Saturday, May 11, 2024

ಟಗರುಪುಟ್ಟಿಗೆ ಮದ್ವೆ ಸಂಭ್ರಮ.. ಯಾರು ಆ ಅದೃಷ್ಠವಂತ..?

ಫಿಲ್ಮಿಡೆಸ್ಕ್​ : ಕೆಂಡಸಂಪಿಗೆ ಚೆಲುವೆ ಮಾನ್ವಿತಾ ಹರೀಶ್​ಗೆ ಕಂಕಣಭಾಗ್ಯ ಕೂಡಿಬಂದಿದೆ. ಇದು ಒಂದಷ್ಟು ಮಂದಿ ಹುಡುಗರ ಹಾರ್ಟ್​ ಬ್ರೇಕ್ ಮಾಡೋ ವಿಷಯವೇ ಆದ್ರೂ ಸಹ, ಕನ್ನಡ ಸಿನಿಪ್ರಿಯರು ಮಾತ್ರ ಶುಭವಾಗಲಿ ಅಂತ ಬೆಸ್ಟ್ ವಿಷಸ್ ಹೇಳ್ತಿದ್ದಾರೆ. ಇಷ್ಟಕ್ಕೂ ಹುಡ್ಗ ಯಾರು..? ಯಾವ ಊರು..? ಮದ್ವೆ ಯಾವಾಗ..? ಎಲ್ಲಿ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

ಮಾನ್ವಿತಾ ಹರೀಶ್.. 31 ವರ್ಷದ ಈ ಮುದ್ದು ಮೊಗದ ಪೋರಿ ಅಪ್ಪಟ ಕನ್ನಡತಿ. ರೇಡಿಯೋ ಆರ್ಜೆಯಾಗಿ ಚಿಟಪಟ ಅಂತ ಕನ್ನಡ ಮಾತಾಡೋ ಜರ್ನಲಿಸ್ಟ್ ಆಗಿದ್ರು. ಆದ್ರೆ ದುನಿಯಾ ಸೂರಿ ನಿರ್ದೇಶನದ ಕೆಂಡಸಂಪಿಗೆ ಸಿನಿಮಾಗೆ ಆಡಿಷನ್ಸ್ ಕೊಟ್ಟು, ಸೆಲೆಕ್ಟ್ ಆದ ಬಳಿಕ ಅಮ್ಮನೊಂದಿಗೆ ಮಂಗಳೂರಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ರು.

ಚೊಚ್ಚಲ ಚಿತ್ರದಲ್ಲೇ ಭರವಸೆ ಮೂಡಿಸಿದ ಈ ಚೆಲುವೆ, ಮನೋಜ್ಞ ಅಭಿನಯದಿಂದ ತಾನು ಭವಿಷ್ಯದ ಸ್ಟಾರ್ ನಟಿ ಅನ್ನೋದ್ರ ಹಿಂಟ್ ನೀಡಿದ್ರು. ಅದಾದ ಬಳಿಕ ಚೌಕ, ಕನಕ, ಟಗರು, ಇಂಡಿಯಾ ವರ್ಸಸ್ ಇಂಗ್ಲೆಂಡ್, ಶಿವ 143 ಹೀಗೆ ಸಾಲು ಸಾಲು ಸಿನಿಮಾಗಳನ್ನ ಮಾಡಿದ್ರು. ಆದ್ರೆ ಟಗರು ಸಿನಿಮಾ ಸಿಕ್ಕಾಪಟ್ಟೆ ದೊಡ್ಡ ಹೆಸರು ತಂದುಕೊಟ್ಟಿತು. ಟಗರು ಪುಟ್ಟಿ ಅಂತಲೇ ಫೇಮಸ್ ಆದ್ರು.

ಇದನ್ನೂ ಓದಿ: ಮತ್ತೊಂದು ದಾಖಲೆ ಬರೆದ ಯಶ್ : ರಾಮಾಯಣ ಚಿತ್ರದ ನಿರ್ಮಾಪಕನಾದ ರಾಕಿಭಾಯ್​!

