Sunday, May 19, 2024

ಕೇಳಿದ್ದು ಅನುದಾನ, ಮಾಡಿದ್ದು ಅವಮಾನ : ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು : ಕೇಂದ್ರ ಸರಕಾರದ ನೀತಿಗಳಿಂದಾಗಿ ರಾಜ್ಯಕ್ಕೆ ಕಳೆದ ಐದು ವರ್ಷದಲ್ಲಿ 1.85 ಲಕ್ಷ ಕೋಟಿ ರೂ ಕೈತಪ್ಪಿದೆ. ಪ್ರತಿವರ್ಷ ಸುಮಾರು 52 ಸಾವಿರ ಕೋಟಿ ರೂ ನಷ್ಟ ಅನುಭವಿಸುವಂತಾಗಿದೆ. ನಾವು ನಮಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಕೇಳಿದರೆ ಕೇಂದ್ರ ಸರಕಾರ ಅವಮಾನ ಮಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಇದನ್ನೂ ಓದಿ: RSS ಬಗ್ಗೆ ತಿಳಿದುಕೊಳ್ಳದೆ ಮಾತನಾಡಿದ್ದೇನೆ, ಕ್ಷಮಿಸಿ : ಪ್ರಜ್ವಲ್​ ರೇವಣ್ಣ

ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯಗಳ ಬಗ್ಗೆ ಚರ್ಚಿಸಲು ಬಹಿರಂಗ ಸವಾಲು ಹಾಕಿದ್ದ. ಸಚಿವರು, ಜಾಗೃತ ಕರ್ನಾಟಕ, ರೈತ ಸಂಘ ಮತ್ತು ಕನ್ನಡಪರ ಸಂಘಟನೆಗಳು ಗಾಂಧಿ ಭವನದಲ್ಲಿ ಆಯೋಜಿಸಿದ್ದ GST, SS, ತೆರಿಗೆ, ಬರ ಪರಿಹಾರ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಎಂಬ ಬಹಿರಂಗ ಸಭೆಯಲ್ಲೇ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಒಂದು ಕುರ್ಚಿಯನ್ನು ಹಾಕಿ ಕಾದು ಕುಳಿತಿದ್ದರು.

ಅಷ್ಟರಲ್ಲಿ ಅವರು ಪ್ರತ್ಯೇಕ ಪತ್ರಿಕಾಗೋಷ್ಠಿ ಮೂಲಕ ಕೇಂದ್ರ ಕೊಟ್ಟ ತೆರಿಗೆ ಪಾಲಿನ ವಿವರಣೆ ನೀಡಿದ್ದರಿಂದ ಕೃಷ್ಣ ಬೈರೇಗೌಡ ಒಂಟಿಯಾಗಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

RELATED ARTICLES

Related Articles

TRENDING ARTICLES