Monday, May 20, 2024

ಸೊಕ್ಕಿನ ಯಡಿಯೂರಪ್ಪರ ಮಕ್ಕಳನ್ನು ಸೋಲಿಸಬೇಕು : ಈಶ್ವರಪ್ಪ

ಶಿವಮೊಗ್ಗ : ಸೊಕ್ಕಿನ ಯಡಿಯೂರಪ್ಪನವರ ಮಕ್ಕಳನ್ನು ಸೋಲಿಸಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ನಾಯಕ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ವೀಕ್ ಕ್ಯಾಂಡಿಟೇಟ್ ಇರಲಿ ಅಂತ ಗೀತಾ ಶಿವರಾಜ್ ಕುಮಾರ್ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಹೇಳಿದರು.

ಬಿ.ವೈ. ವಿಜಯೇಂದ್ರ ದುಡ್ಡು ಸುರಿದು ಗೆದ್ದಿದ್ದು. ಹೊಂದಾಣಿಕೆ ರಾಜಕಾರಣದ ಮೂಲಕ ವಿಜಯೇಂದ್ರ ಗೆದ್ದಿದ್ದಾನೆ. ಸೊಕ್ಕಿನ ಯಡಿಯೂರಪ್ಪನ ಮಕ್ಕಳನ್ನು ಸೋಲಿಸಬೇಕು. ಐದು ಬಾರಿ ನನ್ನ ಎಂಎಲ್ಎ ಮಾಡಿದ್ದೀರಿ. ಧರ್ಮ, ಅಧರ್ಮದ ವಿರುದ್ಧ ಈ ಚುನಾವಣೆ. ಧರ್ಮ, ನ್ಯಾಯಕ್ಕೆ ಮತ ಸಿಗುತ್ತೋ? ದುಡ್ಡಿಗೆ ನ್ಯಾಯ ಸಿಗುತ್ತಾ? ನೋಡೋಣ ಎಂದು ಸವಾಲ್ ಹಾಕಿದರು.

ಧರ್ಮದ ಈಶ್ವರಪ್ಪಗೆ ನ್ಯಾಯ ಸಿಗುತ್ತದೆ

ಅಧರ್ಮ ನಾಶ ಆಗುತ್ತೆ, ಧರ್ಮದ ಈಶ್ವರಪ್ಪಗೆ ನ್ಯಾಯ ಸಿಗುತ್ತದೆ. ಇವತ್ತೇ ಚುನಾವಣೆ ಆದರೆ ಒಂದು ಲಕ್ಷ ಅಂತರದಲ್ಲಿ ಗೆಲ್ಲುತ್ತೇನೆ. ಎಲ್ಲಾ ಸಮಾಜದವರಿಗೆ ಹಣ ಕೊಟ್ಟಿದ್ದೇನೆ. ಜೆಡಿಎಸ್ ನಾಮಕಾವಸ್ತೆಗೆ ರಾಘವೇಂದ್ರ ಪರವಾಗಿದ್ದಾರೆ. ಹೋಲ್ ಸೇಲ್​ನಲ್ಲಿ ಜೆಡಿಎಸ್ ನನ್ನೊಂದಿಗೆ ಇದೆ. ಈಶ್ವರಪ್ಪನವರದ್ದು ಕಮಲ ಗುರತು ಅಲ್ಲ ಅಂತ ಹೇಳಬೇಕು. ಗಣಪತಿ, ಶನೇಶ್ವರ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ಚುನಾವಣೆ ನಿಂತೇ ನಿಲ್ಲುತ್ತೇನೆ ಎಂದು ಕಿಡಿಕಾರಿದರು.

ಯಡಿಯೂರಪ್ಪ ಒಬ್ಬರೇನಾ ಲಿಂಗಾಯತ ನಾಯಕ?

ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದವನು ನಾನು. ಯಾರಿಗಾದರೂ ಅನ್ಯಾಯ ಮಾಡಿದ್ರೆ ನನ್ನ ಮಕ್ಕಳಿಗೆ ಹಾಳು ಮಾಡಲಿ. ಹಿಂದುತ್ವಕ್ಕಾಗಿ ದುಡಿದವರನ್ನ ಮೂಲೆಗುಂಪು ಮಾಡಿದ್ರು. ಸಿ.ಟಿ. ರವಿ, ಪ್ರತಾಪ್ ಸಿಂಹ, ಯತ್ನಾಳ್ ಅವರಿಗೆ ಅನ್ಯಾಯ ಮಾಡಿದ್ದಾರೆ. ಹಿಂದುತ್ವ ರಾಜ್ಯದಲ್ಲಿ ಉಳಿಯಬೇಕು. ಯಡಿಯೂರಪ್ಪ ಒಬ್ಬರೇನಾ ಲಿಂಗಾಯತ ನಾಯಕ? ಎಂದು ಕೆ.ಎಸ್. ಈಶ್ವರಪ್ಪ ಹರಿಹಾಯ್ದರು.

RELATED ARTICLES

Related Articles

TRENDING ARTICLES