ಬೆಂಗಳೂರು : ಬಿಜೆಪಿ ಪ್ರಣಾಳಿಕೆ ಘೋಷಣೆಯ ಸ್ಲೋಗನ್ ಪುಸ್ತಕವಾಗಿದೆ, ಪ್ರಣಾಳಿಕೆಯಲ್ಲಿ ಮೋದಿ ಫೋಟೋಬಿಟ್ಟರೆ ದೇಶದ ಜನತೆಗೆ ಉಪಯೋಗವಾಗುವ ಅಂಶಗಳಿಲ್ಲ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.
ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಪಿಕ್ನಿಕ್ ಹೋಗಿರೋ ಫೋಟೊಗಳು ಬಿಟ್ರೆ ಪ್ರಣಾಳಿಕೆಯಲ್ಲಿ ಇನ್ನೇನು ಇಲ್ಲ, ಏನ್ ಮಾಡ್ತಾರೆ, ಹೇಗೆ ಮಾಡ್ತಾರೆ ಅನ್ನೋ ಸ್ಪಷ್ಟತೆ ಇಲ್ಲದ ಪ್ರಣಾಳಿಕೆ ಇದು, ಪ್ರಣಾಳಿಕೆ ಮುಖಪುಟ ನೋಡಿದ್ರೆ ಮೋದಿ ಅಚ್ಚೆ ದಿನ್ ಮೋದಿ ಗ್ಯಾರೆಂಟಿ ಇವೆ ಇದನ್ನು ಇಟ್ಟುಕೊಂಡು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಮೋದಿಯಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಪ್ರಣಾಳಿಕೆಯಲ್ಲಿ ಏನೇನಿದೆ ?
ಆನೆಗುಂದಿಯಲ್ಲಿ ಐತಿಹಾಸಿಕ ರಾಮಾಯಣ ಸರ್ಕ್ಯೂಟ್ ಮಾಡುತ್ತೇವೆ ಎಂದಿದ್ದರು, ಈ ಯೋಜನೆ ಎಲ್ಲಿ ಹೋಯಿತು? ಕೇಂದ್ರ ಸರ್ಕಾರದ ಅಧೀನದಲ್ಲೆ ಲಕ್ಷಾಂತರ ಹುದ್ದೆಗಳು ಖಾಲಿಯಿವೆ, ಕಳೆದ ಬಾರಿ 2.50 ಲಕ್ಷ ಹುದ್ದೆಗಳನ್ನ ಖಾಲಿಯಿಟ್ಟುಕೊಂಡು ಬಿಜೆಪಿ ಚುನಾವಣಾ ಪ್ರಚಾರ ನಡೆಸಿತ್ತು ಲೋಕನೀತಿ ಸರ್ವೆ ಪ್ರಕಾರ ಶೇ 79 ರಷ್ಟು ಜನರಿಗೆ ಅರ್ಹತೆ ಇದ್ರು ಉದ್ಯೋಗ ಸಿಗುತ್ತಿಲ್ಲ ಎಂದರು.