Saturday, May 4, 2024

ಚುನಾವಣೆ ನಂತರ ಕಾಂಗ್ರೆಸ್​ ಧೂಳಿಪಟ: ಬಿ.ವೈ ವಿಜಯೇಂದ್ರ

ಹಾವೇರಿ : ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆಯಿದೆ. ಲೋಕಸಭಾ ಚುನಾವಣೆ ಫಲಿತಾಂಶ ಬಂದ ನಂತರ ರಾಜ್ಯದ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ B.Yವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ನಾನು ಜನರ ನಾಡಿಮಿಡಿತ ಅರ್ಥ ಮಾಡಿಕೊಂಡಿದ್ದೇನೆ. ರಾಜ್ಯದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಗಾಡ ನಿದ್ದೆಯಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರ ರಹಿತ ಆಡಳಿತವನ್ನ ಮೋದಿ ಕೊಟ್ಟಿದ್ದಾರೆ. ಕೇಂದ್ರ ಕೊಟ್ಟ ಅಕ್ಕಿಗೆ ತಮ್ಮ ಫೋಟೊ ಹಾಕಿಕೊಂಡು ಪುಕ್ಸಟೆ ಪ್ರಚಾರ ತೆಗೆದುಕೊಳ್ತಿದ್ದಾರೆ.

ಇದನ್ನೂ ಓದಿ : ಮುಂದಿನ ಆರು ದಿನಗಳ ಕಾಲ ಮಳೆ ಸಾಧ್ಯತೆ!: ಹವಾಮಾನ ಇಲಾಖೆ

ಬರಗಾಲ ಇದ್ರೂ ಸಿಎಂ ಕನಿಕರ ತೋರಿಸುತ್ತಿಲ್ಲ. ಪರಿಹಾರ ಕೊಡ್ತಿಲ್ಲ, ಕೇಂದ್ರ ಸರ್ಕಾರವನ್ನ ದೂಷಿಸುವ ಕೆಲಸ ಮಾಡ್ತಿದ್ದಾರೆ. ಮಾತೃ ಹೃದಯದ ಸಿಎಂ ಇದ್ದಾಗ ಮಾತ್ರ ಜನಪರ ಕೆಲಸ ಮಾಡಲು‌ ಸಾಧ್ಯ ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ವಿಜಯೇಂದ್ರ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES