Monday, May 20, 2024

ನನ್ನ ಗಂಡಸ್ತನ ಕಳೆದು ಹೋಗಿದ್ದೇ ರವೀಂದ್ರ ಶ್ರೀಕಂಠಯ್ಯ ಮನೆಯಲ್ಲಿ : ಶಾಸಕ ಕದಲೂರು ಉದಯ್ ವಿವಾದಾತ್ಮಕ ಹೇಳಿಕೆ

ಮಂಡ್ಯ : ರವೀಂದ್ರ ಶ್ರೀಕಂಠಯ್ಯ ಹಾಗೂ ಶಾಸಕ ಕದಲೂರು ಉದಯ್ ನಡುವಿನ ಟಾಕ್ ವಾರ್ ತಾರಕಕ್ಕೇರಿದೆ. ನನ್ನ ಗಂಡಸ್ತನ ಕಳೆದು ಹೋಗಿದ್ದೇ ರವೀಂದ್ರ ಶ್ರೀಕಂಠಯ್ಯ ಮನೆಯಲ್ಲಿ ಎಂದು ಮದ್ದೂರು ಶಾಸಕ ಕದಲೂರು ಉದಯ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಶಾಸಕ ಕದಲೂರು ಉದಯ್ ಅವರು ಗೋವಾ, ಶ್ರೀಲಂಕಾದಲ್ಲಿ ಗಂಡಸ್ತನ ಕಳೆದುಕೊಂಡು ಬಂದಿದ್ದಾರೆ ಎಂದು ರವೀಂದ್ರ ಶ್ರೀಕಂಠಯ್ಯ ಕಿಡಿಕಾಡಿದ್ದರು. ಶ್ರೀಕಂಠಯ್ಯ ಹೇಳಿಕೆಗೆ ಇದೀಗ ಮಂಡ್ಯದ ಮದ್ದೂರಿನಲ್ಲಿ ಕದಲೂರು ಉದಯ್ ಪ್ರತಿಕ್ರಿಯೆ ನೀಡಿದ್ದಾರೆ.

ನಾನು ಆ ರೀತಿ ಎಲ್ಲೂ ಗಂಡಸ್ತನ ಕಳೆದುಕೊಂಡು ಬಂದಿಲ್ಲ. ಹಾಗೇನಾದರೂ ಗಂಡಸ್ತನ ಕಳೆದುಕೊಂಡಿದ್ದರೆ ಅದು ರವೀಂದ್ರ ಶ್ರೀಕಂಠಯ್ಯ ಮನೆಯಲ್ಲೇ. ಇದನ್ನ ಬೇಕಿದ್ದರೆ ಅವ್ರನ್ನೇ ಕೇಳಿ, ಒಂದು ಸರಿ ಖಚಿತಪಡಿಸಿಕೊಳ್ಳಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದ ಹಿರಿಮೆಯನ್ನು ಕಳೆಯುವ ಹೇಳಿಕೆ

ಉದಯ್ ಹೇಳಿಕೆಗೆ ಮಾಜಿ ಸಚಿವ ಸಿಎಸ್ ಪುಟ್ಟರಾಜು, ಮಾಜಿ ಶಾಸಕ ಸುರೇಶ್‌ಗೌಡ ತಿರುಗೇಟು ನೀಡಿದ್ದಾರೆ. ಉದಯ್ ಮಂಡ್ಯದ ಹಿರಿಮೆಯನ್ನು ಕಳೆಯುವ ಹೇಳಿಕೆ ಕೊಡ್ತಾ ಇದ್ದಾರೆ. ಸುಸಂಸ್ಕೃತ ಕುಟುಂಬದಿಂದ ಬಂದ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಉದಯ್ ನಾಲಿಗೆ ಹರಿಬಿಟ್ಟಿದ್ದಾರೆ. ಕಾಂಗ್ರೆಸ್ ನಾಯಕರು ತಲೆ ತಗ್ಗಿಸುವ ಹೇಳಿಕೆ ಇದು ಎಂದು ಕಿಡಿಕಾರಿದ್ದಾರೆ.

ಮಂಡ್ಯ‌ದಲ್ಲಾಗುವ ಅನಾಹುತಕ್ಕೆ ಅವರೇ ಹೊಣೆ

ಉದಯ್ ಎಷ್ಟರ ಮಟ್ಟಿಗೆ ಅಕ್ಕ-ತಂಗಿಯರ ಜೊತೆ ಹುಟ್ಟಿದ್ದಾರೆ. ರಾಜಕೀಯ ಮಾಡುತ್ತೇವೆ ಎಂದು ಹೆಂಡತಿ ಮಕ್ಕಳನ್ನು ಬೀದಿಗೆ ತರಬಾರದು. ಗಂಡಸ್ತನ ಮಾತನ್ನು ಮೊದಲು‌ ಹೇಳಿದ್ದು ಉದಯ್. ಇದೀಗ ಅವಾಚ್ಯವಾಗಿ ಅವರು ಮಾತಾಡಿದ್ದಾರೆ. ಕಾಂಗ್ರೆಸ್ ಅವರು ಉದಯ್‌ನನ್ನು ಅದ್ದುಬಸ್ತಲ್ಲಿ ಇಟ್ಟುಕೊಳ್ಳಲಿಲ್ಲ ಅಂದ್ರೆ ಮಂಡ್ಯ‌ದಲ್ಲಿ ಆಗುವ ಅನಾಹುತಗಳಿಗೆ ಅವರೇ ಹೊಣೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹೆಂಡತಿ ಇನ್ನೂ ಮನೆಯಲ್ಲಿ ಇಟ್ಟುಕೊಂಡಿದ್ದಾರಾ?

ಗಂಡಸ್ತನದ ಮಾತು ಹೇಳಿದ ಮೇಲೆ ಟೀಕೆ ಟಿಪ್ಪಣಿ ಎದುರಿಸಬೇಕು. ರವೀಂದ್ರ ಶ್ರೀಕಂಠಯ್ಯ ಕುಟುಂಬದ ಲೈವ್ ಬ್ಯಾಂಡ್ ನಡೆಸಿಲ್ಲ. ಉದಯ್ ಹೇಳಿಕೆ ನೋಡಿ ಅವರ ಹೆಂಡತಿ ಇನ್ನೂ ಮನೆಯಲ್ಲಿ ಇಟ್ಟುಕೊಂಡಿದ್ದಾರಾ? ನಿನಗೆ ಅಷ್ಟೊಂದು ಗಂಡಸ್ತನ ಇದ್ಯಾ ಬಾ ನೋಡೋಣಾ. ಮನೆವರೆಗೆ ಬೇಡ, ಬೀದಿವರೆಗೆ ಬಾ ಗಂಡಸ್ತನ ಏನು ಅಂತ ತೋರಿಸುತ್ತೇವೆ. ನಮ್ಮ ಹೆಣ್ಣು ಮಕ್ಕಳ ವಿಚಾರಕ್ಕೆ ಬಂದ್ರೆ ನಾವು ಗಂಡಸರು ಎನ್ನೋದನ್ನು ತೋರಿಸಬೇಕಾಗುತ್ತೆ ಎಂದು ಜೆಡಿಎಸ್ ನಾಯಕರು ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES