ಬೆಂಗಳೂರು : ಆತನಿಗೆ 32 ವರ್ಷ. ಒಳ್ಳೆಯ ಫ್ಯಾಮಿಲಿ. ಒಳ್ಳೆ ಕೆಲಸ. ಇತ್ತೀಚೆಗೆ ಶುರು ಮಾಡಿದ್ದ ಮದುವೆ ಲೈಫು. ಎಲ್ಲವೂ ಚೆನ್ನಾಗಿತ್ತು. ಎಂದಿನಂತೆ ಬೆಳಗ್ಗೆ ಕೆಲ್ಸಕ್ಕೆ ಹೋಗ್ತೀನಿ ಅಂತ ಹೊರ ಬಂದಾತ ನಾಯಂಡಹಳ್ಳಿ ಫ್ಲೈ ಓವರ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡ್ಕೊಂಡಿದ್ದಾನೆ.
ಬೆಂಗಳೂರಿನ ನಾಯಂಡಹಳ್ಳಿ ಫ್ಲೈಓವರ್ ಮೇಲಿನಿಂದ ಜಿಗಿದು ಕರ್ನಾಟಕ ವಿದ್ಯುತ್ ಕಾರ್ಖಾನೆಯ ಗುತ್ತಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನವೀನ್ ಯಾದವ್ (32) ಆತ್ಮಹತ್ಯೆ ಮಾಡಿಕೊಂಡಿರೋ ವ್ಯಕ್ತಿ.
ಬೆಳಗ್ಗೆ ಕೆಲಸಕ್ಕೆ ಅಂತ ಮನೆಯಿಂದ ಹೊರಟಿದ್ದ ನವೀನ್ 8.30ರ ಸುಮಾರಿಗೆ ನಾಯಂಡಹಳ್ಳಿ ಫ್ಲೈ ಓವರ್ ಮೇಲಿನಿಂದ ಏಕಾ ಏಕಿ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಂದಹಾಗೆ ಮೃತ ನವೀನ್ ಕೆಂಗೇರಿ ಉಪನಗರ ನಿವಾಸಿ. ಕಳೆದ ನವೆಂಬರ್ನಲ್ಲಿ ಮದುವೆಯಾಗಿದ್ದ ನವೀನ್ ಮೂರು ತಿಂಗಳ ಹಿಂದೆ ಕವಿಕಾದಲ್ಲಿ ಕಾಂಟ್ರ್ಯಾಕ್ಟ್ ಬೇಸ್ ಮೇಲೆ ಕೆಲಸಕ್ಕೆ ಸೇರಿದ್ದ.
ಮೃತ ನವೀನ್ ಎಲ್ಲರ ಜೊತೆ ಚೆನ್ನಾಗಿಯೇ ಇದ್ದ. ಕವಿಕಾದಲ್ಲಿ ಕೆಲಸ ಮಾಡ್ತಿದ್ದ ನವೀನ್ ಬೆಳಗ್ಗೆ 8ಗಂಟೆ ಸುಮಾರಿಗೆ ರೆಡಿಯಾಗಿ ಫ್ಯಾಕ್ಟರಿಗೆ ಹೋಗ್ತೀನಿ ಅಂತ ತನ್ನ ಅಪ್ಪನಿಗೆ ಹೇಳಿದ್ದ. ಎಲೆಕ್ಟ್ರಿಕಲ್ ಬೈಕ್ನಲ್ಲಿ ಕೆಲಸಕ್ಕೆ ಹೊರಟಿದ್ದ. ಕೆಂಗೇರಿಯಿಂದ ನಾಯಂಡಹಳ್ಳಿ ಕಡೆ ಬರ್ತಿದ್ದ ನವೀನ್ ಅದೇನಾಯ್ತೋ ನಾಯಂಡಹಳ್ಳಿ ಫ್ಲೈ ಓವರ್ ಮೇಲೆ ಬೈಕ್ ಪಾರ್ಕ್ ಮಾಡಿ ಏಕಾಏಕಿ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಯಾಕೆ ನಾಟಕ ಆಡ್ತೀರಾ? ಬೇಗ ಪಿಕ್ ಮಾಡಿ
ಎಲ್ಲರೂ ಯಾವುದೇ ಜಗಳ ಇರ್ಲಿಲ್ಲ. ಚೆನ್ನಾಗಿಯೇ ಇದ್ದ ಅಂತ ಹೇಳ್ತಿದ್ರೆ ಬ್ಯಾಟರಾಯನಪುರ ಪೊಲೀಸರಿಗೆ ನವೀನ್ನ ನಂಬರ್ಗೆ ಬಂದಿದ್ದ ಮೆಸೇಜ್ಗಳು ಅನುಮಾನ ಮೂಡಿಸಿವೆ. ಬೆಳಗ್ಗೆ ಗಂಡ ಕಾಲ್ ಪಿಕ್ ಮಾಡದಿದ್ದಾಗ ಯಾಕೆ ನಾಟಕ ಆಡ್ತೀರಾ? ಬೇಗ ಪಿಕ್ ಮಾಡಿ. ಮಾವನನ್ನ ಎಷ್ಟು ಅಂತ ನೋಯಿಸ್ತೀರಾ? ಅಂತ ಪತ್ನಿ ಮೆಸೇಜ್ ಹಾಕಿರೋದು ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಕೌಟುಂಬಿಕ ಜಗಳದಿಂದ ಆತ್ಮಹತ್ಯೆ ಮಾಡ್ಕೊಂಡಿರಬಹುದು ಎಂದು ಹೇಳಲಾಗ್ತಿದೆ.
ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ತನಿಖೆ ನಂತರವೇ ನವೀನ್ ಸಾವಿಗೆ ಕಾರಣ ಏನು ಎಂದು ಗೊತ್ತಾಗಬೇಕಿದೆ.