆಸ್ ಅಭ್ಯರ್ಥಿಗಳ ಠೇವಣಿ ನಷ್ಟ

ರಾಜ್ಯದಲ್ಲಿ ಕಾಂಗ್ರೆಸ್ ಚೊಂಬು ಜಾಹೀರಾತು ವಿಚಾರ ಕುರಿತು ಮಾತನಾಡಿ, ರಾಜಸ್ಥಾನ, ಮಧ್ಯ ಪ್ರದೇಶದಲ್ಲಿ ಅಲ್ಲಿನ ಜನ ಅವರಿಗೆ ಚೊಂಬು ಕೊಟ್ಟಿದಾರೆ. ಉತ್ತರ ಪ್ರದೇಶದಲ್ಲಿ 387 ಕಾಂಗ್ರೆಸ್ ಅಭ್ಯರ್ಥಿಗಳ ಠೇವಣಿ ನಷ್ಟ ಆಯ್ತು. ಇದೆಲ್ಲಾ ಕಾಂಗ್ರೆಸಿಗೆ ಚೊಂಬು ಕೊಟ್ಟಿರೋ ಲಕ್ಷಣ ಅಲ್ವಾ? ಪಂಚವಾರ್ಷಿಕ ಯೋಜನೆ ಹೆಸರಲ್ಲಿ ಜನರಿಗೆ ಚೊಂಬು ಕೊಟ್ರು. ಗರೀಬಿ ಹಠಾವೋ ಹೆಸರಲ್ಲಿ ಜನರ ಕೈಗೆ ಚೊಂಬು ಕೊಟ್ರು ಎಂದು ಸಿ.ಟಿ. ರವಿ ಚಾಟಿ ಬೀಸಿದ್ದಾರೆ.

RELATED ARTICLES

Related Articles

TRENDING ARTICLES