Saturday, July 27, 2024

ಟಗರುಪುಟ್ಟಿ ಮಾನ್ವಿತಾ ಗೆ ಕಂಕಣಭಾಗ್ಯ: ಮೈಸೂರು ಮೂಲದ ಟೆಕ್ಕಿ ಕೈಹಿಡಿಯಲಿರೋ ನಟಿ

ಬೆಂಗಳೂರು: ಕೆಂಡಸಂಪಿಗೆ ಹಾಗೂ ಟಗರು ಸಿನಿಮಾಗಳ ಖ್ಯಾತಿಯ ನಟಿ ಮಾನ್ವಿತಾ ಹರೀಶ್​ಗೆ ಕಂಕಣಭಾಗ್ಯ ಕೂಡಿಬಂದಿದೆ. ಇದೇ ಮೇ 1ಕ್ಕೆ ಮಂಗಳೂರಿನಲ್ಲಿ ಈಕೆ ಸಪ್ತಪದಿ ತುಳಿಯಲಿದ್ದು, ಈ ವಿಷಯವನ್ನು ಇನ್ವಿಟೇಷನ್ ಸಮೇತ ಸೋಶಿಯಲ್ ಮೀಡಿಯಾದಲ್ಲಿ ನಟಿ ಮಾನ್ವಿತ ಬರೆದುಕೊಂಡಿದ್ದಾರೆ.

ಮೈಸೂರು ಮೂಲದ ಅರುಣ್ ಕುಮಾರ್ ಅನ್ನೋ ಟೆಕ್ಕಿಯ ಕೈಹಿಡಿಯುತ್ತಿರೋ ಮಾನ್ವಿತಾ, ಮ್ಯಾಟ್ರಿಮೊನಿ ಮೂಲಕ ಸಂಬಂಧ ಕೂಡಿ ಬಂತು. ಅಮ್ಮ ಇದ್ದಾಗಲೇ ಅವರು ನಮ್ಮನ್ನ ಅಪ್ರೋಚ್ ಮಾಡಿದ್ರು. ಆದ್ರೆ ಅಮ್ಮ ತೀರಿಕೊಂಡ ಬಳಿಕ ಕುಟುಂಬಸ್ಥರು ನನ್ನ ಜೊತೆ ಮಾತುಕತೆ ನಡೆಸಿದ್ರು. ಎಲ್ಲವೂ ಓಕೆ ಆಗಿ ಇದೀಗ ನಾನು ಅರೇಂಜ್ ಮ್ಯಾರೇಜ್ ಆಗ್ತಿದ್ದೀನಿ ಅಂತ ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಾಜಿ ಪತ್ನಿಯಿಂದ ಮಾಜಿ ಪತಿಗೆ ಜೀವನಾಂಶ ನೀಡುವಂತೆ ಕೋರ್ಟ್​ ಆದೇಶ

ಕೆಂಡಸಂಪಿಗೆ ಚೆಲುವೆ ಮಾನ್ವಿತಾ ನಟನೆಯ ಹೊಚ್ಚ ಹೊಸ ಸಿನಿಮಾ ಅಪ್ಪ ಐ ಲವ್ ಯೂ ಸಿನಿಮಾ ಈ ವಾರ ತೆರೆಕಂಡಿದೆ.

RELATED ARTICLES

Related Articles

TRENDING ARTICLES