ಬೆಂಗಳೂರು : ಸೊಂಟದಲ್ಲಿ ಗನ್ ಇಟ್ಕೊಂಡು ಸಿಎಂ ಸಿದ್ದರಾಮಯ್ಯರಿಗೆ ಹಾರ ಹಾಕಿದ ಪ್ರಕರಣ ಸಂಬಂಧ ಆರೋಪಿ ರಿಯಾಜ್ ಅಹಮದ್ ಪೊಲೀಸರ ಮುಂದೆ ಹಾಜರಾಗಿದ್ದಾನೆ.
ಸಿದ್ದಾಪುರ ಪೊಲೀಸರು ರಿಯಾಜ್ ಅಹಮದ್ನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಬಳಿಕ ಮಾತನಾಡಿದ ಈತ, ಹಮಾರ ಸಾಬ್ ಉಪ್ಪರ್ ಸೆ ಬುಲಾಯ. ನಮ್ಮ ಸಾಹೇಬ್ರು ಮೇಲೆ ಬಾ ಅಂದ್ರು ಸಾರ್. ಹಾಗಾಗಿ ವೆಹಿಕಲ್ ಮೇಲೆ ಹೋಗಿ ಸಿಎಂ ಸಾಹೇಬ್ರಿಗೆ ಹಾರ ಹಾಕ್ದೆ ಎಂದು ಹೇಳಿದ್ದಾನೆ.
ನಮ್ಮ ದೇವರಾಜ್ ಸಾಹೇಬ್ರು ಮೇಲೆ ಕರೆದ್ರು ಅಂತ ಹೋದೆ. ಇಲ್ಲ ಅಂದರೆ ನಾನು ಸಿಎಂ ಬಳಿ ಹೋಗ್ತಿರಲಿಲ್ಲ. ನನ್ನ ಪಾಡಿಗೆ ನಾನು ಸಿಎಂ ಸಿದ್ದರಾಮಯ್ಯ ಪ್ರಚಾರದ ವೆಹಿಕಲ್ ಬಂದಾಗ ಸೈಡಲ್ಲಿ ನಿಂತ್ಕೊಂಡು ನೋಡ್ತಿದ್ದೆ. ನಂಗೆ ಲೈಫ್ ಥ್ರೆಟ್ ಇದೆ ಸಾರ್. ಹೀಗಾಗಿ, ಪ್ರತಿದಿನ ಗನ್ ಇಟ್ಕೊಂಡೆ ಹೊರಗೆ ಬರ್ತೀನಿ ಎಂದು ತಿಳಿಸಿದ್ದಾನೆ.
ಸಿಎಂ ಸಾಬ್ ಮುಂದೆ ಗನ್ ಪ್ರದರ್ಶನ ಮಾಡಬೇಕು ಎನ್ನುವ ಉದ್ದೇಶ ನಂಗಿರಲಿಲ್ಲ. ವೆಹಿಕಲ್ ಮೇಲೇರಿದಾಗ ಆಕಸ್ಮಿಕವಾಗಿ ಸೊಂಟದಲ್ಲಿದ್ದ ಗನ್ ಕಂಡಿದೆ. ನಾನು ಗನ್ ಶೋ ಮಾಡಿಲ್ಲ ಸಾರ್ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ರಿಯಾಜ್ ಅಹಮದ್ನ ಹೇಳಿಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.