ಬೆಂಗಳೂರು : ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಅಮಾಯಕ ಜೀವ ಬಲಿಯಾಗಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ನಿನ್ನೆ ರಾತ್ರಿ 11 ಗಂಟೆಗೆ ಬಿಎಂಟಿಸಿ ಬಸ್ಗೆ ಯುವಕ ಬಲಿಯಾಗಿದ್ದಾನೆ.
ಬಿಎಂಟಿಸಿ ಬೆಂಗಳೂರಿನ ಸಂಪರ್ಕಕೊಂಡಿ. ಆದ್ರೆ, ಈ ಬಿಎಂಟಿಸಿ ಬಸ್ ಕಿಲ್ಲರ್ ಬಿಎಂಟಿಸಿಯಾಗಿ ಅಮಾಯ ಜೀವಗಳನ್ನು ಬಲಿ ಪಡೆಯುತ್ತಲೇ ಇದೆ. ಒಂದಾದ ಮೇಲೆ ಒಂದು ಆಕ್ಸಿಡೆಂಟ್ಗಳು ಆಗ್ತಾನೆ ಇವೆ.
ಅದರಲ್ಲೂ ಅಫಘಾತ ಆದಾಗೆಲ್ಲ ಸಾವು ನೋವು ಕೂಡ ಸಂಭವಿಸುತ್ತಿದೆ. ಅದೇ ರೀತಿ ಕಿಲ್ಲರ್ ಬಿಎಂಟಿಸಿ ಬಸ್ಗೆ ಯುವಕ ಬಲಿಯಾಗಿರುವ ಘಟನೆ ಶಿವಾಜಿನಗರದಲ್ಲಿ ತಡರಾತ್ರಿ 11 ಗಂಟೆಗೆ ನಡೆದಿದೆ. ಕಮಲೇಶ್ (18) ಮೃತ ದುರ್ದೈವಿಯಾಗಿದ್ದಾನೆ.
ಈ ಸುದ್ದಿ ಓದಿದ್ದೀರಾ? : ಹಜ್ ಯಾತ್ರೆಗೆ ತೆರಳಿದ್ದ ಒಂದೇ ಕುಟುಂಬದ ಮೂವರು ದಾರುಣ ಸಾವು
ಸ್ನೇಹಿತನ ಭೇಟಿ ಮಾಡಲು ಹೋಗಿದ್ದ ಕಮಲೇಶ್ ಒವರ್ ಟೆಕ್ ಮಾಡಲು ಹೋಗಿ ಬಸ್ಗೆ ಗುದ್ದಿದ್ದಾರೆ. ಸ್ಥಳೀಯರು ಕಮಲೇಶನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಶಿವಾಜಿ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.