ಇತ್ತೀಚೆಗೆ ತಾಯಿಯನ್ನ ಕಳೆದುಕೊಂಡು ಒಂಟಿಯಾಗಿದ್ದ ಈ ಚೆಂದುಳ್ಳಿ ಚೆಲುವೆ, ಇದೀಗ ಜಂಟಿಯಾಗೋ ಮನಸ್ಸು ಮಾಡಿದ್ದಾರೆ. ಹೌದು.. ಮೈಸೂರು ಮೂಲದ ಟೆಕ್ಕಿ ಅರುಣ್ ಕುಮಾರ್ ಜೊತೆ ಸಪ್ತಪದಿ ತುಳಿಯೋಕೆ ಸಜ್ಜಾಗಿದ್ದಾರೆ. ಇದನ್ನ ಸ್ವತಃ ಅವರೇ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ. ನಮ್ಮ ಫಿಲ್ಮಿ ಪವರ್ ಟೀಂಗೆ ಮಾಹಿತಿ ನೀಡಿದ ಮಾನ್ವಿತಾ, ಮೇ-1ಕ್ಕೆ ನಮ್ಮೂರು ಮಂಗಳೂರಿನಲ್ಲಿ ನಾವು ಮದುವೆ ಆಗ್ತಿದ್ದೀವಿ ಎಂದರು.

ಅಷ್ಟೇ ಅಲ್ಲ, ಈ ಸಂಬಂಧ ಅಮ್ಮನೇ ನೋಡಿದ್ರು. ಮ್ಯಾಟ್ರಿಮೊನಿ ವೆಬ್​​ಸೈಟ್ ಮೂಲಕ ಅರುಣ್ ಕುಮಾರ್ ಫ್ಯಾಮಿಲಿ ಅಮ್ಮ ಇದ್ದಾಗಲೇ ಅಪ್ರೋಚ್ ಮಾಡಿದ್ದರಂತೆ. ನಾನು ಆಗ ನೆಗ್ಲೆಕ್ಟ್ ಮಾಡಿದ್ದೆ. ಅಮ್ಮ ತೀರಿಕೊಂಡ ಬಳಿಕ ಅರುಣ್ ಅವರ ಪೋಷಕರು ನನ್ನ ಭೇಟಿ ಮಾಡಿದ್ರು. ಎಲ್ಲವೂ ಓಕೆ ಆಗಿ ಈಗ ಗುರುಹಿರಿಯರ ನಿಶ್ಚಯದಂತೆ ಮದ್ವೆ ಆಗ್ತಿದ್ದೀವಿ ಅಂತಾರೆ ಮಾನ್ವಿತಾ ಹರೀಶ್.

ಹುಡುಗ ಬಹಳ ಶೈ ನೇಚರ್​ನಿಂದ ಕೂಡಿದ್ದು, ಮ್ಯೂಸಿಕ್ ಪ್ರೊಡ್ಯೂಸರ್ ಕೂಡ ಹೌದಂತೆ. ಎಲೆಕ್ಷನ್ ನೀತಿ ಸಂಹಿತೆ ಇರೋದ್ರಿಂದ ಕುಟುಂಬಸ್ಥರು ಹಾಗೂ ಅತ್ಯಾಪ್ತರ ಜೊತೆ ತವರೂರಾದ ಮಂಗಳೂರಲ್ಲಿ ಸರಳವಾಗಿ ಹಾಗೂ ಶಾಸ್ತ್ರೋಕ್ತವಾಗಿ ಮದ್ವೆ ಆಗ್ತಿದ್ದಾರೆ ಮಾನ್ವಿತಾ- ಅರುಣ್. ಅದಾದ ಬಳಿಕ ಚಿತ್ರರಂಗದ ಮಂದಿಗಾಗಿ ಬೆಂಗಳೂರಲ್ಲಿ ಒಂದು ಗೆಟ್ ಟುಗೆದರ್ ಮಾಡೋ ಯೋಜನೆಯಲ್ಲಿದ್ದಾರೆ.

ಲಕ್ಷ್ಮೀನಾರಾಯಣ್ ಬಿ.ಎಸ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

 

RELATED ARTICLES

Related Articles

TRENDING ARTICLES