ಶಿವಮೊಗ್ಗ : ಈಶ್ವರಪ್ಪ ಸುದ್ದಿಗೆ ನಾವು ಹೋಗಲ್ಲ. ಇವಾಗ ಗೀತಕ್ಕ ಕಾವು ಎದ್ದಿದ್ದೆ, ಅವರ ಕಾವು ಎದ್ದೇಳಲಿ. ಆಮೇಲೆ ಅವರ ಬಗ್ಗೆ ಮಾತನಾಡುತ್ತೇನೆ. ಬಿಜೆಪಿಯವರ ಬಗ್ಗೆನೂ ಮಾತನಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ದಲ್ಲಿ ನನ್ನ ತಂಗಿ ಗೀತಾ ಗೆಲ್ತಾರೆ. ಇಡೀ ರಾಜ್ಯದಲ್ಲಿ 20ಕ್ಕೂ ಹೆಚ್ಚು ಹೆಚ್ಚು ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ತಿಳಿಸಿದ್ದಾರೆ.
ಇಡೀ ರಾಜ್ಯ ಸುತ್ತುತ್ತಿದ್ದೇನೆ. ನಮ್ಮ ಗುರುಗಳ ಮಗಳ ನಾಮಪತ್ರ ಸಲ್ಲಿಕೆಗೆ ಬಂದಿದ್ದೇನೆ. ಶಿವಮೊಗ್ಗ ಇತಿಹಾಸ ನಿರ್ಮಾಣ ಆಗುತ್ತದೆ ಎನ್ನುವ ವಿಶ್ವಾಸ ಇದೆ. ನನ್ನ ಗುರುಗಳಾದ ಬಂಗಾರಪ್ಪ ಹೇಗೆ ಗೆದ್ರೋ ಹಾಗೆಯೇ ಅವರ ಪುತ್ರಿ ಗೆಲ್ಲಿಸಬೇಕೆಂಬ ವಾತಾವರಣ ಇಲ್ಲಿ ಕಾಣ್ತಾ ಇದೆ. ನಾನು ಬಿಜೆಪಿಯವರಿಗೆ ಒಂದು ಪ್ರಶ್ನೆ ಕೇಳ್ತಾ ಇದ್ದೇನೆ. ನಿಮ್ಗೆ ಯಾಕೆ ವೋಟ್ ಹಾಕಬೇಕು. ಏನು ಕೆಲಸ ಮಾಡಿದ್ದೀರಾ ? ಎಂದು ಪ್ರಶ್ನಿಸಿದ್ದಾರೆ.
ನನ್ನ ಪತ್ನಿ ಖಂಡಿತ ಗೆಲ್ತಾರೆ
ನಟ ಶಿವರಾಜ್ ಕುಮಾರ್ ಮಾತನಾಡಿ, ರೋಡ್ ಶೋ ಭಾಗಿಯಾದ ಎಲ್ಲರಿಗೂ ತುಂಬು ಹೃದಯದ ಧನ್ಯವಾದ ತಿಳಿಸುತ್ತೇನೆ. ಡಿ.ಕೆ. ಶಿವಕುಮಾರ್ ಅವರಿಗೆ ಥ್ಯಾಂಕ್ಸ್ ಹೇಳ್ತೇನೆ. ಶಿವಮೊಗ್ಗದಲ್ಲಿ ಇವತ್ತು ಪಾಸಿಟಿವ್ ವಾತಾವರಣ ಇತ್ತು. ಎಲ್ಲಾ ಬದಲಾವಣೆ ಬಯಸಿದ್ದಾರೆ. ಗೀತಾ ಖಂಡಿತ ಗೆಲ್ತಾರೆ ಎಂದು ಹೇಳಿದ್ದಾರೆ.
ಡಿಕೆಶಿ ಅಣ್ಣನಿಗೆ ಥ್ಯಾಂಕ್ಸ್ ಹೇಳ್ತೇನೆ
ಶಿವಮೊಗ್ಗ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮಾತನಾಡಿ, ರೋಡ್ ಶೋ ಭಾಗಿಯಾದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಮುಖ್ಯವಾಗಿ ಡಿ.ಕೆ. ಶಿವಕುಮಾರ್ ಅಣ್ಣನಿಗೆ ಥ್ಯಾಂಕ್ಸ್ ಹೇಳ್ತೇನೆ. ರೋಡ್ ಶೋನಲ್ಲಿ ಎಲ್ಲಾ ಖುಷಿಯಿಂದ ಭಾಗಿಯಾಗಿದ್ರು. ಎಲ್ಲರಿಗೂ ಥ್ಯಾಂಕ್ಸ್ ಹೇಳ್ತೇನೆ ಎಂದು ತಿಳಿಸಿದ್ದಾರೆ.