ಹಾಸನ : ತೆಂಗಿನ ಗರಿಗಳನ್ನು ಕತ್ತರಿಸಲು ಮರ ಏರಿದ ಯುವಕ ಬಿಸಿಲ ತಾಪಕ್ಕೆ ತೆಂಗಿನ ಮರದಲ್ಲೇ ಪ್ರಜ್ಞೆತಪ್ಪಿ ಮರದಲ್ಲೇ ನೇತಾಡಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ನವೀನ್ (21) ಪ್ರಜ್ಞೆತಪ್ಪಿ ಮರದಲ್ಲೇ ನೇತಾಡಿದ ಯುವಕ, ಗ್ರಾಮದ ಮಂಜು ಎಂಬುವವರಿಗೆ ಸೇರಿದ ತೆಂಗಿನಮರದ ಗರಿಗಳನ್ನು ಕತ್ತರಿಸಲು ನವೀನ್ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಮರವೇರಿದ್ದ, ತೆಂಗಿನ ಗರಿಗಳನ್ನು ಕತ್ತರಿಸಿ ಮರದಿಂದ ಕೆಳಗೆ ಇಳಿಯುವ ವೇಳೆ ಬಿಸಿಲಿನ ತಾಪಕ್ಕೆ ಪ್ರಜ್ಞಾಹೀನನಾಗಿ ಸುಮಾರು 50 ಅಡಿ ಎತ್ತರದಲ್ಲಿ 45 ನಿಮಿಷಗಳ ಕಾಲ ತೆಂಗಿನ ಮರದಲ್ಲೇ ನೇತಾಡಿದ್ದಾನೆ.
ಇದನ್ನೂ ಓದಿ: ಸಂಸದೆ ಶೋಭಾ ಕರಂದ್ಲಾಜೆ ಕಾರು ಅಪಘಾತ : ಬೈಕ್ ಸವಾರ ಸಾವು
ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ, ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನವೀನ್ನನ್ನು ರಕ್ಷಿಸಿದ್ದಾರೆ. ಸದ್ಯ ನವೀನ್ ಸಾವಿನ ದವಡೆಯಿಂದ ಪಾರಾಗಿ ನಿಟ್ಟುಸಿರು ಬಿಟ್ಟದ್ದಾನೆ.